ಸಿದ್ದರಾಮಯ್ಯ ಸಭಾಪತಿ ಹುದ್ದೆ ಕೊಡದೆ ಅನ್ಯಾಯ ಮಾಡಿದ್ರು: ದೇವೇಗೌಡ

Kannadaprabha News   | Asianet News
Published : Jan 30, 2021, 08:53 AM ISTUpdated : Jan 30, 2021, 08:58 AM IST
ಸಿದ್ದರಾಮಯ್ಯ ಸಭಾಪತಿ ಹುದ್ದೆ ಕೊಡದೆ ಅನ್ಯಾಯ ಮಾಡಿದ್ರು: ದೇವೇಗೌಡ

ಸಾರಾಂಶ

ನನ್ನ ಜಾತ್ಯತೀತತೆ ಪರೀಕ್ಷೆ ಮಾಡಲು ಹೋಗ ಧರ್ಮೇಗೌಡರನ್ನು ಕಳೆದುಕೊಂಡೆವು| ಸಭಾ​ಪತಿ ಹುದ್ದೆ​ಗಾಗಿ ಬಿಜೆಪಿ ಜತೆ​ಗಿನ ಮೈತ್ರಿ​ಯನ್ನು ಸಮ​ರ್ಥಿ​ಸಿ​ಕೊಂಡ ದೇವೇ​ಗೌ​ಡ| ರಾಜ್ಯ ಸರ್ಕಾರ ಜಾರಿಗೆ ತಂದಿ​ರು​ವ ಗೋ ಹತ್ಯೆ ನಿಷೇಧ ಕಾಯ್ದೆಗೆ ದೇವೇ​ಗೌಡ ವಿರೋಧ|   

ನವದೆಹಲಿ(ಜ.30): ವಿಧಾನ ಪರಿಷತ್‌ ಗದ್ದಲ ಹಾಗೂ ಸಭಾ​ಪತಿ ಆಯ್ಕೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌಡ ಅವರು ಕಾಂಗ್ರೆಸ್‌ ವಿರುದ್ಧ ಮತ್ತೆ ತಮ್ಮ ಅಸ​ಮಾ​ಧಾನ ಹೊರ​ಹಾ​ಕಿ​ದ್ದಾ​ರೆ. ‘ನನ್ನ ಜಾತ್ಯತೀ​ತತೆ ಪರೀಕ್ಷಿಸಲು ಹೋಗಿ ನಾವು ಪರಿ​ಷತ್‌ ಸದಸ್ಯ ಧರ್ಮೇಗೌಡರನ್ನು ಕಳೆದುಕೊಂಡೆವು’ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಜೊತೆ ಸರ್ಕಾರ ಮಾಡಿ ಏನು ಸಮಸ್ಯೆ ಆಯಿತು ಅಂತ ನಾನು ಹೇಳಲ್ಲ. ಆದರೆ ಕಾಂಗ್ರೆಸ್‌ನವರು ಸಭಾಪತಿ ಹುದ್ದೆ ಕೊಟ್ಟಿರಲಿಲ್ಲ. ಸಿದ್ದರಾಮಯ್ಯ ಅವ​ರು ಜೆಡಿಎಸ್‌ಗೆ ಸಭಾಪತಿ ಸ್ಥಾನ ಕೊಡದೆ ಅನ್ಯಾಯ ಮಾಡ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರಿಗೆ ಹೇಳಿದ್ದೆ. ಸಭಾ​ಪತಿ ಸ್ಥಾನದ ಆಕಾಂಕ್ಷಿ​ಯಾ​ಗಿದ್ದ ಹೊರಟ್ಟಿ ಅಂದು ನಾಮಪತ್ರ ವಾಪಸ್‌ ಪಡೆದು ತುಂಬಾ ನೊಂದಿದ್ದರು ಎಂದು ಹೇಳಿ​ದ​ರು.

ಇದೇ ವೇಳೆ ಸಭಾ​ಪತಿ ಹುದ್ದೆ​ಗಾಗಿ ಬಿಜೆಪಿ ಜತೆಗಿನ ಮೈತ್ರಿಗೆ ಸಮ್ಮ​ತಿ​ ಕೊ​ಟ್ಟಿ​ರು​ವು​ದಾಗಿ ತಿಳಿ​ಸಿದ ದೇವೇ​ಗೌ​ಡ​ರು, ಹೊರ​ಟ್ಟಿ​ಯ​ವರು ಸದ​ನದ ಗೌರವ ಕಾಪಾ​ಡ​ಲಿ​ದ್ದಾರೆ ಎಂಬ ವಿಶ್ವಾ​ಸ​ವನ್ನೂ ವ್ಯಕ್ತ​ಪ​ಡಿ​ಸಿ​ದ​ರು. ಜತೆಗೆ, ಕಾಂಗ್ರೆ​ಸ್‌-ಬಿಜೆಪಿ ವಿರು​ದ್ಧದ ಹೋರಾ​ಟವನ್ನು ಜೆಡಿ​ಎಸ್‌ ಮುಂದು​ವ​ರಿ​ಸ​ಲಿದೆ ಎಂದೂ ತಿಳಿ​ಸಿ​ದ​ರು.

ಧರ್ಮೇಗೌಡ ಆತ್ಮಹತ್ಯೆ ಕೇಸ್ : ಡಿಸಿಎಂ, ಸಚಿವರ ವಿಚಾರಣೆ

ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯನವರ ಜಾತ್ಯತೀತ ನಿಲುವು ಎಕ್ಸ್‌ಪೋಸ್‌ ಮಾಡು​ವು​ದಾಗಿ ಹೇಳಿದ್ದರು. ಆದರೆ, ಇದೇ ಕಾಂಗ್ರೆ​ಸ್‌​ನ​ವರು ಮಹಾ​ರಾ​ಷ್ಟ್ರ​ದಲ್ಲಿ ಶಿವ​ಸೇನೆ ಜತೆಗೆ ಸರ್ಕಾರ ರಚಿ​ಸಿ​ದ್ದಾರೆ ಎಂದು ಹೇಳುವ ಮೂಲಕ ಪರೋ​ಕ್ಷ​ವಾಗಿ ಕಾಂಗ್ರೆ​ಸ್‌ನ ಜಾತ್ಯ​ತೀತ ನಿಲು​ವಿಗೆ ಟಾಂಗ್‌ ನೀಡಿ​ದರು ದೇವೇ​ಗೌ​ಡ.

ಗೋಹತ್ಯೆಗೆ ವಿರೋಧ:

ರಾಜ್ಯ ಸರ್ಕಾರ ಜಾರಿಗೆ ತಂದಿ​ರು​ವ ಗೋ ಹತ್ಯೆ ನಿಷೇಧ ಕಾಯ್ದೆಗೆ ದೇವೇ​ಗೌಡ ವಿರೋಧ ವ್ಯಕ್ತ​ಪ​ಡಿ​ಸಿ​ದ್ದಾರೆ. ಈ ಕಾಯ್ದೆಗೆ ನಮ್ಮ ವಿರೋಧ ಇದೆ. ಆರೋ​ಪಿ​ಗ​ಳಿಗೆ ಏಳು ವರ್ಷ ಶಿಕ್ಷೆ, ಸಜೆ ಎಲ್ಲಾದರೂ ಉಂಟೆ? ಈ ರೀತಿಯ ಕಾನೂನು ಜನರಗೆ ಹಿಂಸೆ ಕೊಡಲಿದೆ ಎಂದರು.

ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ; ಅಗಲಿದ ಗೆಳೆಯನನ್ನು ಧರ್ಮರಾಯ ಎಂದು ಕುಮಾರಣ್ಣ ಕಣ್ಣೀರಿಟ್ಟಿದ್ದೇಕೆ..?

ರೈತರ ಪರ ನಿಲುವು ಬದ​ಲಾಗದು

ಕೃಷಿ ಕಾಯ್ದೆ ವಿರೋ​ಧಿಸಿ ದೆಹ​ಲಿ​ಯಲ್ಲಿ ಪ್ರತಿ​ಭ​ಟನೆ ನಡೆ​ಸು​ತ್ತಿ​ರು​ವ ರೈತರ ಪರ​ವಾಗಿ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣವನ್ನು ಬಹಿ​ಷ್ಕ​ರಿ​ಸಿರುವ ಪ್ರತಿ​ಪ​ಕ್ಷ​ಗಳಿಗೆ ಕೊನೇ ಕ್ಷಣ​ದ​ಲ್ಲಿ ಬೆಂಬಲ ವ್ಯಕ್ತ​ಪ​ಡಿ​ಸಿದ ಜೆಡಿ​ಎಸ್‌ ನಿಲು​ವನ್ನು ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌಡ ಸಮ​ರ್ಥಿ​ಸಿ​ಕೊಂಡಿ​ದ್ದಾ​ರೆ. ಜತೆಗೆ, ರೈತರ ಪರ ನನ್ನ ನಿಲುವು ಯಾವತ್ತೂ ಬದ​ಲಾ​ಗಲ್ಲ ಎಂದೂ ಸ್ಪಷ್ಟ​ಪ​ಡಿ​ಸಿ​ದ್ದಾ​ರೆ. ಈ ವಿಚಾ​ರ​ವಾಗಿ ಕಾಂಗ್ರೆ​ಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಗುರು​ವಾರ ಕರೆ ಮಾಡಿ​ದ್ದರು. ಆ ಬಳಿಕ ಸಿಪಿಎಂ, ಸಿಪಿಐ ಜೊತೆ ಚರ್ಚೆ ಮಾಡಿ ಬಹಿಷ್ಕಾರ ಕುರಿತ ತೀರ್ಮಾನ ಮಾಡಿದೆ ಎಂದ ಅವರು ರೈತರ ಪರ ನನ್ನ ನಿಲುವು ಯಾವತ್ತೂ ಬದಲಾಗಲ್ಲ. ರೈತರಿಗೆ ಯಾವತ್ತೂ ಅನ್ಯಾಯ ಆಗಬಾರದು ಎಂದು ಹೇಳಿದರು.

ಶಿವಸೇನೆ ವ್ಯರ್ಥ ಪ್ರಯತ್ನ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬೆಳಗಾವಿ ಗಡಿ ವಿಚಾರ ಕೆದಕುತ್ತಿರುವುದು ವ್ಯರ್ಥ ಪ್ರಯತ್ನ ಎಂದು ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌಡ ಹೇಳಿ​ದ್ದಾರೆ. ದೆಹ​ಲಿ​ಯಲ್ಲಿ ಶುಕ್ರ​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ಬೆಳ​ಗಾವಿ ಸೇರಿ​ದಂತೆ ಗಡಿ ವಿಚಾ​ರ​ದ​ಲ್ಲಿ ಶಿವಸೇನೆ ಏನೇ ಮಾಡಿದರೂ ಯಾವುದೇ ಪ್ರಯೋ​ಜ​ನ​ವಾ​ಗಲ್ಲ. ಅದು ಮುಗಿದ ಅಧ್ಯಾಯ. ಅಂದಿನ ಪ್ರಧಾನಿ ಮುರಾರ್ಜಿ ದೇಸಾಯಿ ಬೆಳಗಾವಿಗೆ ಬಂದಿದ್ದಾಗಲೇ ಬೆಳಗಾವಿ ಗಡಿ ವಿವಾದ ಮುಗಿದ ಅಧ್ಯಾಯವಾಗಿದ್ದು ಚರ್ಚೆ ಬೇಡ ಎಂದಿದ್ದರು ಎಂದು ದೇವೇ​ಗೌಡ ತಿಳಿ​ಸಿ​ದ​ರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?