Pancharatna Rathayatra: ನಿಮ್ಮ ಮಡಿಲಿಗೆ ನಿಖಿಲ್‌ ಹಾಕಿದ್ದೇನೆ, ಮನೆ ಮಗನಂತೆ ಬೆಳೆಸಿ: ಎಚ್‌.ಡಿ.ಕುಮಾ​ರ​ಸ್ವಾಮಿ

Published : Dec 19, 2022, 03:20 AM IST
Pancharatna Rathayatra: ನಿಮ್ಮ ಮಡಿಲಿಗೆ ನಿಖಿಲ್‌ ಹಾಕಿದ್ದೇನೆ, ಮನೆ ಮಗನಂತೆ ಬೆಳೆಸಿ: ಎಚ್‌.ಡಿ.ಕುಮಾ​ರ​ಸ್ವಾಮಿ

ಸಾರಾಂಶ

ನಾನು ರಾಜ​ಕಾ​ರ​ಣ​ದಲ್ಲಿ ಬೇರೆ​ಯ​ವ​ರಂತೆ ಗಣಿ​ಗಾ​ರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್‌ ಮಾಲ್‌, ಶಿಕ್ಷಣ ಸಂಸ್ಥೆ​ಗ​ಳನ್ನು ಕಟ್ಟಲು ಹಣ ಮಾಡ​ಲಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹೇಳಿದ್ದಾರೆ.

ಹಾರೋ​ಹಳ್ಳಿ/ರಾಮ​ನ​ಗರ (ಡಿ.19): ನಾನು ರಾಜ​ಕಾ​ರ​ಣ​ದಲ್ಲಿ ಬೇರೆ​ಯ​ವ​ರಂತೆ ಗಣಿ​ಗಾ​ರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್‌ ಮಾಲ್‌, ಶಿಕ್ಷಣ ಸಂಸ್ಥೆ​ಗ​ಳನ್ನು ಕಟ್ಟಲು ಹಣ ಮಾಡ​ಲಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಕಿಡಿಕಾರಿದ್ದಾರೆ. ರಾಮನಗರದಲ್ಲಿ ನಡೆಯುತ್ತಿರುವ ಪಂಚ​ರತ್ನ ರಥ​ಯಾತ್ರೆ ವೇಳೆ ಹಾರೋ​ಹ​ಳ್ಳಿ-ಮರ​ಳ​ವಾ​ಡಿಯಲ್ಲಿ ಬಹಿ​ರಂಗ ಸಭೆ​ಯಲ್ಲಿ ಮಾತ​ನಾ​ಡಿದ ಅವರು, ರಾಜ​ಕಾ​ರ​ಣಕ್ಕೆ ಬರು​ವು​ದಕ್ಕೂ ಮುಂಚೆ ಬಿಡ​ದಿಯ ಕೇತ​ಗಾ​ನ​ಹ​ಳ್ಳಿ​ಯಲ್ಲಿ ಕೃಷಿ ಮಾಡಿ ಸಂಪಾ​ದನೆ ಮಾಡಿ​ದಷ್ಟೇ ನನ್ನ ಆಸ್ತಿ. 

ಶಾಪಿಂಗ್‌ ಮಾಲ್‌, ಕಟ್ಟಡ ಕಟ್ಟಲು ರಾಜ​ಕಾ​ರ​ಣ​ದಲ್ಲಿ ಹಣ ಮಾಡಿಲ್ಲ. ನಾನು ಯಾವ ರೀತಿ ಬದು​ಕಿ​ದ್ದೇನೆ ಎಂಬು​ದನ್ನು ನೀವೇ ನೊಂಡಿ​ದ್ದೀರಿ. ಇಲ್ಲಿ ಪ್ರತಿ​ಯೊಂದು ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳಿಗೂ ಅಡ್ಡಿ ಮಾಡು​ತ್ತಾರೆ. ಆದರೂ ನಿಮ್ಮ ಕಷ್ಟ ಮತ್ತು ಸಮ​ಸ್ಯೆ​ಗ​ಳಿಗೆ ನಾವಿ​ದ್ದೇವೆ. ನಿಮ್ಮ ಮಡಿ​ಲಿಗೆ ನಿಖಿಲ್‌ ನನ್ನು ಹಾಕಿ​ದ್ದೇನೆ. ಅವ​ನನ್ನು ಯಾವ ರೀತಿ​ಯಲ್ಲಿ ಬೆಳೆ​ಸು​ತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು. ನನ್ನ ಹಾಗೂ ನಮ್ಮ ತಂದೆ​ಯ​ವ​ರಂತೆ ಅವ​ನನ್ನು ನಿಮ್ಮ ಮನೆ ಮಗ​ನಾಗಿ ಬೆಳೆ​ಸಿ ಎಂದು ಮನವಿ ಮಾಡಿ​ದ​ರು.

ರಾಮ​ನ​ಗರ ಕ್ಷೇತ್ರ​ದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಶಕ್ತಿ ಪ್ರದ​ರ್ಶನ

ತಾಲೂ​ಕು​ ಘೋಷ​ಣೆ​ಯಲ್ಲಿ ಅನಿತಾ ಪಾತ್ರ: ಹಾರೋಹಳ್ಳಿಯ ಪೇಟೆ ಬೀದಿ ನೋಡಿ ನೋವಾ​ಯಿತು. ಅಲ್ಲಿ ರಸ್ತೆ, ಚರಂಡಿ ವ್ಯವಸ್ಥೆಗಳು ಹಾಳಾಗಿವೆ. ಇದಕ್ಕೆ ಬಿಜೆಪಿ ಸರ್ಕಾರದ ಕುತಂತ್ರ ಕಾರಣವೇ ಹೊರತು ನಾನಾಗಲಿ ಅಥವಾ ಶಾಸಕಿ ಅನಿತಾ ಕುಮಾರಸ್ವಾಮಿ ಅಲ್ಲ. ನನ್ನ ಸರ್ಕಾರ ಬಂದ ಕೂಡಲೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿ​ಸು​ತ್ತೇನೆ ಎಂದ​ರು. ಹಾರೋಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದೇವೆ. ಇದ​ರಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪ್ರಯತ್ನವೂ ಇದೆ. ಈಗಾಗಲೇ 12ಕ್ಕೂ ಹೆಚ್ಚು ಅಧಿಕಾರಗಳನ್ನು ನೇಮಕ ಮಾಡಲಾಗಿದೆ. ಆದರೆ, ಪಕ್ಕದ ಕ್ಷೇತ್ರದ ಮಹಾನುಭಾವರು ಆಡಳಿತ ವ್ಯವಸ್ಥೆ ಹಾಳುಗೆಡುವಿದ್ದಾರೆ ಎಂದು ಡಿಕೆ ಸಹೋ​ದ​ರರ ವಿರುದ್ಧ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದರು.

ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಮಾತ​ನಾಡಿ, ಯಾರು ಎಷ್ಟೇ ಪಿತೂರಿ ಮಾಡಿ​ದರು ಹಾರೋ​ಹ​ಳ್ಳಿ​ಯನ್ನು ತಾಲೂಕು ಅನ್ನಾಗಿ ಮಾಡಿ​ದ್ದೇವೆ. ನಾನು ಸಹ ಕುಮಾ​ರ​ಸ್ವಾಮಿ ಅವ​ರಂತೆಯೇ ಶ್ರಮ ಹಾಕಿ ಪ್ರಾಮಾ​ಣಿ​ಕ​ವಾಗಿ ಕೆಲಸ ಮಾಡಿ​ದ್ದೇನೆ ಎಂದು ಹೇಳಿ​ದ​ರು. ಸಾಗುವಳಿ ಚೀಟಿ ಸೇರಿದಂತೆ ಈ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದೇನೆ. ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದೇನೆ. ನಾಳೆಯೇ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ. ನನಗೆ ಕೊಟ್ಟ ಪ್ರೀತಿ ವಿಶ್ವಾಸವನ್ನು ನನ್ನ ಮಗನಿಗೂ ನೀಡಿ ಎಂದು ಮನವಿ ಮಾಡಿ​ದ​ರು.

ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್‌ ಕುಮಾ​ರ​ಸ್ವಾ​ಮಿ

ನನ್ನ ಅಧಿ​ಕಾರ ದುರ್ಬಳಸಿ​ಕೊಂಡಿಲ್ಲ: ಈ ರಾಜ್ಯದಲ್ಲಿ ಮುಖ್ಯ​ಮಂತ್ರಿ​ಯಾ​ಗಿ​ದ್ದ​ವರ ಹಲವರ ಮಕ್ಕಳು ಅಧಿ​ಕಾ​ರ​ವನ್ನು ಯಾವರೀತಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬು​ದನ್ನು ನೋಡಿ​ದ್ದೀರಿ. ಆದರೆ ನಿಖಿಲ ಕುಮಾರಸ್ವಾಮಿ ಯಾವತ್ತೂ ಸಹ ನಾನು ಮುಖ್ಯ​ಮಂತ್ರಿ ಆಗಿ​ದ್ದಾಗ ಬರಲಿಲ್ಲ. ಆ ರೀತಿಯಲ್ಲಿ ನನ್ನ ಮಗ​ನನ್ನು ಬೆಳೆ​ಸಿ​ದ್ದೇನೆ. ಅವ​ನನ್ನು ಬೆಳೆ​ಸುವುದು ನಿಮ್ಮ ಜವಾ​ಬ್ದಾರಿ ಎಂದು ಹೇಳಿ​ದ​ರು. ಮತ್ತೊಂದು ಪಕ್ಷದ ಜೊತೆಗೆ ಸೇರಿ ಕೆಲಸ ಮಾಡಲು ಆಗುವು​ದಿಲ್ಲ. ಈಗಾ​ಗಲೇ ಬಿಜೆ​ಪಿ​ಯ​ವರು ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗದಂತೆ ಕಾಪಾಡುತ್ತೇನೆ. ಈ ಬಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸ್ಪಷ್ಟಬಹುಮತ ನೀಡು​ವಂತೆ ಕುಮಾ​ರ​ಸ್ವಾಮಿ ಜನ​ರಲ್ಲಿ ಕೋರಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Phone Tapping: ದೇವರಾಣೆ ಮಾಡಿ, ಡಿಕೆಶಿ ಫೋನ್ ಟ್ಯಾಪ್ ಮಾಡಿಲ್ಲವ? ಸಿಎಂಗೆ ಚಲವಾದಿ ಸವಾಲು, ಕಲಬುರಗಿ ಪ್ರಬುದ್ಧರ ಮೇಲೂ ವಾಗ್ದಾಳಿ!
ಫೋನ್ ಟ್ಯಾಪಿಂಗ್ ವಿವಾದ: ಅಂದಿನ ಸಿಎಂ ರಾಮಕೃಷ್ಣ ಹೆಗಡೆ ರಾಜೀನಾಮೆಯನ್ನು ಹೆಚ್‌ಡಿಕೆಗೆ ನೆನಪಿಸಿದ ಪೊನ್ನಣ್ಣ