Karnataka Assembly Election 2023 Live Updates: ಕೆಲವೇ ಕ್ಷಣಗಳಲ್ಲಿ ಮತದಾನ ಶುರು

Karnataka Assembly Election 2023 Live Updates:ಕರ್ನಾಟಕ ವಿಧಾನಸಭಾ ಕಣದಲ್ಲಿ ಒಟ್ಟು 2625 ಅಭ್ಯರ್ಥಿಗಳಿದ್ದು, 224 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 5.3 ಕೋಟಿ ಮಂದಿ ಮತದಾನಕ್ಕೆ ಅರ್ಹರಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 58545 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 76,202 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತದೆ. 84,119 ಸಿಬ್ಬಂದಿ ನಿಯೋಜಿಸಿದ್ದು, ಮತಗಟ್ಟೆಗಳತ್ತ ಅಧಿಕಾರಿಗಳು ಈಗಾಗಲೇ ತೆರಳಿದ್ದಾರೆ.

ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಿನ್ನೆ ಸಂಜೆಯೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ,  ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದೆ. ವಿಶೇಷ ಮತಗಟ್ಟೆಗಳನ್ನು ಆರಂಭಿಸಿದ್ದು, ಕೆಲವು ಮತಗಟ್ಟೆಗಳು ವಿಶೇಷ ಥೀಮ್‌ನೊಂದಿಗೆ ಅಲಂಕೃತಗೊಂಡಿದೆ. ಮತದಾರ ಪ್ರಭು ತನ್ನ ಅಧಿಕಾರ ಚಲಾಯಿಸುವುದೊಂದೇ ಬಾಕಿ ಇದೆ. ಎಲ್ಲಾ ಜೈಲುಗಳನ್ನು ಎರಡೆರಡು ಬಾರಿ ಚೆಕ್ ಮಾಡಲಾಗಿದ್ದು, ಗಡಿ ಭಾಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬೆಂಗಳೂರಲ್ಲೂ ಮತಗಟ್ಟೆಗಳು ಮತದಾನಕ್ಕೆ ಸಜ್ಜಾಗಿ ನಿಂತಿವೆ. 

6:38 AM

Karnataka Assembly election: ಕೆಲವೇ ಕ್ಷಣಗಳಲ್ಲಿ ಮತದಾನ ಶುರು

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಒಟ್ಟು ರಾಜ್ಯದಾದ್ಯಂತ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದಿವ್ಯಾಂಗರಿಗಾಗಿ 100 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ 29 ಸಾವಿರ ವೆಬ್‌ಕಾಸ್ಟ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 12 ಸಾವವಿರ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.

8:18 PM

ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ ಮತಗಟ್ಟೆ, ಸುಗಮ ಮತದಾನಕ್ಕೆ ಎಲ್ಲಾ ಸಿದ್ಧತೆ!

ರಾಣಿಬೆನ್ನೂರು ತಾಲೂಕು‌ ಕೋಡಿಯಾಲ ಗ್ರಾಪಂ ಮತಗಟ್ಟೆಯನ್ನು ಅತ್ಯಂತ ಸುಂದರವಾಗಿ ಶೃಂಗರಿಸಲಾಗಿದೆ. ಇದೀಗ ಮತಗಟ್ಟೆ ಮದುವೆ ಮನೆಯಂತೆ ಕಂಗೊಳಿಸುತ್ತಿದೆ.

7:35 PM

ಸಿಸಿಬಿ, ಫ್ಲೈಯಿಂಗ್​ ಸ್ಕ್ವಾಡ್​ ಕಾರ್ಯಾಚರಣೆ: ಅಕ್ರಮ ಹಣ ವಶ

ಸಿಸಿಬಿ, ಫ್ಲೈಯಿಂಗ್​ ಸ್ಕ್ವಾಡ್​ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ 1.90 ಕೋಟಿ ಸೀಜ್​ ಮಾಡಲಾಗಿದೆ. ಬೆಂಗಳೂರಿನ ಅಕ್ಕಿಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಪದ್ಮಶ್ರೀ ಫಾರ್ಮಾ ಕಚೇರಿಯಲ್ಲಿ ಹಣ ಸಂಗ್ರಹಿಸಲಾಗಿತ್ತು. ಜಂಟಿ ಆಯುಕ್ತ ಶರಣಪ್ಪ ತಂಡದಿಂದ ಕಾರ್ಯಾಚರಣೆ ನಡೆದಿದೆ. ಹಣವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಕಳುಹಿಸಿದ್ದು, ಮತದಾರರಿಗೆ ಹಂಚಲು ಹಣ ಸಂಗ್ರಹಿಸಿರುವ ಅನುಮಾನವಿದೆ. ಹಣ ವಶಕ್ಕೆ ಪಡೆದು ಪೊಲೀಸರಿಂದ ತನಿಖೆ ನಡೆಸುತ್ತಿದ್ದಾರೆ. ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

 

 

6:40 PM

Mysuru Assembly Constituencies: ಮೈಸೂರು ಕ್ಷೇತ್ರಗಳಲ್ಲಿ ಮತದಾನಕ್ಕೆ ಬರುವ ಹಿರಿಯರಿಗೆ ಬಸ್ ವ್ಯವಸ್ಥೆ

ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನಕ್ಕೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಡಾ. ಕೆ.ವಿ.ರಾಜೇಂದ್ರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದು ಪರಿಶೀಲನೆ ನಡೆಸಿದ್ದಾರೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲ ವ್ಯಕ್ತಿಗಳಿಂದ ಮೈಸೂರು ಜಿಲ್ಲೆಯಲ್ಲಿ 2667 ಮತ ಚಾಲಾವಣೆಯಾಗಿದೆ. ಮತಗಟ್ಟೆಗಳಿಗೆ ವೀಲ್ ಚೇರ್ ಹಾಗೂ ಬೂತುಗನ್ನಡಿ  ಸರಬರಾಜು ಮಾಡಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬರಲು ಅನುಕೂಲ ಆಗುವಂತೆ ವಾಹನ ಇರಲಿದೆ. ಮೇಲುಸ್ತುವಾರಿಗೆ ಹುಣಸೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ನೇಮಿಸಲಾಗಿದೆ. 

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

6:35 PM

ಹೊರ ರಾಜ್ಯಗಳಿಂದಲೂ ನಿಯೋಜಿತರಾಗಿದ್ದಾರೆ ಪೊಲೀಸರು

ನೆರೆ ರಾಜ್ಯಗಳಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ನಿಯೋಜಿತರಾದ ಹೆಚ್ಚುವರಿ ಪೋಲಿಸ್ ಮತ್ತು ಹೋಮ್ ಗಾರ್ಡ್ ಗಳ ವಿವರ ಹೀಗಿದೆ.

 

ನೆರೆ ರಾಜ್ಯಗಳಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ನಿಯೋಜಿತರಾದ ಹೆಚ್ಚುವರಿ ಪೋಲಿಸ್ ಮತ್ತು ಹೋಮ್ ಗಾರ್ಡ್ ಗಳ ವಿವರ ಹೀಗಿದೆ. pic.twitter.com/xAL8OTv6Aq

— Chief Electoral Officer, Karnataka (@ceo_karnataka)

6:33 PM

ಕರ್ನಾಟಕ ಚುನಾವಣೆ ಕಣದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ?

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ.

 

 

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ. pic.twitter.com/Vx42RaaE5G

— Chief Electoral Officer, Karnataka (@ceo_karnataka)

6:33 PM

ಕರ್ನಾಟಕ ಚುನಾವಣೆ ಕಣದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ?

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ.

 

 

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ. pic.twitter.com/Vx42RaaE5G

— Chief Electoral Officer, Karnataka (@ceo_karnataka)

6:19 PM

ಚಾಮರಾಜನಗರ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ವಿರುದ್ಧ FIR

ಚಾಮರಾಜನಗರ: ಬಿಎಸ್ಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಆರೋಪ. ದಲಿತ ಸಂಘಟನೆ ಹೆಸರಲ್ಲಿ ಕರಪತ್ರ ಮುದ್ರಿಸಿ ಅಪಪ್ರಚಾರ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಸೇರಿ ನಾಲ್ವರ ವಿರುದ್ಧ ಎಫ್ಐಆರ್. ಮಾಜಿ ಸಂಸದ ಶಿವಣ್ಣ,ಕಾಂಗ್ರೆಸ್ ಮುಖಂಡರಾದ ಎಸ್ ನಂಜುಂಡಸ್ವಾಮಿ ಹಾಗೂ ಬಿಕೆ ರವಿಕುಮಾರ್ ವಿರುದ್ಧ ಎಫ್ಐಆರ್. ಬೇರೆ ಪಕ್ಷದಿಂದ ಹಣ ಪಡೆದಿದ್ದಾರೆಂದು ಅಪಪ್ರಚಾರ. ಬಿಎಸ್‌ಪಿ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಯತ್ನ. ಸಾಮಾಜಿಕ ಜಾಲತಾಣಗಳಲ್ಲಿ ಕರಪತ್ರ ಮುದ್ರಿಸಿ ವೈರಲ್. ಬಿಎಸ್ಪಿ ಅಭ್ಯರ್ಥಿ ಹ.ರಾ.ಮಹೇಶ್ ರಿಂದ ದೂರು. ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಎಫ್ಐಆರ್.

6:13 PM

ತಪ್ಪದೇ ಮತ ಹಾಕಲು ಸಿಎಂ ಬೊಮ್ಮಾಯಿ ಮನವಿ

ಕನ್ನಡ ನಾಡಿನ ಸಮಸ್ತ ಮತದಾರ ಬಂಧುಗಳೆ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಈ ನಾಡಿನ ಪ್ರಜೆಗಳಾದ ನಾವು, ನೀವೆಲ್ಲರೂ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸುರಕ್ಷಿತ, ಸುಭದ್ರ ಮತ್ತು ಸಶಕ್ತ ಕರ್ನಾಟಕ  ನಿರ್ಮಾಣ ಮಾಡಲು ನೀವೆಲ್ಲರೂ ತಪ್ಪದೇ ನಿಮ್ಮ ಹಕ್ಕು ಚಲಾಯಿಸಬೇಕು. ದಯವಿಟ್ಟು ನಾಳೆ (ಮೇ 10 ರಂದು) ನಡೆಯುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಎಲ್ಲ ಮತದಾರರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ. 

 

ಕನ್ನಡ ನಾಡಿನ ಸಮಸ್ತ ಮತದಾರ ಬಂಧುಗಳೆ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಈ ನಾಡಿನ ಪ್ರಜೆಗಳಾದ ನಾವು, ನೀವೆಲ್ಲರೂ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಸುರಕ್ಷಿತ, ಸುಭದ್ರ ಮತ್ತು ಸಶಕ್ತ ಕರ್ನಾಟಕ ನಿರ್ಮಾಣ ಮಾಡಲು ನೀವೆಲ್ಲರೂ ತಪ್ಪದೇ ನಿಮ್ಮ ಹಕ್ಕು ಚಲಾಯಿಸಬೇಕು. ದಯವಿಟ್ಟು ನಾಳೆ (ಮೇ 10…

— Basavaraj S Bommai (@BSBommai)

5:50 PM

Chitradurga: ಮತದಾನ ಹೆಚ್ಚಿಸಲು ವಿಭಿನ್ನ ಪ್ರಯತ್ನ

ಚಿತ್ರದುರ್ಗ:  ಚಿತ್ರದುರ್ಗದಲ್ಲಿ ಮತಗಟ್ಟೆಗೆ ಮತದಾರರ ಸೆಳೆಯಲು ಚಿತ್ರದುರ್ಗ ಜಿಲ್ಲಾಡಳಿತ, ಸ್ವೀಪ್ ಸಮಿತಿಯಿಂದ ವಿಭಿನ್ನ ಪ್ರಯತ್ನ ಮಾಡಲಾಯ್ತು. ಮತದಾನ ಹೆಚ್ಚಿಸಲು ವಿಶೇಷ ಚೇತನ ಮತದಾನ ಕೇಂದ್ರ, ಯುವ ಮತದಾನ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಮತಗಟ್ಟೆಗೆ ಏಳು ಸುತ್ತಿನ ಕೋಟೆ ಮಾದರಿಯ ಮೆರಗು ನೀಡಲಾಗಿದೆ. ಇದರ ಜೊತೆಗೆ ಪಿಂಕ್ ಮತಗಟ್ಟೆ, ಮಾದರಿ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, ವಿಶೇಷ ಮತಗಟ್ಟೆಗಳಿಗೆ ಜಿ.ಪಂ ಸಿಇಓ ಎಂ.ಎಸ್.ದಿವಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Karnataka elections 2023: ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳಲ್ಲಿ ಕರೆತರುವಂತಿಲ್ಲ: ಇಲ್ಲಿದೆ ಕಾರಣ

5:44 PM

Kolar: 101 ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲು.

ಕೋಲಾರ : ಚುನಾವಣೆ ತಯಾರಿ ಕುರಿತು, ಕೋಲಾರದಲ್ಲಿ ಎಸ್ಪಿ ನಾರಾಯಣ ಹೇಳಿಕೆ. 101 ನೀತಿ ಸಂಹಿತ ಉಲ್ಲಂಘನೆ ಕೇಸ್ ದಾಖಲು. ಸಂಚಾರ ನಿಯಮ ಉಲ್ಲಂಘನೆ ಸಂಬಂಧ 3624 ಪ್ರಕರಣ ದಾಖಲು,18 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ. 115 ರೌಡಿ ಶೀಟರ್ ಮನೆಗಳ ಪರಿಶೀಲನೆ ಆಗಿದೆ. 144 ಸೆಕ್ಷನ್ ಜಾರಿ ಇದೆ,6 ಕ್ಕಿಂತ ಹೆಚ್ಚು ಜನರು ಪ್ರಚಾರ ಮಾಡಬಾರದು. ಶಾಂತಿಯುತ ಮತದಾನಕ್ಕಾಗಿ 1 ಎಸ್ಸಿ,1 ಎಎಸ್ಪಿ, 5 ಡಿವೈಎಸ್ಪಿ ಸೇರಿದಂತೆ ಒಟ್ಟು 1626 ಪೊಲೀಸ್ ಅಧಿಕಾರಿಗಳು ಬಳಕೆ. 101 ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, ಗಡಿ ಪ್ರದೇಶದಲ್ಲಿ 21 ತಪಾಸಣಾ ಕೇಂದ್ರ,30 ಫ್ಲ್ಯಯಿಂಗ್ ಸ್ಕ್ವಾಡ್ ಬಳಕೆ. ಬಿಎಸ್ಎಫ್ ಹಾಗೂ 4 KSRP ತುಕಡಿ ಬಳಕೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಂದ ಶೇ.90 ರಷ್ಟು ಅಂಚೆ ಮತದಾನವಾಗಿದೆ.

 

5:14 PM

ಒಂದು ಲಿಂಕ್‌ ಕ್ಲಿಕ್‌ ಮಾಡಿ: ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ, ಮತಗಟ್ಟೆಗೆ ಹೋಗಿ..!

ಮತಗಟ್ಟೆ ಯಾವುದು, ಅಲ್ಲಿ ಯಾವ ಬೂತ್ ಅಂತ ಅಲ್ಲಿಗೆ ಹೋಗಿ ಟೈಮ್ ವೇಸ್ಟ್ ಮಾಡೋ ಮೊದಲು ವೆಬ್‌ಸೈಟಿನಲ್ಲಿಯೇ ಚೆಕ್ ಮಾಡಿಕೊಂಡರೆ ಹೋದರೆ ಬೆಸ್ಟ್. ಅದಕ್ಕೇನು ಮಾಡಬೇಕು? ಚೆಕ್ ಮಾಡಿಕೊಳ್ಳೋದು ಹೀಗೆ?

ಇಲ್ಲಿ ಕ್ಲಿಕ್ ಮಾಡಿ

4:30 PM

ಜಯನಗರ ಬಿಜೆಪಿ ಅಭ್ಯರ್ಥಿ ವಿರುದ್ಧ ಚುನಾವಣಾ ಆಯೋಗಕ್ಕೆ ತಂದೆ ಮಗಳ ದೂರು

ಜಯನಗರ ಕ್ಷೇತ್ರದಲ್ಲಿ ಹಲವಾರು ಮತಗಟ್ಟೆಗಳಲ್ಲಿ  ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಹಾಗೂ ಬೆಂಬಲಿಗರು ಭಯದ ವಾತವರಣವನ್ನು ಉಂಟುಮಾಡುತ್ತಿದ್ದಾರೆ ಎಂದು ರಾಮಲಿಂಗ ರೆಡ್ಡಿ ಹಾಗೂ ಸೌಮ್ಯ ರೆಡ್ಡಿಯಿಂದ ದೂರು ಸಲ್ಲಿಕೆ 

4:11 PM

ಮತದಾನಕ್ಕೆ ಮಳೆ ಅಡ್ಡಿ ಸಾಧ್ಯತೆ!

ಮೋಚಾ ಚಂಡಮಾರುತ ಪ್ರಬಲವಾಗಿರುವ ಕಾರಣ, ಮೇ.10 ರಂದು ಮತದಾನಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮಂಗಳವಾರ ಉತ್ತರಕನ್ನಡ, ಹುಬ್ಬಳ್ಳಿ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ನಾಳೆ ಮಧ್ಯಾಹ್ನದ ವೇಳೆ ಭಾರೀ ಮಳೆಯಾಗುವ ಸೂಚನೆ ಕೂಡ ಹವಮಾನ ಇಲಾಖೆ ನೀಡಿದೆ.

3:45 PM

ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ ಕೆಂಪಣ್ಣ

ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ. ಕೆಂಪಣ್ಣ ಮನವಿ,. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಜನಸಾಮಾನ್ಯರು ನಲುಗಿ ಹೋಗಿದ್ದಾರೆ‌. ಸಾರ್ವಜನಿಕ‌ ಕಾಮಗಾರಿಯಲ್ಲಿ ತಲೆ ಎತ್ತಿರುವ 40% ಕಮಿಷನ್ ಭ್ರಷ್ಟಾಚಾರ . ಹಲವು ಗುತ್ತಿಗೆದಾರರನ್ನು ಬಲಿ ತೆಗೆದುಕೊಂಡಿದೆ. ಹಾನಿಕರ ಮತ್ತು ಅಪಾಯಕಾರಿ ಕಾಮಗಾರಿಗೆ ಸಾರ್ವಜನಿಕರು ಶರಣಾಗುವಂತೆ ಮಾಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನವು ಪವಿತ್ರವಾದುದು.ಮತದಾರರು ತಮ್ಮ‌ ಆತ್ಮಸಾಕ್ಷಿಯ ಅನುಸಾರ ಮತದಾನ ಮಾಡುವರೆಂಬ ವಿಶ್ವಾಸವಿದೆ ಎಂದು ಕೆಂಪಣ್ಣ ಹೇಳಿಕೆ ಬಿಡುಗಡೆ. ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ . ರೋಕ್ಷವಾಗಿ ಬಿಜೆಪಿಯವರಿಗೆ ಟಾಂಗ್ ನೀಡಿರುವ ಕೆಂಪಣ್ಣ ಪತ್ರ..

3:08 PM

Davanagere: ಏಳು ಕಡೆ ಮಸ್ಟರಿಂಗ್ ಕಾರ್ಯ

ದಾವಣಗೆರೆಯ ಏಳು ಕಡೇ ಮಸ್ಟರಿಂಗ್ ಕಾರ್ಯ ಆರಂಭಗೊಂಡಿದೆ. ಏಳು ವಿಧಾನಸಭಾ ಕ್ಷೇತ್ರಗಳಿಗೆ ಮತದಾನಕ್ಕೆ ಅಂತಿಮ ಹಂತದ ಸಿದ್ದತೆ ನಡೆಯುತ್ತಿದ್ದು, 1685 ಮತದಾನ ಕೇಂದ್ರಗಳ ಸ್ಥಾಪಿಸಲಾಗಿದೆ. 338 ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳು, 1347 ಸಾಮಾನ್ಯ ಮತಗಟ್ಟೆಗಳು, ಜಿಲ್ಲೆಯಲ್ಲಿ 1442553 ಮತದಾರರ ನೋಂದಣಿ, 721964 ಪುರುಷರು, 720004 ಮಹಿಳಾ ಮತದಾರರು, ಮತದಾನಕ್ಕೆ ಕಾತುರದಿಂದ ಕಾಯುತ್ತಿರುವ 35454 ಹೊಸ ಮತದಾರರು, ಮತಗಟ್ಟೆಗೆ 298 ಮೈಕ್ರೋ ಅಬ್ಸರ್ವರ್, 2026 ಮತಗಟ್ಟೆ ಅಧಿಕಾರಿಗಳು, 4052ಸಿಬ್ಬಂದಿ ನೇಮಕಗೊಂಡಿದ್ದಾರೆ.  ಒಟ್ಟು 8104 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ವಿಶೇಷ ಚೇತನ ಮತದಾರರಿಗೆ ಸಹಾಯಕರ ನೇಮಕ. 23 ರೌಡಿಶೀಟರ್ ಗಡಿಪಾರು, ಗುಂಡಾ ಕಾಯ್ದೆ ಓರ್ವನ ಬಂಧನ. ಶೇ.85 ಮತದಾನ ಗುರಿ ಹೊಂದಿರುವ ಜಿಲ್ಲಾಡಳಿತ.

2:45 PM

ಕಡಿಮೆಯಾದ ಬಸ್, ಊರಿಗೆ ಹೋಗಲು ಪರದಾಟ

ಚುನಾವಣೆ ಕೆಲಸಕ್ಕೆ ಹೆಚ್ಚುವರಿ KSRTC ಬಸ್ ನಿಯೋಜನೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ‌KSRTC ಬಸ್ ಸಮಸ್ಯೆ. ಬಸ್ ಸಮಸ್ಯೆ ಆಗಿರುವ ರೂಟ್‌ಗಳಿಗೆ ಬಿಎಂಟಿಸಿ ಬಸ್. ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಓಡಿಸಲು ನಿರ್ಧರಿಸಿರುವ KSRTC ಸಂಸ್ಥೆ. ಸ್ಥಳದಲ್ಲಿ KSRTC ಅಧಿಕಾರಿಗಳು ಉಪಸ್ಥಿತಿ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಡಲಿರುವ ಬಿಎಂಟಿಸಿ. ಬಸ್ ಗಳು

2:33 PM

ಮದ್ಯ ಸೇವಿಸಿದ ಮತಗಟ್ಟೆ ಅಧಿಕಾರಿಗಳ ವಿರುದ್ಧ ಕ್ರಮ?

ಮದ್ಯಪಾನ ಮಾಡಿದ ಕರ್ತವ್ಯನಿರತ ಮತಗಟ್ಟೆ ಅಧಿಕಾರಿಗಳು. ಮದ್ಯಪಾನ ಮಾಡಿದವರನ್ನು ಪತ್ತೆ ಹಚ್ಚಿದ ಚುನಾವಣಾಧಿಕಾರಿ. ಮಧ್ಯಪಾನ ಮಾಡಿದ ಹಿನ್ನೆಲೆ ಮೆಗ್ಗಾನ್ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಿದ ಚುನಾವಣಾ ಅಧಿಕಾರಿಗಳು. ಆ್ಯಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ ಚುನಾವಣಾಧಿಕಾರಿ. ರಮೇಶ್ ಮತ್ತು ಮಾಲತೇಶ್ ಎಂ ಬಿ ಇಬ್ಬರು ಅಧಿಕಾರಿಗಳು ಮಧ್ಯಪಾನ ಮಾಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದರು. ಜೊತೆಗೆ ತಮ್ಮ ಬ್ಯಾಗಿನಲ್ಲಿ ಮದ್ಯದ ಸ್ಯಾಚೆಟ್ಸ್ ಕೂಡ ತಂದಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಮೆಡಿಕಲ್ ಟೆಸ್ಟಿಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ ಚುನಾವಣಾಧಿಕಾರಿ. ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಇಬ್ಬರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ.

2:27 PM

ಮತದಾರರಿಗೆ ಶಾಕ್‌ ಕೊಟ್ಟ ಬಿಬಿಎಂಪಿ: ಹೋಟೆಲ್‌ಗಳಲ್ಲಿ ಉಚಿತ ಊಟ, ತಿಂಡಿ ವಿತರಣೆಗೆ ನಿಷೇಧ!

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾನ ಮಾಡಿ ಬಂದವರಿಗೆ ಉಚಿತ ಊಟ, ತಿಂಡಿ ಕೊಡುವುದಾಗಿ ಕೆಲವು ಹೋಟೆಲ್‌ಗಳು ಘೋಷಣೆ ಮಾಡಿಕೊಂಡಿದ್ದರು. ಆದರೆ, ಯಾವುದೇ ಹೋಟೆಲ್‌ಗಳಲ್ಲಿ ಉಚಿತ ಊಟ ಅಥವಾ ತಿಂಡಿ ನೀಡುವಂತಿಲ್ಲ ಎಂದು ಬೃಹತ್‌ ಬೆಂಗಳುರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಫ್ರೀ ತಿಂಡಿ ಸಿಗುತ್ತೆ ಎಂಬ ಖುಷಿಯಲ್ಲಿದ್ದ ಮತದಾರರಿಗೆ ಶಾಕ್

1:29 PM

ಕರ್ನಾಟಕ - ಮಹಾರಾಷ್ಟ್ರ - ಗೋವಾ ಗಡಿಭಾಗದಲ್ಲಿ ಹದ್ದಿನ ಕಣ್ಣು

ಬೆಳಗಾವಿ: ನಾಳೆ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಹಿನ್ನೆಲೆಯಲ್ಲಿ ಕರ್ನಾಟಕ - ಮಹಾರಾಷ್ಟ್ರ - ಗೋವಾ ಗಡಿಭಾಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮಹಾರಾಷ್ಟ್ರ, ಗೋವಾ ಜೊತೆ ಗಡಿ ಹಂಚಿಕೊಂಡ ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್. ಬೆಳಗಾವಿ ಜಿಲ್ಲೆಯ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ. ಮಹಾರಾಷ್ಟ್ರ, ಗೋವಾದಿಂದ ಆಗಮಿಸುವ ಪ್ರತಿಯೊಂದು ವಾಹನಗಳ ತಪಾಸಣೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 58 ಚೆಕ್‌ಪೋಸ್ಟ್‌ಗಳ ಸ್ಥಾಪಿಸಿದ್ದು, 24 ಅಂತರ್‌ರಾಜ್ಯ ಚೆಕ್‌ಪೋಸ್ಟ್, 22 ಅಂತರ್‌ಜಿಲ್ಲಾ ಚೆಕ್‌ಪೋಸ್ಟ್, ಜಿಲ್ಲೆಯೊಳಗೆ 12 ಚೆಕ್‌ಪೋಸ್ಟ್‌ಗಳ ಸ್ಥಾಪನೆಯಾಗಿದೆ. ಕೊನೆ ಗಳಿಗೆಯಲ್ಲಿ ನಡೆಯಬಹುದಾದ ಅಕ್ರಮ ತಡೆಗಟ್ಟಲು ಜಂಟಿ ಚೆಕ್‌ಪೋಸ್ಟ್ ಸ್ಥಾಪನೆ. ಬೆಳಗಾವಿ ತಾಲೂಕಿನ ಬಾಚಿ ಚೆಕ್‌ಪೋಸ್ಟ್‌ನಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದು, ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಸಶಸ್ತ್ರ ಸೀಮಾ ಬಲ್, ಪೊಲೀಸ್, ಕಂದಾಯ ಇಲಾಖೆ, ಅಬಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಗಡಿಯ ಕೊಗನೊಳ್ಳಿ, ಕಾಗವಾಡ ಹಾಗೂ ಕರ್ನಾಟಕ ಗೋವಾ ಗಡಿಯ ಕಣಕುಂಬಿಯಲ್ಲಿ ಜಂಟಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.

1:27 PM

ಮುಸ್ಲಂ ಮೀಸಲಾತಿ: ಯಥಾಸ್ಥಿತಿ ಕಾಪಾಡಲು ಹೇಳಿದ ಸುಪ್ರಿಂ

 ರಾಜ್ಯದಲ್ಲಿ ಹಿಂದುಳಿದ ವರ್ಗದ (ಒಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಹೊಂದಿದ್ದ ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದುಹಾಕಿ ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿಗೆ ಸೇರ್ಪಡೆ ಮಾಡಿದ್ದ ಕರ್ನಾಟಕ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು, ಇದನ್ನೇ ಯಥಾಸ್ಥಿತಿಯಲ್ಲಿ ಕಾಯ್ದಿಡುವಂತೆ ಮತ್ತೊಮ್ಮೆ ಆದೇಶಿಸಿದೆ. ರಾಜ್ಯ ಸರ್ಕಾರದಿಂದ ರದ್ದುಗೊಳಿಸಲಾಗಿದ್ದ ಮುಸ್ಲಿಂ ಸಮುದಾಯದ ಒಬಿಸಿ ಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿತ್ತು. ಈ ಕುರಿತು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರದ ಆದೇಶಕ್ಕೆ ಏ.25ರಮದು ತಡೆ ನೀಡಿತ್ತು. ಜೊತೆಗೆ, ಇಂದು (ಮೇ 9- ಮಂಗಳವಾರ) ಪ್ರಕರಣವನ್ನು ನ್ಯಾ.ಕೆ.ಎಂ.ಜೋಸೆಫ್ ನೇತೃತ್ವದ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, ಈ ಹಿಂದಿನ ಆದೇಶವನ್ನು ಮುಂದುವರೆಸುವ ಹಾಗೂ ಮೀಸಲಾತಿ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಲಾಗಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು? 

1:00 AM

ಮತಗಟ್ಟೆ ಸ್ಥಾಪಿಸದಂತೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು

ರಾಯಚೂರು: ಸರ್ಕಾರಿ ಶಾಲೆಗೆ ಮುಳ್ಳು ಬೇಲಿ ಹಾಕಿ ಬಂದ್ ಮಾಡಿ ಗ್ರಾಮಸ್ಥರ ಆಕ್ರೋಶ. ಮತಗಟ್ಟೆ ಸ್ಥಾಪನೆ ಮಾಡದಂತೆ ತಡೆದು ಗ್ರಾಮಸ್ಥರ ಪ್ರತಿಭಟನೆ. ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಮಾನ್ವಿ ತಾಲೂಕಿನ ಅಡವಿ ಖಾನಾಪುರ ಗ್ರಾಮದಲ್ಲಿ ಘಟನೆ. ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಡನಲ್ಲಿ‌ ಮನೆ ನಿರ್ಮಾಣ. ಗ್ರಾಮದ ವ್ಯಕ್ತಿಯೊಬ್ಬರ ಮನೆ ನಿರ್ಮಿಸಿ, ಹುಲ್ಲಿನ ಬಣವೆ ಹಾಕಿರುವುದು ಸಮಸ್ಯೆಗೆ ಕಾರಣ. ಮನೆ ಮತ್ತು ಹುಲ್ಲಿನ ಬಣವೆ ತೆರವುಗೊಳಿಸಲು ಹಲವು ಬಾರಿ ಗ್ರಾಮಸ್ಥರ ಮನವಿ. ತಾಲೂಕು ಮತ್ತು ಜಿಲ್ಲಾಡಳಿತ ತಮ್ಮ ಮನವಿಗೆ ಕ್ಯಾರೆ ಅನ್ನದ ಹಿನ್ನಲೆ ಬೇಲಿ‌ ಹಾಕಿ  ಆಕ್ರೋಶ. ಗ್ರಾಮಸ್ಥರ ವಿರೋಧದ ಸುದ್ದಿ ತಿಳಿಯುತ್ತಿದ್ದಂತೆ ಓಡೋಡಿ ಬಂದ ತಹಸೀಲ್ದಾರ್, ಬಿಇಓ. ಮತಗಟ್ಟೆ ಕೇಂದ್ರ ಮಾಡಬಾರದು ನಮ್ಮ ಸಮಸ್ಯೆ ಪರಿಹರಿಸದೆ ನಿರ್ಲಕ್ಷ್ಯ ‌ಮಾಡಿದ್ದಿರಿ ಎಂದು ಗ್ರಾಮಸ್ಥರ ಕಿಡಿ

12:59 PM

ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಿದ ಚುನಾವಣಾ ಆಯೋಗ

ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಿದ ಚುನಾವಣಾ ಆಯೋಗ. ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ವಿಶೇಷ ಮತಗಟ್ಟೆ ಸ್ಥಾಪನೆ. ರಾಜ್ಯದ ವಿವಿಧೆಡೆ 40 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ ಸ್ಥಾಪಿಸಿದ ಆಯೋಗ. 9 ಜಿಲ್ಲೆಗಳಲ್ಲಿ ತಲೆಎತ್ತಿದ ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ. ಅರಣ್ಯದಂಚಿನಲ್ಲಿ ವಾಸಿಸುವ ಎರವ, ಪಣಿಯ ಆದಿವಾಸಿ ಜನಾಂಗದ ಮತದಾರಿಗೆ ಅನುಕೂಲ. ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗರ ಪ್ರದೇಶದಲ್ಲಿ ಮತಗಟ್ಟೆ.. ಲೈಕುಡಿ, ಸಿದ್ದಿ ಜನಾಂಗದ ಮತದಾರರಿಗೆ ಮತದಾನ ಮಾಡಲು ಉಪಯೋಗ..
ಚಾಮರಾಜನಗರಜಿಲ್ಲೆಯಲ್ಲಿ 9 ಬುಡಕಟ್ಟು ಮತಗಟ್ಟೆ ಸ್ಥಾಪನೆ. ಮೈಸೂರು ಜಿಲ್ಲೆಯಲ್ಲೂ 9 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ. ಉತ್ತರಕನ್ನಡ ಜಿಲ್ಲೆಯಲ್ಲಿ 5 ಬುಡಕಟ್ಟು ಮತಗಟ್ಟೆ ಸ್ಥಾಪಿಸಿದ ಆಯೋಗ. ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶಗಳಲ್ಲಿ ಮೊದಲ ಬಾರಿಗೆ ವಿಶೇಷ ಮತಗಟ್ಟೆ

12:48 PM

ಬಿಜೆಪಿ ನನಗೆ ಅನ್ಯಾಯ ಮಾಡಿಲ್ಲ, ನಾನು ತೃಪ್ತ: ಯಡಿಯೂರಪ್ಪ

ಬಿಜೆಪಿಯಲ್ಲಿ ನನಗೆ ಯಾವುದೇ ಅನ್ಯಾಯವಾಗಿಲ್ಲ. ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ಗೌರವ ಸಿಕ್ಕಿರುವುದರಿಂದ ಸಂತೃಪ್ತಿಯಿಂದ ಇದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಸ್ವತಃ ರಾಜೀನಾಮೆ ನೀಡಿದೆ. ನಂತರ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಬಿಜೆಪಿಯಿಂದ ನನಗೆ ಯಾವುದೇ ಅನ್ಯಾಯವಾಗಿಲ್ಲ. ನನ್ನದು ಒಂದೇ ಗುರಿ. ಈ ಚುನಾವಣೆಯಲ್ಲಿ 135 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡಬೇಕು. ಬಳಿಕ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದು

ಯಡಿಯೂರಪ್ಪ ಹೇಳಿದ್ದೇನು?

12:21 PM

ಮತ ಹಕ್ಕು ಚಲಾಯಿಸಿ: ಸೂದ್

ಮತದಾರರು ತಮ್ಮ ಹಕ್ಕು ಚಲಾಯಿಸಲು ಪೊಲೀಸ್ ಮಹಾನಿರ್ದೇಶಕರ ಸಂದೇಶ. ಸಾರ್ವಜನಿಕರು ತಮ್ಮ ಮತದಾನದ ಹಕ್ಕು ತಪ್ಪದೇ ಚಲಾಯಿಸಬೇಕು. ಭದ್ರತೆಗಾಗಿ ಪೊಲೀಸ್ರು ಬೇಕಾದ ಎಲ್ಲಾ ಕ್ರಮ ಕೈಗೊಂಡಿದ್ದಾರೆ. ಮತದಾರರು ಹಾಗೂ ಅಧಿಕಾರಿಗಳು ಬ್ಯುಸಿ ಅನ್ನೊದನ್ನ ಬಿಟ್ಟು ಬಿಡುವು ಮಾಡಿಕೊಂಡು ಮತ ಚಲಾಯಿಸಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಂದೇಶ.

11:51 AM

ಮತದಾನಕ್ಕೆ ಬೆಂಗಳೂರು ನಗರ ಹೇಗೆ ಸಜ್ಜಾಗಿದೆ?

ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ  ಪ್ರಚಾರ ಸೋಮವಾರ ಸಂಜೆಯೇ ಮುಗಿದಿದೆ.ಮತದಾನಕ್ಕೆ ಇನ್ನು ಒಂದು ದಿನ ಬಾಕಿ ಇದ್ದು ಸಿಲಿಕಾನ್‌ ಸಿಟಿ ಬೆಂಗಳೂರು ಸಜ್ಜಾಗಿದೆ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮತಗಟ್ಟೆ ಸಿದ್ದತಾ ಪರಿಶೀಲನೆ ನಡೆದಿದ್ದು,  ಸ್ಟ್ರಾಂಗ್‌ ರೂಂ ನಲ್ಲಿರುವ  EVMಗೆ ಭಾರೀ ಬಿಗಿ ಭದ್ರತೆ ನೀಡಲಾಗಿದೆ. ಇನ್ನು ಯಲಹಂಕದಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಸಿದ್ದತೆಯಾಗಿದ್ದು ಶೇಷಾದ್ರಿಪುರಂ ಶಾಲೆಯಲ್ಲಿ ಸಿದ್ದತಾ ಪರಿಶೀಲನೆ ನಡೆಸಲಾಗಿದೆ . ಹಾಗೇ 398 ಮತಗಟ್ಟೆಗಳತ್ತ  ಚುನಾವಣ ಸಿಬ್ಬಂದಿ ಸಾಗುತ್ತಿದ್ದು,  ಒಟ್ಟು 122  ವಸ್ತುಗಳೊಂದಿಗೆ ರೆಡಿಯಾಗಿದ್ದಾರೆ. EVM ಯಂತ್ರ ಗುರುತಿನ ಶಾಹಿ ಸೇರಿ ವಿವಿಧ ವಸ್ತುಗಳನ್ನು ವಿತರಣೆ ಮಾಡಲಾಗಿದೆ.

11:45 AM

ಚುನಾವಣೆಗೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ: ಅಲೋಕ್ ಕುಮಾರ್

ಚುನಾವಣೆಗೆ ರಾಜ್ಯದಲ್ಲಿ 84000 ಸಾವಿರ ಸಿಬ್ಬಂದಿಯನ್ನು ಮತದಾನದ ದಿನ ನಿಯೋಜನೆ ಮಾಡಲಾಗಿದೆ. 185 ಬಾರ್ಡರ್ ಚೆಕ್ ಪೋಸ್ಟ್ ಗಳಲ್ಲಿ ನೆರೆ ರಾಜ್ಯಗಳ ಅಧಿಕಾರಿಗಳ ಸಂಪರ್ಕದಲ್ಲಿದ್ದೀವಿ. ಅಕ್ರಮ ಮತದಾನದ ಸಲುವಾಗಿ ಹೊರಗಿನಿಂದ ಬರುವವರನ್ನ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಎಡಿಜಿಪಿಯಿಂದ ಎಲ್ಲಾ ರೇಂಜ್ ಐಜಿ, ಎಸ್ಪಿ, ಎಎಸ್‌ಪಿಗಳು ನಿನ್ನೆಯಿಂದ ನೈಟ್ ರೌಂಡ್ಸ್ ಇದ್ದಾರೆ . ಇವತ್ತು ಕೂಡ ಎಲ್ಲಾ ಅಧಿಕಾರಿಗಳ ನೈಟ್ ರೌಂಡ್ಸ್ ಮಾಡುವಂತೆ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಊರಿದ್ದು, ಹೊರ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ರೆ, ಅಂತಹ ಮತದಾರರಾಗಿದ್ರೆ ಅಂತಹವರನ್ನು ಮಾತ್ರ ಒಳಗೆ ಬಿಡ್ತೀವಿ. ಹೊರಗಿನ ರಾಜ್ಯದ ಜನರನ್ನ ತಡೆದು ವಾಪಸ್ ಕಳಿಸುವಂತೆ ಚೆಕ್ ಪೋಸ್ಟ್ ಗಳಲ್ಲಿ ಸೂಚನೆ ನೀಡಲಾಗಿದೆ. ಅಕ್ರಮ ಮತದಾನ ತಡೆಯುವ ಸಲುವಾಗಿ ಹೊರಗಿನ ರಾಜ್ಯದವರು ಒಳಗೆ ಬರದಂತೆ ತಡೆಯಲು ಹದ್ದಿನ ಕಣ್ಣಿಡಲಾಗಿದೆ, ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

11:26 AM

Bengaluru- ಸ್ಲಂಗಳಲ್ಲಿ ಸಿಕ್ತು 20 ಕೋಟಿ ಮೌಲ್ಯದ ಡ್ರಗ್ಸ್! ಚುನಾವಣೇಲಿ ಡ್ರಗ್ಸ್‌ ನಶೆಯಲ್ಲಿ ತೇಲಾಡಲು ಪ್ಲ್ಯಾನ್‌!

 ರಾಜ್ಯದಲ್ಲಿ 16ನೇ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ, ಈ ವೇಳೆ ಸತತವಾಗಿ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಶೆಯಲ್ಲಿ ತೇಲಾಡಬೇಕು ಎಂದು ಸಂಗ್ರಹಣೆ ಮಾಡಿ ಸರಬರಾಜು ಮಾಡಲು ಮುಂದಾಗಿದ್ದ 20 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತದಾನದ ದಿನಗಳಲ್ಲಿ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿರುತ್ತದೆ. ಈ ವೇಳೆ ನಶೆಯಲ್ಲಿ ತೇಲುವಂತೆ ಮಾಡುವ ಡ್ರಗ್ಸ್‌ಗೆ ಭಾರಿ ಬೇಡಿಕೆ ಬರಲಿದೆ ಎಂದು ಆಲೋಚನೆ ಮಾಡಿದ್ದ ಡ್ರಗ್ಸ್‌ ಪೆಡ್ಲರ್‌ಗಳು ಮೂಟೆಗಟ್ಟಲೆ ಗಾಂಜಾ, ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ, ಆಶಿಸ್ ಆಯಿಲ್ ಸಂಗ್ರಹಣೆ ಮಾಡಿಕೊಂಡಿದ್ದರು. ಬರೋಬ್ಬರಿ 20 ಕೋಟಿ ಮೌಲ್ಯದ ಡ್ರಗ್ಸ್‌ ಸಂಗ್ರಹಿಸಿ ಹಂಚಲು ಮುಂದಾಗಿದ್ದ 19 ಡ್ರಗ್ಸ್‌ ಪೆಡ್ಲರ್‌ಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಅವರಿಂದ ಇಪ್ಪತ್ತು ಕೋಟಿ ರೂ. ಮೌಲ್ಯದ ನಶೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿ

11:20 AM

ಭಜರಂಗಬಲಿಯ ಮೊರೆ ಹೋದ ಡಿಕೆಶಿ!

ಬೆಂಗಳೂರು: ಚುನಾವಣೆ ಗೆಲ್ಲಲು ದೇವರ ಮೊರೆ ಹೋದ ಡಿ.ಕೆ. ಶಿವಕುಮಾರ್. ಗೆಲುವಿನ ಮಂತ್ರಕ್ಕಾಗಿ ಭಜರಂಗಬಲಿಗೆ ವಿಶೇಷ ಪೂಜೆ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ. ಮೈಸೂರ್ ಬ್ಯಾಂಕ್ ಸರ್ಕಲ್‌ನ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ಆಂಜನೇಯನಿಗೆ ಹೋಮ ಕಾರ್ಯದಲ್ಲಿ ಭಾಗಿಯಾಗಿದ್ದಾಕೆ ಡಿಕೆಶಿ. ಯೋಗ ನರಸಿಂಹಸ್ವಾಮಿ ಹೋಮ ನಡೆಸಿದ ಕೆಪಿಸಿಸಿ ಅಧ್ಯಕ್ಷ,
ವಯ್ಯಾಲಿಕಾವಲ್ ಭೈರಸಂದ್ರದಲ್ಲಿಯಲ್ಲಿಯೂ ಹೋಮ ನಡಸಿದ್ದಾರೆ ಡಿಕೆಶಿ. 

11:15 AM

ಹನುಮಾನ್ ಚಾಲೀಸ್ ಪಠಿಸಿದ ಸಿಎಂ ಬೊಮ್ಮಾಯಿ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧಿಸುವ ಪ್ರಸ್ತಾಪವಿಟ್ಟ ಬೆನ್ನಲ್ಲೇ ಕೇಸರಿ ಪಾಳಯದಲ್ಲಿ ಹನುಮಾನ್ ಚಾಲೀಸ್ ಪಠಿಸುವ ಅಭಿಯಾನ ಶುರುವಾಗಿದೆ. ಮತದಾನದ ಹಿಂದಿನ ದಿನವೂ ಬಿಜೆಪಿ ನಾಯಕರು ಹಾಗೂ ಕೇಸರ ಸಂಘಟನೆಗಳ ಕಾರ್ಯಕರ್ತರು ಹಲವು ದೇವಸ್ಥಾನಗಳಲ್ಲಿ ಹನುಮಾನ್ಚ ಚಾಲೀಸ್ ಪಠಿಸಿದ್ದು, ಹುಬ್ಬಳ್ಳಿಯ ವಿಜಯನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನುಮಾನ್ ಚಾಲೀಸ್ ಪಠಿಸಿದರು. 

 

| Karnataka CM Basavaraj Bommai along with his supporters recites Hanuman Chalisa at Hanuman Mandir in Hubbali's Vijay Nagar.

(Source: CMO) pic.twitter.com/ihiJhcD8bL

— ANI (@ANI)

11:01 AM

Mysore: ಸಾಂಸ್ಕೃತಿಕ ನಗರಿಯ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಡಿಕೆಶಿ, ಸಿದ್ದು

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಗ್ಗೆ 12ಗಂಟೆಗೆ ಮೈಸೂರಿಗೆ ಆಗಮಿಸಲಿದ್ದು  ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಮಾತುಕತೆ ಬಳಿಕ ಉಭಯ ನಾಯಕರು ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಡಿಕೆಶಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದರೆ, ಸಿದ್ದರಾಮಯ್ಯ ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. 

 

 

10:54 AM

40 ವರ್ಷಗಳಿಂದ ವರುಣದಲ್ಲಿ ಏನೂ ಕೆಲಸವಾಗಿಲ್ಲ: ವಿ.ಸೋಮಣ್ಣ

ಈ ಬಾರಿ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ ಅತೀವ ಕುತೂಹಲ ಸೃಷ್ಟಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಬಿಜೆಪಿಯಿಂದ ವಿ ಸೋಮಣ್ಣ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಕಸ್ಮಾತ್ ಕಾಂಗ್ರೆಸ್ ಬಹುಮತ ಪಡೆದ ಏಕೈಕ ಪಕ್ಷವಾಗಿ ಹೊರಹೊಮ್ಮಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಇಂಥ ಕ್ಷೇತ್ರದಲ್ಲಿ ಮತ ಕಣ ಹೇಗಿದೆ?

10:47 AM

ಕಾಂಗ್ರೆಸ್‌ ನಾಯಕರಿಗೆ ಮತ್ತೆ ಐಟಿ ದಾಳಿ ಬಿಸಿ

ಕಾಂಗ್ರೆಸ್‌ ನಾಯಕರ ಮನೆಗಳ ಮೇಲಿನ ಐಟಿ ದಾಳಿ ಮುಂದುವರಿದಿದ್ದು, ಸೋಮವಾರ ಶಿಗ್ಗಾಂವಿ ಮತ್ತು ಧಾರವಾಡಗಳಲ್ಲಿನ ಕಾಂಗ್ರೆಸ್‌ ನಾಯಕರ ಮನೆ, ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಸಿಎಂ ಪ್ರತಿಸ್ಪರ್ಧಿ, ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ಖಾನ್‌ ಪಠಾಣ್‌ಗೆ ಸೇರಿದ ಹೋಟೆಲ್‌ ಮೇಲೆ ದಾಳಿ ನಡೆಸಲಾಗಿದೆ. ಹಾವೇರಿಯ ಬಂಕಾಪುರ ಟೋಲ್‌ ಬಳಿ ಇರುವ ಎನ್‌ಎಚ್‌-4 ಗ್ರ್ಯಾಂಡ್‌ ಹೋಟೆಲ್‌ ಮೇಲೆ ದಾಳಿ ನಡೆದಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:46 AM

ಶಿಗ್ಗಾವಿ: ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿರುವ ಕೈ ಅಭ್ಯರ್ಥಿಗೆ ಶಾಕ್

ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ  ಪ್ರಚಾರ ಸೋಮವಾರ ಸಂಜೆಯೇ ಮುಗಿದಿದೆ. ಈ ಮಧ್ಯೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಖಾನ್‌ ಪಠಾಣ್‌ಗೆ ಸೇರಿದ ಹೋಟೆಲ್‌ ಮೇಲೆ  ಚುನಾವಣಾ ವಿಚಕ್ಷಣ ದಳ ದಾಳಿ ಮಾಡಿ,  ಆರು ಲಕ್ಷ ರೂಪಾಯಿ ವಶಕ್ಕೆ ಪಡೆದಿದೆ. ಅದಲ್ಲದೆ  ಈ ಹಣವನ್ನು  ಮತದಾರರಿಗೆ ಹಂಚಲು ಸಂಗ್ರಹಿಸಿ ಇಡಲಾಗಿದೆ ಎನ್ನಲಾಗಿದ್ದು, ಒಂದೊಂದು ಕವರ್‌ನಲ್ಲಿ  ಮೂರು ಸಾವಿರ ರೂಪಯಿ ಹಾಕಿಡಲಾಗಿತ್ತು ಎನ್ನಲಾಗಿದೆ. ಇನ್ನು ಘಟನೆ ಸಂಬಂಧ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು  ಯಾಸೀರ್‌ ಖಾನ್‌ ಪಠಾಣ್‌ ಸಿ ಎಂ ಬಸವರಾಜ ಬೊಮ್ಮಾಯಿ  ವಿರುದ್ದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು,ಮೊದಲು ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರಾಗಿದ್ದರು.

ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

10:44 AM

ಕುರುಕ್ಷೇತ್ರ ಅಖಾಡದಲ್ಲಿ ಕುರುಡು ಕಾಂಚಾಣ, ಮರದ ಬುಡದಲ್ಲಿತ್ತು ಗರಿ ಗರಿ ನೋಟು..!

ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ  ಪ್ರಚಾರ ಸೋಮವಾರ ಸಂಜೆಯೇ ಮುಗಿದಿದೆ.ಮತದಾನಕ್ಕೆ ಇನ್ನು ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿರುವ ಘಟನೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚಿಕ್ಕಲಸಂದ್ರದಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡೆ ಶೋಭಾ ಗೌಡ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.  ವಿಚಕ್ಷಣ ದಳ ಪರಿಶೀಲನೆ ನಡೆಸಿದ್ದು, ರಸ್ತೆ ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ  ಮರದ ಬುಡದಲ್ಲಿ ಹಣ ಪತ್ತೆಯಾಗಿದೆ, ಅದಲ್ಲದೆ ಬ್ಯಾಗ್‌ನಲ್ಲಿ ಮೂರುಲಕ್ಷಕ್ಕು ಅಧಿಕ ಹಣ ಸಿಕ್ಕಿದ್ದು ಕೈ ಕಾರ್ಯಕರ್ತರನ್ನು ವಶಕ್ಕೆ ಪಡೆದು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

6:38 AM IST:

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಒಟ್ಟು ರಾಜ್ಯದಾದ್ಯಂತ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದಿವ್ಯಾಂಗರಿಗಾಗಿ 100 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ 29 ಸಾವಿರ ವೆಬ್‌ಕಾಸ್ಟ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 12 ಸಾವವಿರ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.

8:18 PM IST:

ರಾಣಿಬೆನ್ನೂರು ತಾಲೂಕು‌ ಕೋಡಿಯಾಲ ಗ್ರಾಪಂ ಮತಗಟ್ಟೆಯನ್ನು ಅತ್ಯಂತ ಸುಂದರವಾಗಿ ಶೃಂಗರಿಸಲಾಗಿದೆ. ಇದೀಗ ಮತಗಟ್ಟೆ ಮದುವೆ ಮನೆಯಂತೆ ಕಂಗೊಳಿಸುತ್ತಿದೆ.

7:35 PM IST:

ಸಿಸಿಬಿ, ಫ್ಲೈಯಿಂಗ್​ ಸ್ಕ್ವಾಡ್​ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ 1.90 ಕೋಟಿ ಸೀಜ್​ ಮಾಡಲಾಗಿದೆ. ಬೆಂಗಳೂರಿನ ಅಕ್ಕಿಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಪದ್ಮಶ್ರೀ ಫಾರ್ಮಾ ಕಚೇರಿಯಲ್ಲಿ ಹಣ ಸಂಗ್ರಹಿಸಲಾಗಿತ್ತು. ಜಂಟಿ ಆಯುಕ್ತ ಶರಣಪ್ಪ ತಂಡದಿಂದ ಕಾರ್ಯಾಚರಣೆ ನಡೆದಿದೆ. ಹಣವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಕಳುಹಿಸಿದ್ದು, ಮತದಾರರಿಗೆ ಹಂಚಲು ಹಣ ಸಂಗ್ರಹಿಸಿರುವ ಅನುಮಾನವಿದೆ. ಹಣ ವಶಕ್ಕೆ ಪಡೆದು ಪೊಲೀಸರಿಂದ ತನಿಖೆ ನಡೆಸುತ್ತಿದ್ದಾರೆ. ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

 

 

6:40 PM IST:

ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನಕ್ಕೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಡಾ. ಕೆ.ವಿ.ರಾಜೇಂದ್ರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದು ಪರಿಶೀಲನೆ ನಡೆಸಿದ್ದಾರೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲ ವ್ಯಕ್ತಿಗಳಿಂದ ಮೈಸೂರು ಜಿಲ್ಲೆಯಲ್ಲಿ 2667 ಮತ ಚಾಲಾವಣೆಯಾಗಿದೆ. ಮತಗಟ್ಟೆಗಳಿಗೆ ವೀಲ್ ಚೇರ್ ಹಾಗೂ ಬೂತುಗನ್ನಡಿ  ಸರಬರಾಜು ಮಾಡಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬರಲು ಅನುಕೂಲ ಆಗುವಂತೆ ವಾಹನ ಇರಲಿದೆ. ಮೇಲುಸ್ತುವಾರಿಗೆ ಹುಣಸೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ನೇಮಿಸಲಾಗಿದೆ. 

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

6:35 PM IST:

ನೆರೆ ರಾಜ್ಯಗಳಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ನಿಯೋಜಿತರಾದ ಹೆಚ್ಚುವರಿ ಪೋಲಿಸ್ ಮತ್ತು ಹೋಮ್ ಗಾರ್ಡ್ ಗಳ ವಿವರ ಹೀಗಿದೆ.

 

ನೆರೆ ರಾಜ್ಯಗಳಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ನಿಯೋಜಿತರಾದ ಹೆಚ್ಚುವರಿ ಪೋಲಿಸ್ ಮತ್ತು ಹೋಮ್ ಗಾರ್ಡ್ ಗಳ ವಿವರ ಹೀಗಿದೆ. pic.twitter.com/xAL8OTv6Aq

— Chief Electoral Officer, Karnataka (@ceo_karnataka)

6:33 PM IST:

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ.

 

 

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ. pic.twitter.com/Vx42RaaE5G

— Chief Electoral Officer, Karnataka (@ceo_karnataka)

6:33 PM IST:

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ.

 

 

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಪಡೆದ ನಾಮಪತ್ರಗಳು ಹಾಗೂ ಒಟ್ಟು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಂಕಿ ಅಂಶಗಳ ವಿವರ ಹೀಗಿದೆ. pic.twitter.com/Vx42RaaE5G

— Chief Electoral Officer, Karnataka (@ceo_karnataka)

6:19 PM IST:

ಚಾಮರಾಜನಗರ: ಬಿಎಸ್ಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಆರೋಪ. ದಲಿತ ಸಂಘಟನೆ ಹೆಸರಲ್ಲಿ ಕರಪತ್ರ ಮುದ್ರಿಸಿ ಅಪಪ್ರಚಾರ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಸೇರಿ ನಾಲ್ವರ ವಿರುದ್ಧ ಎಫ್ಐಆರ್. ಮಾಜಿ ಸಂಸದ ಶಿವಣ್ಣ,ಕಾಂಗ್ರೆಸ್ ಮುಖಂಡರಾದ ಎಸ್ ನಂಜುಂಡಸ್ವಾಮಿ ಹಾಗೂ ಬಿಕೆ ರವಿಕುಮಾರ್ ವಿರುದ್ಧ ಎಫ್ಐಆರ್. ಬೇರೆ ಪಕ್ಷದಿಂದ ಹಣ ಪಡೆದಿದ್ದಾರೆಂದು ಅಪಪ್ರಚಾರ. ಬಿಎಸ್‌ಪಿ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಯತ್ನ. ಸಾಮಾಜಿಕ ಜಾಲತಾಣಗಳಲ್ಲಿ ಕರಪತ್ರ ಮುದ್ರಿಸಿ ವೈರಲ್. ಬಿಎಸ್ಪಿ ಅಭ್ಯರ್ಥಿ ಹ.ರಾ.ಮಹೇಶ್ ರಿಂದ ದೂರು. ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಎಫ್ಐಆರ್.

6:13 PM IST:

ಕನ್ನಡ ನಾಡಿನ ಸಮಸ್ತ ಮತದಾರ ಬಂಧುಗಳೆ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಈ ನಾಡಿನ ಪ್ರಜೆಗಳಾದ ನಾವು, ನೀವೆಲ್ಲರೂ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸುರಕ್ಷಿತ, ಸುಭದ್ರ ಮತ್ತು ಸಶಕ್ತ ಕರ್ನಾಟಕ  ನಿರ್ಮಾಣ ಮಾಡಲು ನೀವೆಲ್ಲರೂ ತಪ್ಪದೇ ನಿಮ್ಮ ಹಕ್ಕು ಚಲಾಯಿಸಬೇಕು. ದಯವಿಟ್ಟು ನಾಳೆ (ಮೇ 10 ರಂದು) ನಡೆಯುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಎಲ್ಲ ಮತದಾರರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ. 

 

ಕನ್ನಡ ನಾಡಿನ ಸಮಸ್ತ ಮತದಾರ ಬಂಧುಗಳೆ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಈ ನಾಡಿನ ಪ್ರಜೆಗಳಾದ ನಾವು, ನೀವೆಲ್ಲರೂ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಸುರಕ್ಷಿತ, ಸುಭದ್ರ ಮತ್ತು ಸಶಕ್ತ ಕರ್ನಾಟಕ ನಿರ್ಮಾಣ ಮಾಡಲು ನೀವೆಲ್ಲರೂ ತಪ್ಪದೇ ನಿಮ್ಮ ಹಕ್ಕು ಚಲಾಯಿಸಬೇಕು. ದಯವಿಟ್ಟು ನಾಳೆ (ಮೇ 10…

— Basavaraj S Bommai (@BSBommai)

5:50 PM IST:

ಚಿತ್ರದುರ್ಗ:  ಚಿತ್ರದುರ್ಗದಲ್ಲಿ ಮತಗಟ್ಟೆಗೆ ಮತದಾರರ ಸೆಳೆಯಲು ಚಿತ್ರದುರ್ಗ ಜಿಲ್ಲಾಡಳಿತ, ಸ್ವೀಪ್ ಸಮಿತಿಯಿಂದ ವಿಭಿನ್ನ ಪ್ರಯತ್ನ ಮಾಡಲಾಯ್ತು. ಮತದಾನ ಹೆಚ್ಚಿಸಲು ವಿಶೇಷ ಚೇತನ ಮತದಾನ ಕೇಂದ್ರ, ಯುವ ಮತದಾನ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಮತಗಟ್ಟೆಗೆ ಏಳು ಸುತ್ತಿನ ಕೋಟೆ ಮಾದರಿಯ ಮೆರಗು ನೀಡಲಾಗಿದೆ. ಇದರ ಜೊತೆಗೆ ಪಿಂಕ್ ಮತಗಟ್ಟೆ, ಮಾದರಿ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, ವಿಶೇಷ ಮತಗಟ್ಟೆಗಳಿಗೆ ಜಿ.ಪಂ ಸಿಇಓ ಎಂ.ಎಸ್.ದಿವಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Karnataka elections 2023: ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳಲ್ಲಿ ಕರೆತರುವಂತಿಲ್ಲ: ಇಲ್ಲಿದೆ ಕಾರಣ

5:47 PM IST:

ಕೋಲಾರ : ಚುನಾವಣೆ ತಯಾರಿ ಕುರಿತು, ಕೋಲಾರದಲ್ಲಿ ಎಸ್ಪಿ ನಾರಾಯಣ ಹೇಳಿಕೆ. 101 ನೀತಿ ಸಂಹಿತ ಉಲ್ಲಂಘನೆ ಕೇಸ್ ದಾಖಲು. ಸಂಚಾರ ನಿಯಮ ಉಲ್ಲಂಘನೆ ಸಂಬಂಧ 3624 ಪ್ರಕರಣ ದಾಖಲು,18 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ. 115 ರೌಡಿ ಶೀಟರ್ ಮನೆಗಳ ಪರಿಶೀಲನೆ ಆಗಿದೆ. 144 ಸೆಕ್ಷನ್ ಜಾರಿ ಇದೆ,6 ಕ್ಕಿಂತ ಹೆಚ್ಚು ಜನರು ಪ್ರಚಾರ ಮಾಡಬಾರದು. ಶಾಂತಿಯುತ ಮತದಾನಕ್ಕಾಗಿ 1 ಎಸ್ಸಿ,1 ಎಎಸ್ಪಿ, 5 ಡಿವೈಎಸ್ಪಿ ಸೇರಿದಂತೆ ಒಟ್ಟು 1626 ಪೊಲೀಸ್ ಅಧಿಕಾರಿಗಳು ಬಳಕೆ. 101 ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, ಗಡಿ ಪ್ರದೇಶದಲ್ಲಿ 21 ತಪಾಸಣಾ ಕೇಂದ್ರ,30 ಫ್ಲ್ಯಯಿಂಗ್ ಸ್ಕ್ವಾಡ್ ಬಳಕೆ. ಬಿಎಸ್ಎಫ್ ಹಾಗೂ 4 KSRP ತುಕಡಿ ಬಳಕೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಂದ ಶೇ.90 ರಷ್ಟು ಅಂಚೆ ಮತದಾನವಾಗಿದೆ.

 

5:14 PM IST:

ಮತಗಟ್ಟೆ ಯಾವುದು, ಅಲ್ಲಿ ಯಾವ ಬೂತ್ ಅಂತ ಅಲ್ಲಿಗೆ ಹೋಗಿ ಟೈಮ್ ವೇಸ್ಟ್ ಮಾಡೋ ಮೊದಲು ವೆಬ್‌ಸೈಟಿನಲ್ಲಿಯೇ ಚೆಕ್ ಮಾಡಿಕೊಂಡರೆ ಹೋದರೆ ಬೆಸ್ಟ್. ಅದಕ್ಕೇನು ಮಾಡಬೇಕು? ಚೆಕ್ ಮಾಡಿಕೊಳ್ಳೋದು ಹೀಗೆ?

ಇಲ್ಲಿ ಕ್ಲಿಕ್ ಮಾಡಿ

4:30 PM IST:

ಜಯನಗರ ಕ್ಷೇತ್ರದಲ್ಲಿ ಹಲವಾರು ಮತಗಟ್ಟೆಗಳಲ್ಲಿ  ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಹಾಗೂ ಬೆಂಬಲಿಗರು ಭಯದ ವಾತವರಣವನ್ನು ಉಂಟುಮಾಡುತ್ತಿದ್ದಾರೆ ಎಂದು ರಾಮಲಿಂಗ ರೆಡ್ಡಿ ಹಾಗೂ ಸೌಮ್ಯ ರೆಡ್ಡಿಯಿಂದ ದೂರು ಸಲ್ಲಿಕೆ 

4:11 PM IST:

ಮೋಚಾ ಚಂಡಮಾರುತ ಪ್ರಬಲವಾಗಿರುವ ಕಾರಣ, ಮೇ.10 ರಂದು ಮತದಾನಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮಂಗಳವಾರ ಉತ್ತರಕನ್ನಡ, ಹುಬ್ಬಳ್ಳಿ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ನಾಳೆ ಮಧ್ಯಾಹ್ನದ ವೇಳೆ ಭಾರೀ ಮಳೆಯಾಗುವ ಸೂಚನೆ ಕೂಡ ಹವಮಾನ ಇಲಾಖೆ ನೀಡಿದೆ.

3:45 PM IST:

ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ. ಕೆಂಪಣ್ಣ ಮನವಿ,. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಜನಸಾಮಾನ್ಯರು ನಲುಗಿ ಹೋಗಿದ್ದಾರೆ‌. ಸಾರ್ವಜನಿಕ‌ ಕಾಮಗಾರಿಯಲ್ಲಿ ತಲೆ ಎತ್ತಿರುವ 40% ಕಮಿಷನ್ ಭ್ರಷ್ಟಾಚಾರ . ಹಲವು ಗುತ್ತಿಗೆದಾರರನ್ನು ಬಲಿ ತೆಗೆದುಕೊಂಡಿದೆ. ಹಾನಿಕರ ಮತ್ತು ಅಪಾಯಕಾರಿ ಕಾಮಗಾರಿಗೆ ಸಾರ್ವಜನಿಕರು ಶರಣಾಗುವಂತೆ ಮಾಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನವು ಪವಿತ್ರವಾದುದು.ಮತದಾರರು ತಮ್ಮ‌ ಆತ್ಮಸಾಕ್ಷಿಯ ಅನುಸಾರ ಮತದಾನ ಮಾಡುವರೆಂಬ ವಿಶ್ವಾಸವಿದೆ ಎಂದು ಕೆಂಪಣ್ಣ ಹೇಳಿಕೆ ಬಿಡುಗಡೆ. ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ . ರೋಕ್ಷವಾಗಿ ಬಿಜೆಪಿಯವರಿಗೆ ಟಾಂಗ್ ನೀಡಿರುವ ಕೆಂಪಣ್ಣ ಪತ್ರ..

3:08 PM IST:

ದಾವಣಗೆರೆಯ ಏಳು ಕಡೇ ಮಸ್ಟರಿಂಗ್ ಕಾರ್ಯ ಆರಂಭಗೊಂಡಿದೆ. ಏಳು ವಿಧಾನಸಭಾ ಕ್ಷೇತ್ರಗಳಿಗೆ ಮತದಾನಕ್ಕೆ ಅಂತಿಮ ಹಂತದ ಸಿದ್ದತೆ ನಡೆಯುತ್ತಿದ್ದು, 1685 ಮತದಾನ ಕೇಂದ್ರಗಳ ಸ್ಥಾಪಿಸಲಾಗಿದೆ. 338 ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳು, 1347 ಸಾಮಾನ್ಯ ಮತಗಟ್ಟೆಗಳು, ಜಿಲ್ಲೆಯಲ್ಲಿ 1442553 ಮತದಾರರ ನೋಂದಣಿ, 721964 ಪುರುಷರು, 720004 ಮಹಿಳಾ ಮತದಾರರು, ಮತದಾನಕ್ಕೆ ಕಾತುರದಿಂದ ಕಾಯುತ್ತಿರುವ 35454 ಹೊಸ ಮತದಾರರು, ಮತಗಟ್ಟೆಗೆ 298 ಮೈಕ್ರೋ ಅಬ್ಸರ್ವರ್, 2026 ಮತಗಟ್ಟೆ ಅಧಿಕಾರಿಗಳು, 4052ಸಿಬ್ಬಂದಿ ನೇಮಕಗೊಂಡಿದ್ದಾರೆ.  ಒಟ್ಟು 8104 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ವಿಶೇಷ ಚೇತನ ಮತದಾರರಿಗೆ ಸಹಾಯಕರ ನೇಮಕ. 23 ರೌಡಿಶೀಟರ್ ಗಡಿಪಾರು, ಗುಂಡಾ ಕಾಯ್ದೆ ಓರ್ವನ ಬಂಧನ. ಶೇ.85 ಮತದಾನ ಗುರಿ ಹೊಂದಿರುವ ಜಿಲ್ಲಾಡಳಿತ.

2:45 PM IST:

ಚುನಾವಣೆ ಕೆಲಸಕ್ಕೆ ಹೆಚ್ಚುವರಿ KSRTC ಬಸ್ ನಿಯೋಜನೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ‌KSRTC ಬಸ್ ಸಮಸ್ಯೆ. ಬಸ್ ಸಮಸ್ಯೆ ಆಗಿರುವ ರೂಟ್‌ಗಳಿಗೆ ಬಿಎಂಟಿಸಿ ಬಸ್. ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಓಡಿಸಲು ನಿರ್ಧರಿಸಿರುವ KSRTC ಸಂಸ್ಥೆ. ಸ್ಥಳದಲ್ಲಿ KSRTC ಅಧಿಕಾರಿಗಳು ಉಪಸ್ಥಿತಿ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಡಲಿರುವ ಬಿಎಂಟಿಸಿ. ಬಸ್ ಗಳು

2:33 PM IST:

ಮದ್ಯಪಾನ ಮಾಡಿದ ಕರ್ತವ್ಯನಿರತ ಮತಗಟ್ಟೆ ಅಧಿಕಾರಿಗಳು. ಮದ್ಯಪಾನ ಮಾಡಿದವರನ್ನು ಪತ್ತೆ ಹಚ್ಚಿದ ಚುನಾವಣಾಧಿಕಾರಿ. ಮಧ್ಯಪಾನ ಮಾಡಿದ ಹಿನ್ನೆಲೆ ಮೆಗ್ಗಾನ್ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಿದ ಚುನಾವಣಾ ಅಧಿಕಾರಿಗಳು. ಆ್ಯಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ ಚುನಾವಣಾಧಿಕಾರಿ. ರಮೇಶ್ ಮತ್ತು ಮಾಲತೇಶ್ ಎಂ ಬಿ ಇಬ್ಬರು ಅಧಿಕಾರಿಗಳು ಮಧ್ಯಪಾನ ಮಾಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದರು. ಜೊತೆಗೆ ತಮ್ಮ ಬ್ಯಾಗಿನಲ್ಲಿ ಮದ್ಯದ ಸ್ಯಾಚೆಟ್ಸ್ ಕೂಡ ತಂದಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಮೆಡಿಕಲ್ ಟೆಸ್ಟಿಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ ಚುನಾವಣಾಧಿಕಾರಿ. ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಇಬ್ಬರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ.

2:27 PM IST:

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಮತದಾನ ಮಾಡಿ ಬಂದವರಿಗೆ ಉಚಿತ ಊಟ, ತಿಂಡಿ ಕೊಡುವುದಾಗಿ ಕೆಲವು ಹೋಟೆಲ್‌ಗಳು ಘೋಷಣೆ ಮಾಡಿಕೊಂಡಿದ್ದರು. ಆದರೆ, ಯಾವುದೇ ಹೋಟೆಲ್‌ಗಳಲ್ಲಿ ಉಚಿತ ಊಟ ಅಥವಾ ತಿಂಡಿ ನೀಡುವಂತಿಲ್ಲ ಎಂದು ಬೃಹತ್‌ ಬೆಂಗಳುರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಫ್ರೀ ತಿಂಡಿ ಸಿಗುತ್ತೆ ಎಂಬ ಖುಷಿಯಲ್ಲಿದ್ದ ಮತದಾರರಿಗೆ ಶಾಕ್

1:29 PM IST:

ಬೆಳಗಾವಿ: ನಾಳೆ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಹಿನ್ನೆಲೆಯಲ್ಲಿ ಕರ್ನಾಟಕ - ಮಹಾರಾಷ್ಟ್ರ - ಗೋವಾ ಗಡಿಭಾಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮಹಾರಾಷ್ಟ್ರ, ಗೋವಾ ಜೊತೆ ಗಡಿ ಹಂಚಿಕೊಂಡ ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್. ಬೆಳಗಾವಿ ಜಿಲ್ಲೆಯ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ. ಮಹಾರಾಷ್ಟ್ರ, ಗೋವಾದಿಂದ ಆಗಮಿಸುವ ಪ್ರತಿಯೊಂದು ವಾಹನಗಳ ತಪಾಸಣೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 58 ಚೆಕ್‌ಪೋಸ್ಟ್‌ಗಳ ಸ್ಥಾಪಿಸಿದ್ದು, 24 ಅಂತರ್‌ರಾಜ್ಯ ಚೆಕ್‌ಪೋಸ್ಟ್, 22 ಅಂತರ್‌ಜಿಲ್ಲಾ ಚೆಕ್‌ಪೋಸ್ಟ್, ಜಿಲ್ಲೆಯೊಳಗೆ 12 ಚೆಕ್‌ಪೋಸ್ಟ್‌ಗಳ ಸ್ಥಾಪನೆಯಾಗಿದೆ. ಕೊನೆ ಗಳಿಗೆಯಲ್ಲಿ ನಡೆಯಬಹುದಾದ ಅಕ್ರಮ ತಡೆಗಟ್ಟಲು ಜಂಟಿ ಚೆಕ್‌ಪೋಸ್ಟ್ ಸ್ಥಾಪನೆ. ಬೆಳಗಾವಿ ತಾಲೂಕಿನ ಬಾಚಿ ಚೆಕ್‌ಪೋಸ್ಟ್‌ನಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದು, ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಸಶಸ್ತ್ರ ಸೀಮಾ ಬಲ್, ಪೊಲೀಸ್, ಕಂದಾಯ ಇಲಾಖೆ, ಅಬಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಗಡಿಯ ಕೊಗನೊಳ್ಳಿ, ಕಾಗವಾಡ ಹಾಗೂ ಕರ್ನಾಟಕ ಗೋವಾ ಗಡಿಯ ಕಣಕುಂಬಿಯಲ್ಲಿ ಜಂಟಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.

1:27 PM IST:

 ರಾಜ್ಯದಲ್ಲಿ ಹಿಂದುಳಿದ ವರ್ಗದ (ಒಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಹೊಂದಿದ್ದ ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದುಹಾಕಿ ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿಗೆ ಸೇರ್ಪಡೆ ಮಾಡಿದ್ದ ಕರ್ನಾಟಕ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು, ಇದನ್ನೇ ಯಥಾಸ್ಥಿತಿಯಲ್ಲಿ ಕಾಯ್ದಿಡುವಂತೆ ಮತ್ತೊಮ್ಮೆ ಆದೇಶಿಸಿದೆ. ರಾಜ್ಯ ಸರ್ಕಾರದಿಂದ ರದ್ದುಗೊಳಿಸಲಾಗಿದ್ದ ಮುಸ್ಲಿಂ ಸಮುದಾಯದ ಒಬಿಸಿ ಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿತ್ತು. ಈ ಕುರಿತು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರದ ಆದೇಶಕ್ಕೆ ಏ.25ರಮದು ತಡೆ ನೀಡಿತ್ತು. ಜೊತೆಗೆ, ಇಂದು (ಮೇ 9- ಮಂಗಳವಾರ) ಪ್ರಕರಣವನ್ನು ನ್ಯಾ.ಕೆ.ಎಂ.ಜೋಸೆಫ್ ನೇತೃತ್ವದ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, ಈ ಹಿಂದಿನ ಆದೇಶವನ್ನು ಮುಂದುವರೆಸುವ ಹಾಗೂ ಮೀಸಲಾತಿ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಲಾಗಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು? 

1:02 PM IST:

ರಾಯಚೂರು: ಸರ್ಕಾರಿ ಶಾಲೆಗೆ ಮುಳ್ಳು ಬೇಲಿ ಹಾಕಿ ಬಂದ್ ಮಾಡಿ ಗ್ರಾಮಸ್ಥರ ಆಕ್ರೋಶ. ಮತಗಟ್ಟೆ ಸ್ಥಾಪನೆ ಮಾಡದಂತೆ ತಡೆದು ಗ್ರಾಮಸ್ಥರ ಪ್ರತಿಭಟನೆ. ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಮಾನ್ವಿ ತಾಲೂಕಿನ ಅಡವಿ ಖಾನಾಪುರ ಗ್ರಾಮದಲ್ಲಿ ಘಟನೆ. ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಡನಲ್ಲಿ‌ ಮನೆ ನಿರ್ಮಾಣ. ಗ್ರಾಮದ ವ್ಯಕ್ತಿಯೊಬ್ಬರ ಮನೆ ನಿರ್ಮಿಸಿ, ಹುಲ್ಲಿನ ಬಣವೆ ಹಾಕಿರುವುದು ಸಮಸ್ಯೆಗೆ ಕಾರಣ. ಮನೆ ಮತ್ತು ಹುಲ್ಲಿನ ಬಣವೆ ತೆರವುಗೊಳಿಸಲು ಹಲವು ಬಾರಿ ಗ್ರಾಮಸ್ಥರ ಮನವಿ. ತಾಲೂಕು ಮತ್ತು ಜಿಲ್ಲಾಡಳಿತ ತಮ್ಮ ಮನವಿಗೆ ಕ್ಯಾರೆ ಅನ್ನದ ಹಿನ್ನಲೆ ಬೇಲಿ‌ ಹಾಕಿ  ಆಕ್ರೋಶ. ಗ್ರಾಮಸ್ಥರ ವಿರೋಧದ ಸುದ್ದಿ ತಿಳಿಯುತ್ತಿದ್ದಂತೆ ಓಡೋಡಿ ಬಂದ ತಹಸೀಲ್ದಾರ್, ಬಿಇಓ. ಮತಗಟ್ಟೆ ಕೇಂದ್ರ ಮಾಡಬಾರದು ನಮ್ಮ ಸಮಸ್ಯೆ ಪರಿಹರಿಸದೆ ನಿರ್ಲಕ್ಷ್ಯ ‌ಮಾಡಿದ್ದಿರಿ ಎಂದು ಗ್ರಾಮಸ್ಥರ ಕಿಡಿ

12:59 PM IST:

ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಿದ ಚುನಾವಣಾ ಆಯೋಗ. ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ವಿಶೇಷ ಮತಗಟ್ಟೆ ಸ್ಥಾಪನೆ. ರಾಜ್ಯದ ವಿವಿಧೆಡೆ 40 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ ಸ್ಥಾಪಿಸಿದ ಆಯೋಗ. 9 ಜಿಲ್ಲೆಗಳಲ್ಲಿ ತಲೆಎತ್ತಿದ ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ. ಅರಣ್ಯದಂಚಿನಲ್ಲಿ ವಾಸಿಸುವ ಎರವ, ಪಣಿಯ ಆದಿವಾಸಿ ಜನಾಂಗದ ಮತದಾರಿಗೆ ಅನುಕೂಲ. ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗರ ಪ್ರದೇಶದಲ್ಲಿ ಮತಗಟ್ಟೆ.. ಲೈಕುಡಿ, ಸಿದ್ದಿ ಜನಾಂಗದ ಮತದಾರರಿಗೆ ಮತದಾನ ಮಾಡಲು ಉಪಯೋಗ..
ಚಾಮರಾಜನಗರಜಿಲ್ಲೆಯಲ್ಲಿ 9 ಬುಡಕಟ್ಟು ಮತಗಟ್ಟೆ ಸ್ಥಾಪನೆ. ಮೈಸೂರು ಜಿಲ್ಲೆಯಲ್ಲೂ 9 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ. ಉತ್ತರಕನ್ನಡ ಜಿಲ್ಲೆಯಲ್ಲಿ 5 ಬುಡಕಟ್ಟು ಮತಗಟ್ಟೆ ಸ್ಥಾಪಿಸಿದ ಆಯೋಗ. ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶಗಳಲ್ಲಿ ಮೊದಲ ಬಾರಿಗೆ ವಿಶೇಷ ಮತಗಟ್ಟೆ

12:48 PM IST:

ಬಿಜೆಪಿಯಲ್ಲಿ ನನಗೆ ಯಾವುದೇ ಅನ್ಯಾಯವಾಗಿಲ್ಲ. ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ಗೌರವ ಸಿಕ್ಕಿರುವುದರಿಂದ ಸಂತೃಪ್ತಿಯಿಂದ ಇದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಸ್ವತಃ ರಾಜೀನಾಮೆ ನೀಡಿದೆ. ನಂತರ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಬಿಜೆಪಿಯಿಂದ ನನಗೆ ಯಾವುದೇ ಅನ್ಯಾಯವಾಗಿಲ್ಲ. ನನ್ನದು ಒಂದೇ ಗುರಿ. ಈ ಚುನಾವಣೆಯಲ್ಲಿ 135 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡಬೇಕು. ಬಳಿಕ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದು

ಯಡಿಯೂರಪ್ಪ ಹೇಳಿದ್ದೇನು?

12:21 PM IST:

ಮತದಾರರು ತಮ್ಮ ಹಕ್ಕು ಚಲಾಯಿಸಲು ಪೊಲೀಸ್ ಮಹಾನಿರ್ದೇಶಕರ ಸಂದೇಶ. ಸಾರ್ವಜನಿಕರು ತಮ್ಮ ಮತದಾನದ ಹಕ್ಕು ತಪ್ಪದೇ ಚಲಾಯಿಸಬೇಕು. ಭದ್ರತೆಗಾಗಿ ಪೊಲೀಸ್ರು ಬೇಕಾದ ಎಲ್ಲಾ ಕ್ರಮ ಕೈಗೊಂಡಿದ್ದಾರೆ. ಮತದಾರರು ಹಾಗೂ ಅಧಿಕಾರಿಗಳು ಬ್ಯುಸಿ ಅನ್ನೊದನ್ನ ಬಿಟ್ಟು ಬಿಡುವು ಮಾಡಿಕೊಂಡು ಮತ ಚಲಾಯಿಸಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಂದೇಶ.

11:51 AM IST:

ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ  ಪ್ರಚಾರ ಸೋಮವಾರ ಸಂಜೆಯೇ ಮುಗಿದಿದೆ.ಮತದಾನಕ್ಕೆ ಇನ್ನು ಒಂದು ದಿನ ಬಾಕಿ ಇದ್ದು ಸಿಲಿಕಾನ್‌ ಸಿಟಿ ಬೆಂಗಳೂರು ಸಜ್ಜಾಗಿದೆ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮತಗಟ್ಟೆ ಸಿದ್ದತಾ ಪರಿಶೀಲನೆ ನಡೆದಿದ್ದು,  ಸ್ಟ್ರಾಂಗ್‌ ರೂಂ ನಲ್ಲಿರುವ  EVMಗೆ ಭಾರೀ ಬಿಗಿ ಭದ್ರತೆ ನೀಡಲಾಗಿದೆ. ಇನ್ನು ಯಲಹಂಕದಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಸಿದ್ದತೆಯಾಗಿದ್ದು ಶೇಷಾದ್ರಿಪುರಂ ಶಾಲೆಯಲ್ಲಿ ಸಿದ್ದತಾ ಪರಿಶೀಲನೆ ನಡೆಸಲಾಗಿದೆ . ಹಾಗೇ 398 ಮತಗಟ್ಟೆಗಳತ್ತ  ಚುನಾವಣ ಸಿಬ್ಬಂದಿ ಸಾಗುತ್ತಿದ್ದು,  ಒಟ್ಟು 122  ವಸ್ತುಗಳೊಂದಿಗೆ ರೆಡಿಯಾಗಿದ್ದಾರೆ. EVM ಯಂತ್ರ ಗುರುತಿನ ಶಾಹಿ ಸೇರಿ ವಿವಿಧ ವಸ್ತುಗಳನ್ನು ವಿತರಣೆ ಮಾಡಲಾಗಿದೆ.

11:45 AM IST:

ಚುನಾವಣೆಗೆ ರಾಜ್ಯದಲ್ಲಿ 84000 ಸಾವಿರ ಸಿಬ್ಬಂದಿಯನ್ನು ಮತದಾನದ ದಿನ ನಿಯೋಜನೆ ಮಾಡಲಾಗಿದೆ. 185 ಬಾರ್ಡರ್ ಚೆಕ್ ಪೋಸ್ಟ್ ಗಳಲ್ಲಿ ನೆರೆ ರಾಜ್ಯಗಳ ಅಧಿಕಾರಿಗಳ ಸಂಪರ್ಕದಲ್ಲಿದ್ದೀವಿ. ಅಕ್ರಮ ಮತದಾನದ ಸಲುವಾಗಿ ಹೊರಗಿನಿಂದ ಬರುವವರನ್ನ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಎಡಿಜಿಪಿಯಿಂದ ಎಲ್ಲಾ ರೇಂಜ್ ಐಜಿ, ಎಸ್ಪಿ, ಎಎಸ್‌ಪಿಗಳು ನಿನ್ನೆಯಿಂದ ನೈಟ್ ರೌಂಡ್ಸ್ ಇದ್ದಾರೆ . ಇವತ್ತು ಕೂಡ ಎಲ್ಲಾ ಅಧಿಕಾರಿಗಳ ನೈಟ್ ರೌಂಡ್ಸ್ ಮಾಡುವಂತೆ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಊರಿದ್ದು, ಹೊರ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ರೆ, ಅಂತಹ ಮತದಾರರಾಗಿದ್ರೆ ಅಂತಹವರನ್ನು ಮಾತ್ರ ಒಳಗೆ ಬಿಡ್ತೀವಿ. ಹೊರಗಿನ ರಾಜ್ಯದ ಜನರನ್ನ ತಡೆದು ವಾಪಸ್ ಕಳಿಸುವಂತೆ ಚೆಕ್ ಪೋಸ್ಟ್ ಗಳಲ್ಲಿ ಸೂಚನೆ ನೀಡಲಾಗಿದೆ. ಅಕ್ರಮ ಮತದಾನ ತಡೆಯುವ ಸಲುವಾಗಿ ಹೊರಗಿನ ರಾಜ್ಯದವರು ಒಳಗೆ ಬರದಂತೆ ತಡೆಯಲು ಹದ್ದಿನ ಕಣ್ಣಿಡಲಾಗಿದೆ, ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

11:26 AM IST:

 ರಾಜ್ಯದಲ್ಲಿ 16ನೇ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ, ಈ ವೇಳೆ ಸತತವಾಗಿ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಶೆಯಲ್ಲಿ ತೇಲಾಡಬೇಕು ಎಂದು ಸಂಗ್ರಹಣೆ ಮಾಡಿ ಸರಬರಾಜು ಮಾಡಲು ಮುಂದಾಗಿದ್ದ 20 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತದಾನದ ದಿನಗಳಲ್ಲಿ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿರುತ್ತದೆ. ಈ ವೇಳೆ ನಶೆಯಲ್ಲಿ ತೇಲುವಂತೆ ಮಾಡುವ ಡ್ರಗ್ಸ್‌ಗೆ ಭಾರಿ ಬೇಡಿಕೆ ಬರಲಿದೆ ಎಂದು ಆಲೋಚನೆ ಮಾಡಿದ್ದ ಡ್ರಗ್ಸ್‌ ಪೆಡ್ಲರ್‌ಗಳು ಮೂಟೆಗಟ್ಟಲೆ ಗಾಂಜಾ, ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ, ಆಶಿಸ್ ಆಯಿಲ್ ಸಂಗ್ರಹಣೆ ಮಾಡಿಕೊಂಡಿದ್ದರು. ಬರೋಬ್ಬರಿ 20 ಕೋಟಿ ಮೌಲ್ಯದ ಡ್ರಗ್ಸ್‌ ಸಂಗ್ರಹಿಸಿ ಹಂಚಲು ಮುಂದಾಗಿದ್ದ 19 ಡ್ರಗ್ಸ್‌ ಪೆಡ್ಲರ್‌ಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಅವರಿಂದ ಇಪ್ಪತ್ತು ಕೋಟಿ ರೂ. ಮೌಲ್ಯದ ನಶೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿ

11:20 AM IST:

ಬೆಂಗಳೂರು: ಚುನಾವಣೆ ಗೆಲ್ಲಲು ದೇವರ ಮೊರೆ ಹೋದ ಡಿ.ಕೆ. ಶಿವಕುಮಾರ್. ಗೆಲುವಿನ ಮಂತ್ರಕ್ಕಾಗಿ ಭಜರಂಗಬಲಿಗೆ ವಿಶೇಷ ಪೂಜೆ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ. ಮೈಸೂರ್ ಬ್ಯಾಂಕ್ ಸರ್ಕಲ್‌ನ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ಆಂಜನೇಯನಿಗೆ ಹೋಮ ಕಾರ್ಯದಲ್ಲಿ ಭಾಗಿಯಾಗಿದ್ದಾಕೆ ಡಿಕೆಶಿ. ಯೋಗ ನರಸಿಂಹಸ್ವಾಮಿ ಹೋಮ ನಡೆಸಿದ ಕೆಪಿಸಿಸಿ ಅಧ್ಯಕ್ಷ,
ವಯ್ಯಾಲಿಕಾವಲ್ ಭೈರಸಂದ್ರದಲ್ಲಿಯಲ್ಲಿಯೂ ಹೋಮ ನಡಸಿದ್ದಾರೆ ಡಿಕೆಶಿ. 

11:15 AM IST:

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧಿಸುವ ಪ್ರಸ್ತಾಪವಿಟ್ಟ ಬೆನ್ನಲ್ಲೇ ಕೇಸರಿ ಪಾಳಯದಲ್ಲಿ ಹನುಮಾನ್ ಚಾಲೀಸ್ ಪಠಿಸುವ ಅಭಿಯಾನ ಶುರುವಾಗಿದೆ. ಮತದಾನದ ಹಿಂದಿನ ದಿನವೂ ಬಿಜೆಪಿ ನಾಯಕರು ಹಾಗೂ ಕೇಸರ ಸಂಘಟನೆಗಳ ಕಾರ್ಯಕರ್ತರು ಹಲವು ದೇವಸ್ಥಾನಗಳಲ್ಲಿ ಹನುಮಾನ್ಚ ಚಾಲೀಸ್ ಪಠಿಸಿದ್ದು, ಹುಬ್ಬಳ್ಳಿಯ ವಿಜಯನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನುಮಾನ್ ಚಾಲೀಸ್ ಪಠಿಸಿದರು. 

 

| Karnataka CM Basavaraj Bommai along with his supporters recites Hanuman Chalisa at Hanuman Mandir in Hubbali's Vijay Nagar.

(Source: CMO) pic.twitter.com/ihiJhcD8bL

— ANI (@ANI)

11:01 AM IST:

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಗ್ಗೆ 12ಗಂಟೆಗೆ ಮೈಸೂರಿಗೆ ಆಗಮಿಸಲಿದ್ದು  ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಮಾತುಕತೆ ಬಳಿಕ ಉಭಯ ನಾಯಕರು ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಡಿಕೆಶಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದರೆ, ಸಿದ್ದರಾಮಯ್ಯ ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. 

 

 

10:53 AM IST:

ಈ ಬಾರಿ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ ಅತೀವ ಕುತೂಹಲ ಸೃಷ್ಟಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಬಿಜೆಪಿಯಿಂದ ವಿ ಸೋಮಣ್ಣ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಕಸ್ಮಾತ್ ಕಾಂಗ್ರೆಸ್ ಬಹುಮತ ಪಡೆದ ಏಕೈಕ ಪಕ್ಷವಾಗಿ ಹೊರಹೊಮ್ಮಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಇಂಥ ಕ್ಷೇತ್ರದಲ್ಲಿ ಮತ ಕಣ ಹೇಗಿದೆ?

10:47 AM IST:

ಕಾಂಗ್ರೆಸ್‌ ನಾಯಕರ ಮನೆಗಳ ಮೇಲಿನ ಐಟಿ ದಾಳಿ ಮುಂದುವರಿದಿದ್ದು, ಸೋಮವಾರ ಶಿಗ್ಗಾಂವಿ ಮತ್ತು ಧಾರವಾಡಗಳಲ್ಲಿನ ಕಾಂಗ್ರೆಸ್‌ ನಾಯಕರ ಮನೆ, ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಸಿಎಂ ಪ್ರತಿಸ್ಪರ್ಧಿ, ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ಖಾನ್‌ ಪಠಾಣ್‌ಗೆ ಸೇರಿದ ಹೋಟೆಲ್‌ ಮೇಲೆ ದಾಳಿ ನಡೆಸಲಾಗಿದೆ. ಹಾವೇರಿಯ ಬಂಕಾಪುರ ಟೋಲ್‌ ಬಳಿ ಇರುವ ಎನ್‌ಎಚ್‌-4 ಗ್ರ್ಯಾಂಡ್‌ ಹೋಟೆಲ್‌ ಮೇಲೆ ದಾಳಿ ನಡೆದಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:46 AM IST:

ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ  ಪ್ರಚಾರ ಸೋಮವಾರ ಸಂಜೆಯೇ ಮುಗಿದಿದೆ. ಈ ಮಧ್ಯೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಖಾನ್‌ ಪಠಾಣ್‌ಗೆ ಸೇರಿದ ಹೋಟೆಲ್‌ ಮೇಲೆ  ಚುನಾವಣಾ ವಿಚಕ್ಷಣ ದಳ ದಾಳಿ ಮಾಡಿ,  ಆರು ಲಕ್ಷ ರೂಪಾಯಿ ವಶಕ್ಕೆ ಪಡೆದಿದೆ. ಅದಲ್ಲದೆ  ಈ ಹಣವನ್ನು  ಮತದಾರರಿಗೆ ಹಂಚಲು ಸಂಗ್ರಹಿಸಿ ಇಡಲಾಗಿದೆ ಎನ್ನಲಾಗಿದ್ದು, ಒಂದೊಂದು ಕವರ್‌ನಲ್ಲಿ  ಮೂರು ಸಾವಿರ ರೂಪಯಿ ಹಾಕಿಡಲಾಗಿತ್ತು ಎನ್ನಲಾಗಿದೆ. ಇನ್ನು ಘಟನೆ ಸಂಬಂಧ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು  ಯಾಸೀರ್‌ ಖಾನ್‌ ಪಠಾಣ್‌ ಸಿ ಎಂ ಬಸವರಾಜ ಬೊಮ್ಮಾಯಿ  ವಿರುದ್ದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು,ಮೊದಲು ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರಾಗಿದ್ದರು.

ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

10:44 AM IST:

ಮೇ 10  ರಂದು ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಬಹಿರಂಗ  ಪ್ರಚಾರ ಸೋಮವಾರ ಸಂಜೆಯೇ ಮುಗಿದಿದೆ.ಮತದಾನಕ್ಕೆ ಇನ್ನು ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿರುವ ಘಟನೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚಿಕ್ಕಲಸಂದ್ರದಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡೆ ಶೋಭಾ ಗೌಡ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.  ವಿಚಕ್ಷಣ ದಳ ಪರಿಶೀಲನೆ ನಡೆಸಿದ್ದು, ರಸ್ತೆ ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ  ಮರದ ಬುಡದಲ್ಲಿ ಹಣ ಪತ್ತೆಯಾಗಿದೆ, ಅದಲ್ಲದೆ ಬ್ಯಾಗ್‌ನಲ್ಲಿ ಮೂರುಲಕ್ಷಕ್ಕು ಅಧಿಕ ಹಣ ಸಿಕ್ಕಿದ್ದು ಕೈ ಕಾರ್ಯಕರ್ತರನ್ನು ವಶಕ್ಕೆ ಪಡೆದು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ