ನನಗೆ ಮತ ಹಾಕಿ, ಇಲ್ದಿದ್ರೆ ನನ್ನ-ನಿಮ್ಮ ಋಣಾನುಬಂಧ ಮುಗೀತು ಅಂತಾ ತಿಳ್ಕೊಳ್ಳಿ; ವಾಟಾಳ್‌ ಸೆಂಟಿಮೆಂಟ್‌

Published : Apr 30, 2023, 06:11 PM IST
ನನಗೆ ಮತ ಹಾಕಿ, ಇಲ್ದಿದ್ರೆ ನನ್ನ-ನಿಮ್ಮ ಋಣಾನುಬಂಧ ಮುಗೀತು ಅಂತಾ ತಿಳ್ಕೊಳ್ಳಿ; ವಾಟಾಳ್‌ ಸೆಂಟಿಮೆಂಟ್‌

ಸಾರಾಂಶ

ಚಾಮರಾಜನಗರ ಜನತೆ ಈ ಬಾರಿ ನನ್ನನ್ನು ಗೆಲ್ಲಿಸಬೇಕು. ನನ್ನನ್ನು ಗೆಲ್ಲಿಸದಿದ್ದರೆ ಮೇ.13 ನೇ ತಾರೀಖು ನನ್ನ ನಿಮ್ಮ ಋಣಾನುಬಂಧ ಮುಗೀತು. ಈ ಜನ್ಮದಲ್ಲಿ ಈ ಕಡೆ ತಿರುಗಿಯೂ ನೋಡಲ್ಲ ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ. 

ಚಾಮರಾಜನಗರ (ಏ.30): ಚಾಮರಾಜನಗರ ಜನತೆ ಈ ಬಾರಿ ನನ್ನನ್ನು ಗೆಲ್ಲಿಸಬೇಕು. ನನ್ನನ್ನು ಆಯ್ಕೆ ಮಾಡಿದರೆ ಚಾಮರಾಜನಗರವನ್ನು ಭೂಪಟದಲ್ಲಿ ಅದ್ಭುತವಾಗಿ ಮೆರೆಯುವಂತೆ ಮಾಡುತ್ತೇನೆ ಎಂದು ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ. 

ನನ್ನನ್ನು ಗೆಲ್ಲಿಸದಿದ್ದರೆ ಮೇ.13 ನೇ ತಾರೀಖು ನನ್ನ ನಿಮ್ಮ ಋಣಾನುಬಂಧ ಮುಗೀತು. ಈ ಜನ್ಮದಲ್ಲಿ ಈ ಕಡೆ ತಿರುಗಿಯೂ ನೋಡಲ್ಲ. ಚಾಮರಾಜನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಬಾರಿಯು ಕೈ ಹಿಡಿಯದಿದ್ದರೆ ಇನ್ನು ಮುಂದೆ ಚಾಮರಾಜನಗರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಚಾಮರಾಜನಗರ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಕುಳಿತು ವಿಭಿನ್ನ ರೀತಿಯಲ್ಲಿ  ಪ್ರಚಾರ ಮಾಡಿದ ವಾಟಾಳ್ ನಾಗರಾಜ್ ಅಂಗಡಿ ಮುಂಗಟ್ಟು, ಬಸ್ ನಿಲ್ದಾಣದಲ್ಲಿ ಮತ ಯಾಚಿಸಿದರು.  ಈ ಬಾರಿಯ ಚುನಾವಣೆಯಲ್ಲಿ ವಾಟಾಳ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಹಾವು ಶಿವನ ಹಾರ, ನನಗೆ ಜನರೇ ಶಿವ: ಕಾಂಗ್ರೆಸ್‌ನ ವಿಷಸರ್ಪ ಹೇಳಿಕೆ ಮೋದಿ ಟಾಂಗ್

ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ 10 ನೇ ಬಾರಿಗೆ ಕಣಕ್ಕಿಳಿಯುತ್ತಿರುವ ವಾಟಾಳ್ ನಾಗರಾಜ್  ಚಾಮರಾಜನಗರದಲ್ಲಿ 3 ಬಾರಿ ಗೆಲವು 6 ಬಾರಿ ಸೋಲು ಕಂಡಿದ್ದಾರೆ. ಕಳೆದ ಮೂರು ಬಾರಿಯಿಂದ ಸತತವಾಗಿ ವಾಟಾಳ್ ನಾಗರಾಜ್ ಇಲ್ಲಿ  ಸೋತಿದ್ದಾರೆ.

ಮೋದಿಯವರ ಜತೆಗೆ ಈಗ ಬರೀ ಲಂಚಕ್ಕೊಬ್ಬ ಮಂಚಕ್ಕೊಬ್ಬ ಇರೋರು ಮಾತ್ರ ಇರೋದು:

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ