ಮಾಜಿ ಮೇಯರ್, ಕಾರ್ಪೊರೇಟರ್‌ ಚುನಾವಣಾ ಕಣಕ್ಕೆ: ಬಿಬಿಎಂಪಿಯಿಂದ ವಿಧಾನಸೌಧಕ್ಕೆ ಸಿಗುತ್ತಾ ಪ್ರಮೋಷನ್?!

Published : Apr 02, 2023, 10:16 AM ISTUpdated : Apr 02, 2023, 11:01 AM IST
ಮಾಜಿ ಮೇಯರ್, ಕಾರ್ಪೊರೇಟರ್‌ ಚುನಾವಣಾ ಕಣಕ್ಕೆ: ಬಿಬಿಎಂಪಿಯಿಂದ ವಿಧಾನಸೌಧಕ್ಕೆ ಸಿಗುತ್ತಾ ಪ್ರಮೋಷನ್?!

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಬಿಎಂಪಿಯ ಅರ್ಧ ಡಜನ್‌ಗೂ ಹೆಚ್ಚು ಸದಸ್ಯರು ಸಿದ್ಧತೆ ನಡೆಸಿದ್ದಾರೆ. ಮಾಜಿ ಕಾರ್ಪೊರೇಟರ್‌ಗಳು, ಮೇಯರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಬಿಎಂಪಿ ಅಂಗಳದಲ್ಲೀಗ ಕಾರ್ಪೋರೇಟರ್‌ಗಳ ಕಸರತ್ತು ತೀವ್ರ ಕುತೂಹಲ ಕೆರಳಿಸಿದೆ. 

ಬೆಂಗಳೂರು (ಏ.2) : ಬಿಬಿಎಂಪಿಯ ಅರ್ಧ ಡಜನ್‌ಗೂ ಹೆಚ್ಚು ಸದಸ್ಯರ ನಡಿಗೆ ಇದೀಗ ವಿಧಾನಸಭೆ ಕಡೆಗೆ ನೆಟ್ಟಿದೆ.‌ ಮುಂಬರುವ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ಮಾಜಿ ಮೇಯರ್, ಕಾರ್ಪೊರೇಟರ್‌ಗಳು ಬಿಬಿಎಂಪಿ ಅಂಗಳದಲ್ಲೀಗ  ಕಸರತ್ತು ಶುರುಮಾಡಿರುವುದು ಕುತೂಹಲ ತೀವ್ರಗೊಳಿಸಿದೆ. 

ವಿಧಾನಸಭೆ(Assembly) ಪ್ರವೇಶಿಸಲು ಬಿಬಿಎಂಪಿ(BBMP)ಯ 6 ಸದಸ್ಯರ ಕಸರತ್ತು ಶುರುಮಾಡಿದ್ದಾರೆ, ಕಾಂಗ್ರೆಸ್ ಹಾಗೂ ಬಿಜೆಪಿಯ ತಲಾ ಮೂರು ಸದಸ್ಯರಿಂದ ವಿಧಾನಸಭೆ ಟಿಕೆಟ್‌ಗೆ ಕಸರತ್ತು ಜೋರಾಗಿದ್ದು, ತಮ್ಮ ಪಕ್ಷದ ನಾಯಕರುಗಳ ಬೆಂಬಲದೊಂದಿಗೆ ಹೈಕಮಾಂಡ್ ಮನ ಓಲೈಕೆಗೆ  ಮುಂದಾಗಿದ್ದಾರೆ.

Karnataka Assembly Elections 2023: ಬೆಂಗಳೂರಿನ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ..!

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಬಿಬಿಎಂಪಿ ಮಾಜಿ ಕಾರ್ಪೊರೇಟರ್(BBMP ex corporators)ಗಳು ಹಾಗೂ ಮಾಜಿ ಮೇಯರ್ ಗಳಿಂದ ಕಸರತ್ತು ಹೆಚ್ಚಾಗಿದೆ. 

ಇನ್ನು 6 ರಲ್ಲಿ ಮೂವರು ಮಾಜಿ ಮೇಯರ್ ಗಳಾಗಿದ್ದು, ಈ ಹಿಂದೆ ಬಿಬಿಎಂಪಿಯಲ್ಲಿ ಮೇಯರ್ ಹುದ್ದೆ ಅಲಂಕರಿಸಿ ಜನರಿಗೆ ಹತ್ತಿರವಾಗಿದ್ದ ಸ್ಥಳೀಯ ಜನಪ್ರತಿನಿಧಿಗಳಾಗಿದ್ದಾರೆ,  ಇದೀಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಆಡಳಿತ ಚುಕ್ಕಾಣಿ ಹಿಡಿಯುವ ಮೊದಲ ಅಸ್ತ್ರವಾಗಿ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಯಾರ ಕಸರತ್ತು; ಯಾವ ಪಕ್ಷದಿಂದ?

ಸರ್ವಜ್ಞನಗರದಿಂದ ಬಿಜೆಪಿ ಮಾಜಿ ಕಾರ್ಪೊರೇಟರ್ ಪದ್ಮನಾಭ ರೆಡ್ಡಿಗೆ ಟಿಕೆಟ್ ಬಹುತೇಕ ಖಚಿತವಾಗಿದ್ದು ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಈ ಹಿಂದೆಯೂ ಸಹ  ಕೆ.ಜೆ ಜಾರ್ಜ್‌ ವಿರುದ್ಧ  ಪದ್ಮನಾಭ ರೆಡ್ಡಿ ಸ್ಪರ್ದಿಸಿದ್ರು, ಇನ್ನೂ ಜಯನಗರದಿಂದ ಬಿಜೆಪಿ ಅಭ್ಯರ್ಥಿಯಾಗಲು ಎನ್.ಆರ್ ರಮೇಶ್ ಸಿದ್ಧತೆ ನಡೆಸಿದ್ದಾರೆ,
ಕಾಂಗ್ರೆಸ್ ವಿರುದ್ಧ ಅಕ್ರಮಗಳ ಬಯಲಿಗೆಳೆಯುವಲ್ಲಿ ಸದಾ ಮುಂದಿರುವ‌ ಎನ್ ಆರ್ ರಮೇಶ್ ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದು, ನನ್ನ ಪಕ್ಷ ನಿಷ್ಟೆ ಹಾಗೂ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟವನ್ನು ಪಕ್ಷ ಗುರುತಿಸಿದ್ದು ನನಗೆ ಟಿಕೆಟ್ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಿ ಪಡಿಸಿದ್ದಾರೆ. 

ಶಾಂತಿನಗರದಿಂದ ಬಿಜೆಪಿ ಟಿಕೆಟ್ ಗೆ ಮಾಜಿ ಮೇಯರ್ ಗೌತಮ್ ಪ್ರಯತ್ನ ನಡೆಸುತ್ತಿದ್ದಾರೆ, ಅಚ್ಚರಿ ರೀತಿಯಲ್ಲಿ ಮೇಯರ್ ಆಗಿದ್ದ ಗೌತಮ್ ಕುಮಾರ್ ಈಗಲೂ ಅಚ್ಚರಿ‌ ರೀತಿಯಲ್ಲಿ ಶಾಂತಿನಗರದಿಂದ ಟಿಕೆಟ್ ಪಡೆಯುವ  ಸಾಧ್ಯತೆ ಇದೆ. 

ಇನ್ನು ಕಾಂಗ್ರೆಸ್ ನಲ್ಲಿಯೂ ಬಿಬಿಎಂಪಿ ಯಿಂದ ವಿಧಾನಸೌಧಕ್ಕೆ ದಾಪುಗಾಲಿಡಲು ಸದಸ್ಯರು ಸಿದ್ದವಾಗಿದ್ದಾರೆ, ಪ್ರಮುಖವಾಗಿ  ಚಿಕ್ಕಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ  ಮಾಜಿ ಮೇಯರ್  ಗಂಗಾಂಬಿಕ ಮಲ್ಲಿಕಾರ್ಜುನ್ ಟಿಕೆಟ್ ಆಕಾಂಕ್ಷೆಯಾಗಿದ್ದಾರೆ. ಬೆಂಗಳೂರು ನಗರದಿಂದ ಲಿಂಗಾಯತರಿಗೊಂದು ಟಿಕೆಟ್ ಗಾಗಿ ಪಟ್ಟು ಹಿಡಿದಿರುವ ಗಂಗಾಂಬಿಕೆಗೆ ಕಾಂಗ್ರೆಸ್ ನ ಪ್ರಮುಖ ಮುಖಂಡರುಗಳ ಸಹಕಾರ ಸಹ ಇದೆ. 

Karnataka election 2023: ಚನ್ನಗಿರಿ ಕ್ಷೇತ್ರದ ಬಿಜೆಪಿ ‘ಗುಪ್ತ ಮತದಾನ’ ಬಹಿರಂಗ

ಸಿವಿ ರಾಮನ್ ನಗರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಮೇಯರ್ ಸಂಪತ್ ರಾಜ್ ಕಸರತ್ತು ಜೋರಾಗಿದೆ. ಕಳೆದ ಬಾರಿ ಸಿವಿ ರಾಮನ್ ನಗರದಿಂದ ಸ್ಪರ್ದಿಸಿ ಸೋತ್ತಿದ್ದ ಸಂಪತ್ ರಾಜ್. ಈ ಬಾರಿ ಟಿಕೆಟ್ ಆಕಾಂಕ್ಷೆಯಿಂದ ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡುತ್ತ ಟಿಕೆಟ್ ಗಾಗಿ ಕಸರತ್ತು ಮಾಡುತ್ತಿದ್ದಾರೆ.  ಮಹಾಲಕ್ಷ್ಮೀ ಲೇಔಟ್ ನಿಂದ ಕೈ ಟಿಕೆಟ್ ಕೇಶವಮೂರ್ತಿಗೆ ಬಹುತೇಕ ಖಚಿತವಾಗಿದ್ದು, ಸಚಿವ ಗೋಪಾಲಯ್ಯ ವಿರುದ್ಧ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೇಶವಮೂರ್ತಿ ಪ್ರಚಾರ ಆರಂಭಿಸಿದ್ದಾರೆ. ಒಟ್ಟಾರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜನರ ಪ್ರೀತಿಗೆ ಪಾತ್ರರಾಗಿದ್ದ ಈ  ಜನಪ್ರತಿನಿಧಿಗಳು ಶಾಸಕರಾಗುವ ಆಕಾಂಕ್ಷೆಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಿದಲ್ಲಿ ಇವರಲ್ಲಿ ಕೆಲವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ