ನನ್‌ ಪಾಡಿಗೆ ನಾನಿರ್ತೀನಿ, ನಿಮ್‌ ಪಾಡಿಗೆ ನೀವಿರಿ: ಶಿವಲಿಂಗೇಗೌಡ

Published : Feb 13, 2023, 05:40 AM IST
ನನ್‌ ಪಾಡಿಗೆ ನಾನಿರ್ತೀನಿ, ನಿಮ್‌ ಪಾಡಿಗೆ ನೀವಿರಿ: ಶಿವಲಿಂಗೇಗೌಡ

ಸಾರಾಂಶ

ನನ್ನ ಪಾಡಿಗೆ ನಾನಿರ್ತೇನೆ, ನಿಮ್ಮ ಪಾಡಿಗೆ ನೀವಿರಿ ಅಷ್ಟೆ. ನಾನು ಏನೂ ಮಾತನಾಡಲ್ಲ, ನೀವು ಏನೂ ಮಾತಾಡಬೇಡಿ ಅಷ್ಟೆಎಂದು ಶಾಸಕ ಶಿವಲಿಂಗೇಗೌಡ ಜೆಡಿಎಸ್‌ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. 

ಅರಸೀಕೆರೆ (ಫೆ.13): ನನ್ನ ಪಾಡಿಗೆ ನಾನಿರ್ತೇನೆ, ನಿಮ್ಮ ಪಾಡಿಗೆ ನೀವಿರಿ ಅಷ್ಟೆ. ನಾನು ಏನೂ ಮಾತನಾಡಲ್ಲ, ನೀವು ಏನೂ ಮಾತಾಡಬೇಡಿ ಅಷ್ಟೆಎಂದು ಶಾಸಕ ಶಿವಲಿಂಗೇಗೌಡ ಜೆಡಿಎಸ್‌ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಮೇಲಿನ ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು ಅವರೇನಾದರೂ ಬಿಚ್ಚಿದ್ರೆ ನಾವೂ ಬಿಚ್ಚಬೇ​ಕಾ​ಗು​ತ್ತೆ. ಹಾಲು ಉತ್ಪಾದಕರ ಸಂಘದವರನ್ನು ಪಂಚ​ರತ್ನ ಯಾತ್ರೆ ಸಭೆಗೆ ಕರೆದುಕೊಂಡು ಬರಲು ಯಾರು ಹೇಳಿದ್ದು? ಡಿಸಿಸಿ ಬ್ಯಾಂಕ್‌ ಸೂಪ​ರ್‌​ವೈ​ಸರ್‌ ದುಡ್ಡು ಹಂಚಲೆಂದೇ ಇರೋದಾ? ಹೇಗೆ ಜನ​ರನ್ನು ಕರೆ​ದು​ಕೊಂಡು ಬಂದರು ಎಂದು ಹೇಳಲಾ ಎಂದು ಪ್ರಶ್ನಿ​ಸಿ​ದ​ರು. ಯಾರು ಏನೇ ಹೇಳಿದರೂ ಅರಸೀಕೆರೆ ಕ್ಷೇತ್ರದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆ ಕರೆಯುತ್ತೇನೆ. ಅವ​ರು ಏನು ಹೇಳು​ತ್ತಾರೋ ಅದೇ ರೀತಿ ನನ್ನ ಮುಂದಿನ ನಿರ್ಧಾರ ತೆಗೆ​ದು​ಕೊ​ಳ್ಳು​ತ್ತೇ​ನೆ ಎಂದ​ರು.

ನಾನು ಕಾಂಗ್ರೆಸ್‌ ಸೇರು​ತ್ತೇ​ನೆಂಬ ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮ​ಯ್ಯ ಹೇಳಿಕೆಗೆ ಸಂಬಂಧಿಸಿ ಪ್ರತಿ​ಕ್ರಿ​ಯಿ​ಸಿದ ಶಿವ​ಲಿಂಗೇ​ಗೌಡ, ಅವರ ಹೇಳಿಕೆ ಕುರಿತು ನನಗೆ ಮಾಹಿತಿ ಇಲ್ಲ. ಇಷ್ಟೆಲ್ಲ ಆದ ಮೇಲೆ ನಾನು ಪಕ್ಷ ಬಿಡಬಹುದು ಎಂದು ಸ್ವಾಗತ ಮಾಡಿ​ರ​ಬ​ಹುದು. ಅನಾರೋಗ್ಯ ಪೀಡಿತ ಮಾಜಿ ಪ್ರಧಾನಿ ಎಚ್‌.​ಡಿ.ದೇವೇಗೌಡರನ್ನು ನೋಡಲು ಎರಡು ದಿನ ಹೋಗಿದ್ದೆ. ಫಿಜಿಯೋಥೆರಪಿಯಲ್ಲಿ ಇದ್ದ ಕಾರಣ ಸಿಗಲಿಲ್ಲ. ದೂರ​ವಾಣಿ ಮೂಲಕ ಮಾತ​ನಾ​ಡಿ​ದರು. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಬೇಜಾರ್‌ ಆಯ್ತು ಅಷ್ಟೆಅಂದೆ. ಎರಡ್ಮೂರು ಸಾರಿ ಅವರ ಬಳಿ ನೇರ​ವಾಗಿ ಮಾತ​ನಾ​ಡಲು ಯ​ತ್ನಿ​ಸಿದೆ, ಆಗಲಿಲ್ಲ ಎಂದ​ರು.

ಯಶ್‌, ರಿಷಬ್‌ ಸೇರಿ ಗಣ್ಯರಿಂದ ಮೋದಿ ಭೇಟಿ: ರಾಜಭವನದಲ್ಲಿ ಅನೌಪಚಾರಿಕ ಮಾತುಕತೆ

ನನ್ನನ್ನು ಪಕ್ಷದಿಂದ ಹೊರಕಳಿಸಲು ಜೆಡಿಎಸ್‌ ಸಂಚು: ನಾನಿನ್ನೂ ಜೆಡಿಎಸ್‌ ಪಕ್ಷದ ಶಾಸಕ. ಆದರೆ ಫೆ.9ರಂದು ಅರ​ಸೀ​ಕೆ​ರೆ​ಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿದ್ದಾರೆ. ಆ ಸಭೆಗೆ ನನ್ನನ್ನೂ ಆಹ್ವಾನಿಸಿಲ್ಲ. ಜೊತೆಗೆ ಭಾನು​ವಾರ ಹಮ್ಮಿ​ಕೊ​ಳ್ಳ​ಲಾ​ಗಿ​ರುವ ಸಭೆಗೂ ಆಹ್ವಾನ ನೀಡಿ​ಲ್ಲ. ನಾನೇ ಪಕ್ಷ​ದಿಂದ ಹೊರ​ಹೋ​ಗು​ವಂತೆ ಸಂಚು ರೂಪಿ​ಸ​ಲಾ​ಗು​ತ್ತಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದ್ದಾರೆ. ಶನಿ​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ ಸೇರ್ಪಡೆ ಕುರಿತು ಮಾತು​ಕತೆ ನಡೆದದ್ದು ನಿಜ. ಹಲವು ಸನ್ನಿವೇಶ ಹಾಗೂ ನಿದರ್ಶನಗಳನ್ನು ನೀಡಿ ನಾನೇನಾದರೂ ಕಾಂಗ್ರೆಸ್‌ ಪಕ್ಷಕ್ಕೆ ಹೋದಲ್ಲಿ ಕನಿಷ್ಠ ಸಾಂಪ್ರದಾಯಿಕ ಮತಗಳು ಮತ್ತು ನಮ್ಮ ಅಭಿವೃದ್ಧಿ ಕಾರ‍್ಯಗಳಿಗೆ ಮೆಚ್ಚಿ ಮತ ಬೀಳುತ್ತದೆಂದು ಹೇಳಿದ್ದೆ. 

ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ಎಂದೋ ಹಿತೈಷಿಗಳೊಂದಿಗೆ ಮಾತನಾಡಿದ ಆ ವಿಚಾರವನ್ನು ಚುನಾವಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದುರುಪಯೋಗ ಪಡಿಸಿಕೊಳ್ಳಲಾ​ಗು​ತ್ತಿದೆ ಎಂದು ಆರೋ​ಪಿ​ಸಿ​ದ​ರು. ಅರಸೀಕೆರೆಯಲ್ಲಿ ರಾಜಕೀಯ ಗೊಂದಲ ಎಬ್ಬಿಸಲಾಗುತ್ತಿದೆ. ನಾನು ನನ್ನ ಅಭಿಮಾನಿಗಳ ಸಭೆ ಕರೆದು ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದೆ. ಆದರೆ ಕ್ಷೇತ್ರದಲ್ಲಿ 6 ತಿಂಗಳ ಹಿಂದಿನಿಂದಲೇ ಸ್ವಯಂಘೋಷಿತ ಅಭ್ಯರ್ಥಿಯೊಬ್ಬ ಪ್ರಚಾರ ಆರಂಭಿಸಿದ್ದಾರೆ. ಆತ ಕಾಂಗ್ರೆಸ್‌ನಲ್ಲಿದ್ದು, ಅದ್ಯಾವಾಗ ನನಗೆ ತಿಳಿಯದೆ ಜೆಡಿಎಸ್‌ಗೆ ಸೇರ್ಪಡೆಯಾದ ಎಂಬುದೇ ನನಗೆ ಅಚ್ಚ​ರಿ. ನಾನು ಇನ್ನೂ ಜೆಡಿಎಸ್‌ ಪಕ್ಷದಲ್ಲಿದ್ದೇನೆ, ಶಾಸಕನಾಗಿದ್ದೇನೆ. ಅವರ ಪಕ್ಷ ಅವ​ರಿಗೆ ಯಾರು ಇಷ್ಟವೋ ಅವ​ರನ್ನು ಅಭ್ಯರ್ಥಿ ಮಾಡು​ತ್ತಾ​ರೆ. ನಾನು ನನ್ನ ಕಾರ್ಯಕರ್ತರು ನೀಡುವ ಸೂಚನೆ ಮೇರೆಗೆ ಮುಂದಿನ ಹೆಜ್ಜೆ ಇಡು​ತ್ತೇನೆ ಎಂದು ತಿಳಿ​ಸಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!