ವೀರಶೈವ-ಲಿಂಗಾಯತರಿಗೆ ಸಮುದಾಯ ಆಕಾಂಕ್ಷಿಗಳಿಗೆ ಬಿಜೆಪಿ ಟಿಕೆಟ್ ನೀಡುವಂತೆ ಗುಬ್ಬಿಯಲ್ಲಿ ಮುಖಂಡರ ಸಭೆ

Published : Mar 04, 2023, 07:35 PM IST
ವೀರಶೈವ-ಲಿಂಗಾಯತರಿಗೆ ಸಮುದಾಯ ಆಕಾಂಕ್ಷಿಗಳಿಗೆ ಬಿಜೆಪಿ ಟಿಕೆಟ್ ನೀಡುವಂತೆ ಗುಬ್ಬಿಯಲ್ಲಿ ಮುಖಂಡರ ಸಭೆ

ಸಾರಾಂಶ

ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವೀರಶೈವ ಲಿಂಗಾಯತರಿಗೆ ನೀಡುವಂತೆ ಮುಖಂಡರು ಸಭೆ ನಡೆಸಿ ಒತ್ತಾಯಿಸಿದ್ದಾರೆ.

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್, ತುಮಕೂರು.

ತುಮಕೂರು (ಮಾ.4): ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವೀರಶೈವ ಲಿಂಗಾಯತರಿಗೆ ನೀಡುವಂತೆ ಮುಖಂಡರು ಸಭೆ ನಡೆಸಿ ಒತ್ತಾಯಿಸಿದ್ದಾರೆ. ಗುಬ್ಬಿ ಹೊರವಲಯದ ಹೇರೂರಿನಲ್ಲಿರುವ  ಸಿದ್ದರಾಮೇಶ್ವರ ಸಮುದಾಯದಲ್ಲಿ ಸಭೆ ನಡೆಸಿದ ಮುಖಂಡರು ಬಿಜೆಪಿ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 52 ಸಾವಿರ ವೀರಶೈವ ಲಿಂಗಾಯತ ಮತದಾರರಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಒಬಿಸಿ ಸಮುದಾಯಕ್ಕೆ ಟಿಕೆಟ್ ನೀಡಿದ್ದಾರೆ. ಆದ್ರೂ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ, ಈ ಭಾರಿ ಬಿಜೆಪಿ ಟಿಕೆಟ್ ವೀರಶೈವ ಲಿಂಗಾಯತರಿಗೆ ನೀಡಬೇಕು ಎಂದು ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.‌

ಸಭೆಯಲ್ಲಿ 200 ಕ್ಕೂ ಹೆಚ್ಚು ಮುಖಂಡರು ಭಾಗಿಯಾಗಿದ್ದು, ಬಿಜೆಪಿ ಪಕ್ಷದಲ್ಲಿ ದಿಲೀಪ್ ಕುಮಾರ್, ಗ್ಯಾಸ್ ಬಾಬು, ಎನ್.ಸಿ ಪ್ರಕಾಶ್  ಈ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈ ಮೂವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದವರು, ಈ ಮೂವರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡಿ, ಆಗ  ಗುಬ್ಬಿಯಲ್ಲಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಲಿದೆ ಎಂದರು.

ಶಿಗ್ಗಾವಿಯಲ್ಲಿ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ನಿಲ್ಲಿಸಲು ಸುರ್ಜೇವಾಲಾ ಯತ್ನಿಸುತ್ತಿರೋದೇಕೆ?

ಕಳೆದ ಬಾರಿ ಗುಬ್ಬಿಯಲ್ಲಿ ಯಾದವ ಸಮುದಾಯದ ಬೆಟ್ಟಸ್ವಾಮಿಗೆ ಟಿಕೆಟ್ ನೀಡಲಾಗಿತ್ತು. ಇದ್ರಿಂದ ವೀರಶೈವ ಸಮಾಜ ಆಕ್ರೋಶಗೊಂಡತ್ತು. ಜೊತೆಗೆ ಲಿಂಗಾಯತ ಸಮುದಾಯದ ದಿಲೀಪ್ ಕುಮಾರ್ ಸ್ವತಂತ್ರವಾಗಿ ಸ್ಪರ್ಧಿಸಿ 40ಕ್ಕೂ ಹೆಚ್ಚು ಸಾವಿರ ಮತ ಪಡೆದಿದ್ದರು, ಮತ ವಿಭಜನೆದ ಪರಿಣಾಮ ಬಿಜೆಪಿಗೆ ಸೋಲುಂಟಾಗಿತ್ತು.

70 ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್‌ ಲಿಂಗಾಯತ ನಾಯಕರ ಬೇಡಿಕೆ

ಇದೀಗ ಮತ್ತೆ  ಟಿಕೆಟ್ ಬಂಡಾಯ ಶುರುವಾಗಿದ್ದು, ಬಿಜೆಪಿ ಮುಖಂಡರಿಗೆ ಮತ್ತೆ  ತಲೆ ಬಿಸಿ ತಂದಿದೆ. ಗುಬ್ಬಿಯಲ್ಲಿ ವೀರಶೈವ ಲಿಂಗಾಯತ ವರ್ಸಸ್ ಇತರೆ ಸಮುದಾಯ ನಡುವೆ ಟಿಕೆಟ್ ಗಾಗಿ ಲಾಭಿ ಜೋರಾಗಿದ್ದು, ಬಿಜೆಪಿ ಹೈಕಮಾಂಡ್ ಯಾವ ರೀತಿ ಸಮಸ್ಯೆ ಬಗೆ ಹರಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ