ಕಾಂಗ್ರೆ​ಸ್‌ಗೆ ಮತ ನೀಡಿದರೆ ತಾಲಿ​ಬಾನ್‌ ಸರ್ಕಾರ ಮಾಡ್ತಾ​ರೆ; ರಾಯಚೂರಲ್ಲಿ ಗರ್ಜಿಸಿದ ಸಿಂಹ

Published : May 06, 2023, 04:11 PM IST
ಕಾಂಗ್ರೆ​ಸ್‌ಗೆ ಮತ ನೀಡಿದರೆ ತಾಲಿ​ಬಾನ್‌ ಸರ್ಕಾರ ಮಾಡ್ತಾ​ರೆ; ರಾಯಚೂರಲ್ಲಿ ಗರ್ಜಿಸಿದ ಸಿಂಹ

ಸಾರಾಂಶ

ಓಸಾಮಾಬಿನ್‌ ಲಾಡೆನ್‌, ಮುಲ್ಲ ಓಮರ್‌ಗಳಿಗೆ ಅಧಿಕಾರ ಕೊಟ್ಟರೆ ರಾಜ್ಯ​ದಲ್ಲಿ ತಾಲಿ​ಬಾನ್‌ ಸರ್ಕಾ​ರ ಆಡ​ಳಿ​ತಕ್ಕೆ ತರು​ತ್ತಾರೆ ಎಂದು ಸಂಸದ ಪ್ರತಾಪ ಸಿಂಹ ಕಾಂಗ್ರೆಸ್ ವಿರುದ್ಧ ಗುಡು​ಗಿ​ದ​ರು.

ರಾಯ​ಚೂರು (ಮೇ.6) : ಓಸಾಮಾಬಿನ್‌ ಲಾಡೆನ್‌, ಮುಲ್ಲ ಓಮರ್‌ಗಳಿಗೆ ಅಧಿಕಾರ ಕೊಟ್ಟರೆ ರಾಜ್ಯ​ದಲ್ಲಿ ತಾಲಿ​ಬಾನ್‌ ಸರ್ಕಾ​ರ ಆಡ​ಳಿ​ತಕ್ಕೆ ತರು​ತ್ತಾರೆ ಎಂದು ಸಂಸದ ಪ್ರತಾಪ ಸಿಂಹ ಗುಡು​ಗಿ​ದ​ರು.

ತಾಲೂಕಿನ ಯಾಪಲದಿನ್ನಿ ಗ್ರಾಮ​ದಲ್ಲಿ ಶುಕ್ರ​ವಾರ ಹಮ್ಮಿ​ಕೊಂಡಿದ್ದ ರಾಯ​ಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪ​ರಾಜು ಹವ​ಲ್ದಾರ್‌ ಅವರ ಪರ​ವಾದ ಪ್ರಚಾರ ಸಮಾ​ವೇಶ​ದಲ್ಲಿ ಮಾತ​ನಾ​ಡಿ​ದ ಅವರು, ಡಿ.ಕೆ.ಶಿವ​ಕು​ಮಾರ ರಾಮ​ನ​ಗ​ರ​ದ​ಲ್ಲಿದ್ದ ಶಿವ​ನ​ ಬೆ​ಟ್ಟವನ್ನು ಯೇಸು ಬೆಟ್ಟಮಾಡಿ​ದರು. ಸಿದ್ದ​ರಾ​ಮಯ್ಯ ಟಿಪ್ಪು​ವಿನ ಜನ್ಮಕುಂಡಲಿ ಬರೆ​ಸಿ​ದ್ದಾರೆ. ಇದೀಗ ಕಾಂಗ್ರೆಸ್‌ ಪ್ರಣಾ​ಳಿ​ಕೆ​ಯಲ್ಲಿ ಬಜ​ರಂಗ​ದಳ ನಿಷೇ​ಧಿ​ಸು​ವು​ದಾಗಿ ಹೇಳಿ​ದ್ದಾರೆ. ಅದ​ಕ್ಕಾ​ಗಿಯೇ ಡಿಕೆಶಿ ಅವರ ಹೆಲಿ​ಕಾ​ಪ್ಟ​ರ್‌ಗೆ ಹದ್ದು ಹೊಡೆ​ದಿದೆ. ಸಿದ್ದ​ರಾ​ಮ​ಯ್ಯನ ಕಾರಿನ ಮೇಲೆ ಕಾಗೆ ಕುಳಿ​ತಿದೆ. ಇದು ಕಾಂಗ್ರೆಸ್‌ ನಾಯ​ಕ​ರನ್ನು ಕಂಡರೆ ಪ್ರಾಣಿ-ಪಕ್ಷಿ​ಗ​ಳಿಗೂ ಆಗಲ್ಲ ಎನ್ನು​ವು​ದನ್ನು ತಿಳಿ​ಯು​ತ್ತಿದೆ ಎಂದು ಡಿ.ಕೆ ಶಿವ​ಕು​ಮಾರ್‌ ಸಿದ್ದ​ರಾ​ಮ​ಯ್ಯ(Siddaramaiah)ಗೆ ಟಾಂಗ್ ನೀಡಿ​ದರು.

KARNATAKA ELECTION 2023: ಮಸ್ಕಿ ಕ್ಷೇತ್ರ ವಶಕ್ಕೆ ಮುಂದು​ವ​ರಿದ ಗೌಡರ ಕದನ

ಸಿದ್ದರಾಮಯ್ಯ ವರುಣಾದಲ್ಲಿ ಮನೆಗೆ ಹೋಗುವುದು ನಿಶ್ಚಿತ. ಸ್ವಂತ ಕ್ಷೇತ್ರ​ದಲ್ಲಿ ಗೆಲ್ಲಲು ತಿಣ​ಕಾ​ಡು​ತ್ತಿ​ರುವ ಅವರು ರಾಜ್ಯದ ಸಿಎಂ ಆಗಲು ಹೊರ​ಟಿ​ದ್ದಾರೆ. ಹಿಂದೆ ವರು​ಣಾ​ದಲ್ಲಿ ನಾಮ​ಪತ್ರ ಹಾಕಿದ ನಂತರ ಬರು​ವು​ದಿಲ್ಲ ಎಂದಿದ್ದ ಸಿದ್ದ​ರಾ​ಮಯ್ಯ ಬಿಜೆಪಿ ಅಭ್ಯರ್ಥಿ ವಿ.ಸೋ​ಮಣ್ಣ ಅವ​ರಿಗೆ ಟಿಕೆಟ್‌ ಸಿಕ್ಕ ನಂತರ ಸೋಲಿನ ಭೀತಿ ಶುರು​ವಾ​ಗಿದೆ ಎಂದು ಹೇಳಿ​ದ​ರು.

ಕಾಂಗ್ರೆಸ್‌ನವರು ಪುಕ್ಕಟೆ ಯೋಜನೆಗಳು ಬಗ್ಗೆ ಮಾತನಾಡುತ್ತಾರೆ ಹೊರತು ಅವರಿಗೆ ದೂರದೃಷ್ಟಿಯಿಲ್ಲ. ಸಿದ್ದರಾಮಯ್ಯರನ್ನು ಮೈಸೂರು ಜನರೆ ನಂಬುವುದಿಲ್ಲ. ಹಾಲಿ ಸಿಎಂರನ್ನು 35 ಸಾವಿರ ಮತಗಳ ಅಂತರದಿಂದ ಜನರು ಗೆಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾ​ರಂಭ​ದಲ್ಲಿ ಕೇಂದ್ರ ಸಚಿವ ಡಾ.ಮ​ನ​ಸುಖ ಮಾಂಡ​ವೀಯ, ಬಿಜೆಪಿ ರಾಷ್ಟ್ರೀಯ ಉಪಾ​ಧ್ಯಕ್ಷೆ, ರಾಜ್ಯ ಉಸ್ತು​ವಾರಿ ಡಿ.ಕೆ.​ಅ​ರು​ಣಾ, ಅಭ್ಯರ್ಥಿ ತಿಪ್ಪ​ರಾಜು ಹವ​ಲ್ದಾ​ರ,​ಸಂಸದ ರಾಜಾ ಅಮ​ರೇ​ಶ್ವರ ನಾಯಕ ಮಾತ​ನಾ​ಡಿ​ದರು.

ದೇವದುರ್ಗ: ಜೆಡಿಎಸ್‌ ಪ್ರಚಾರ ವಾಹನ ಜಖಂಗೊಳಿಸಿದ ಬಿಜೆಪಿ ಕಾರ್ಯಕರ್ತರು!

ಈ ಸಂದ​ರ್ಭ​ದಲ್ಲಿ ಮಾಜಿ ಎಂಎಲ್ಸಿ ಎನ್‌.​ಶಂಕ್ರಪ್ಪ, ಬಿಜೆಪಿ ಜಿಲ್ಲಾ​ಧ್ಯಕ್ಷ ರಮಾ​ನಂದ ಯಾದವ್‌, ಎಪಿ​ಎಂಸಿ ಅಧ್ಯಕ್ಷ ಅಚು​ತ​ರೆಡ್ಡಿ, ಮುಖಂಡ​ರಾದ ಎನ್‌.​ಕೇ​ಶ​ವ​ರೆಡ್ಡಿ, ಎಚ್‌.​ಜ​ಗ​ದೀಶ ಸೇರಿ​ದಂತೆ ಪಕ್ಷದ ವಿವಿಧ ಮೋರ್ಚಾ​ಗಳ ಪ್ರಮು​ಖ​ರು, ​ಕಾ​ರ್ಯ​ಕ​ರ್ತರು, ಅಪಾ​ರ ​ಸಂಖ್ಯೆ​ಯಲ್ಲಿ ಜನರು ಭಾಗ​ವ​ಹಿ​ದ್ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋದಿ ವಿರುದ್ಧ ತೊಡೆ ತಟ್ಟಿದ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಸಾಥ್ ನೀಡಿ ಪತ್ರ ಬರೆದ ಸಿಎಂ ಸಿದ್ದರಾಮಯ್ಯ!
Phone Tapping: ದೇವರಾಣೆ ಮಾಡಿ, ಡಿಕೆಶಿ ಫೋನ್ ಟ್ಯಾಪ್ ಮಾಡಿಲ್ಲವ? ಸಿಎಂಗೆ ಚಲವಾದಿ ಸವಾಲು, ಕಲಬುರಗಿ ಪ್ರಬುದ್ಧರ ಮೇಲೂ ವಾಗ್ದಾಳಿ!