ಬಿಹಾರದಲ್ಲಿ ಮತದಾರ ಮತ್ತೆ ನಿತೀಶ್ ಕುಮಾರ್ಗೆ ಮಣೆ ಹಾಕಿದ್ದಾನೆ. ಮುಖ್ಯಮಂತ್ರಿ ಗಾದಿ ಏರುವ ಕನಸು ಕಂಡಿದ್ದ ಲಾಲು ಪುತ್ರ ತೇಜಸ್ವಿ ಯಾದವ್ ಕನಸು ನನಸಾಗಲೇ ಇಲ್ಲ. ಕಡೆಯ ಹಂತದ ಮತದಾನದ ಹಿಂದಿನ ದಿನ ರಾಜಕೀಯ ನಿವೃತ್ತಿ ಬಗ್ಗೆ ಒಲವು ತೋರಿದ ನಿತೀಶ್ ಕುಮಾರ್, ಇದೀಗ ಸಂಜೆಯೊಳಗೆ ಬಿಹಾರ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಲಿದೆ ಎನ್ನುತ್ತಿದ್ದಾರೆ. ಎನ್ಡಿಎ ಮೈತ್ರಿ ಕೂಟ ಗೆದ್ದರೂ ಬಿಹಾರ ಮುಖ್ಯಮಂತ್ರಿ ಆಗೋಲ್ವಾ ನಿತೀಶ್ ಕುಮಾರ್? ಏನೀ ಮಾತಿನ ಮರ್ಮ?

06:45 PM (IST) Nov 10
ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕ್ಯಾತೆ ತೆಗೆದಿದ್ದಾರೆ!
06:23 PM (IST) Nov 10
06:15 PM (IST) Nov 10
05:38 PM (IST) Nov 10
ಕೆಆರ್ ನಗರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದ ವಿಜಯೇಂದ್ರ, ಇದೀಗ ಶಿರಾದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೆಚ್ಚಾಗಿದೆ ಅವರ ಡಿಮ್ಯಾಂಡ್
05:36 PM (IST) Nov 10
05:27 PM (IST) Nov 10
05:04 PM (IST) Nov 10
ಕುಸುಮಾ ಹೇಳಿಕೆ
ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ನಾನು ಜೀವನದಲ್ಲೇ ಸೋತಿದ್ದವಳು. ಈಗ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದೆ ಕ್ಷೇತ್ರದ ಜನರ ಜೊತೆ ಇದ್ದು ಕೆಲಸ ಮಾಡುತ್ತೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತೇನೆ.
04:40 PM (IST) Nov 10
ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಪತಿ ಪ್ರಸಾದಿ ನೀಡಿ, ಕಾಲು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದ ರಾರಾ ನಗರ ಶಾಸಕ ಮುನಿರತ್ನ.
"
03:59 PM (IST) Nov 10
03:54 PM (IST) Nov 10
03:35 PM (IST) Nov 10
03:24 PM (IST) Nov 10
03:18 PM (IST) Nov 10
03:16 PM (IST) Nov 10
03:14 PM (IST) Nov 10
02:18 PM (IST) Nov 10
ಶಿರಾದಲ್ಲಿ ಬಿಜೆಪಿ ಬಹುತೇಕ ಗೆಲುವು ಖಚಿತ. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 10,380 ಮತಗಳ ಅಂತರ ದಿಂದ ಬಿಜೆಪಿ ಮುನ್ನಡೆ..
ಬಿಜೆಪಿ ರಾಜೇಶ್ ಗೌಡ- 63,294
ಕಾಂಗ್ರೆಸ್ ಜಯಚಂದ್ರ- 52,914
ಜೆಡಿಎಸ್ ಅಮ್ಮಾಜಮ್ಮ- 29166
02:09 PM (IST) Nov 10
ಮುನಿರತ್ನ ಹೇಳಿಕೆ
ಕೈಮುಗಿದು ಹೇಳುತ್ತೇನೆ, ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ. ಸಿಎಂ ನನ್ನ ಮೇಲೆ ಇಟ್ಟಿರೋ ಭರವಸೆ ಉಳಿಸಿಕೊಳ್ತೀನಿ
ದಿನಕ್ಕೆ 22 ಗಂಟೆ ಕೆಲ್ಸ ಮಾಡ್ತೀನಿ, ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ.
ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಖುಣ ತೀರಿಸಲು ಸಾಧ್ಯವಿಲ್ಲ. ಗೆಲುವಿಗೆ ಪಕ್ಷ, ಮುಖಂಡರು ಕಾರಣಗೆಲುವನ್ನ ಪಕ್ಷದ ಮುಖಂಡರಿಗೆ ಅರ್ಪಣೆ.
ಪ್ರತಿಸ್ಪರ್ಧಿಗೆ ಸತ್ಯ ಮಾತನಾಡುವಂತೆ ಮನವಿ ಮಾಡ್ತೀನಿ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದೀರಿ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಲ್ಲ.
02:06 PM (IST) Nov 10
01:56 PM (IST) Nov 10
ಶಿರಾ ಹಾಗೂ ಆರ್ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಗೆಲುವಿನ ಕ್ರಿಡಿಟ್ ವಿಜಯೇಂದ್ರಗೆ.
ವಿಜೇಯೇಂದ್ರ ಬಾಹುಬುಲಿ ಇದ್ದಂತೆ
01:33 PM (IST) Nov 10
01:24 PM (IST) Nov 10
01:21 PM (IST) Nov 10
ಬಿಹಾರದಲ್ಲಿ ಈತನಕ 87 ಲಕ್ಷ ಮತಗಳ ಎಣಿಕೆ
ಒಟ್ಟು ನಾಲ್ಕು ಕೋಟಿ ಮತ ಚಲಾವಣೆಯಾಗಿತ್ತು
ಈವರೆಗೂ ಶೇ 30ರಷ್ಟು ಮತಗಳ ಎಣಿಕೆಯಾಗಿದೆ
ಚುನಾವಣಾ ಆಯೋಗದಿಂದ ಮಾಹಿತಿ
01:16 PM (IST) Nov 10
15 ನೇ ಸುತ್ತಿನಲ್ಲಿ 1700 ಕ್ಕೆ ಕುಸಿದ ಬಿಜೆಪಿ ಲೀಡ್.
ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಜುರಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ರಾಜು ಗೌಡ ಅವರಿಗೆ ಹೆಚ್ಚಾಯ್ತು ಆತಂಕ.
01:02 PM (IST) Nov 10
ಬಿಹಾರ: ಮುನ್ನಡೆ ಕಾಯ್ದು ಕೊಂಡಿರುವ ಕ್ಷೇತ್ರಗಳ ವಿವರ
8 ಕ್ಷೇತ್ರಗಳಲ್ಲಿ ಕೇವಲ 200 ಮತಗಳ ವ್ಯತ್ಯಾಸ
80 ಕ್ಷೇತ್ರಗಳಲ್ಲಿ 2000 ಮತಗಳ ಅಂತರದ ಮುನ್ನಡೆ
52 ಕ್ಷೇತ್ರಗಳಲ್ಲಿ 1000 ಮತಗಳ ಅಂತರದ ಹಣಾಹಣಿ
23 ಕ್ಷೇತ್ರಗಳಲ್ಲಿ ಕೇವಲ 500 ಮತಗಳ ವ್ಯತ್ಯಾಸ
2015 ಕ್ಕೆ ಹೋಲಿಸಿದ್ರೆ, ಈ ಸಲದ ಚುನಾವಣೆ ಫಲಿತಾಂಶ ತಡವಾಗಲಿದೆ
20% ಮತಗಳನ್ನು ಮಾತ್ರ ಇದುವರೆಗೆ ಎಣಿಕೆ ಮಾಡಲಾಗಿದೆ
34 ಸಾವಿರ ಮತಗಟ್ಟೆಗಳು ಈ ಸಲ ಹೆಚ್ಚಾಗಿವೆ.
45% ಇವಿಎಂ ಮಷಿನ್ ಗಳು ಈ ಬಾರಿ ಹೆಚ್ಚು ಬಳಕೆ ಮಾಡಲಾಗಿದೆ
ಇನ್ನೂ ಹಲವು ಸುತ್ತಿನ ಮತಗಳ ಎಣಿಕೆ ಬಾಕಿ ಇದೆ
ಬಿಹಾರ ಚುನಾವಣೆ ಆಯೋಗದ ಮಾಹಿತಿ
12:39 PM (IST) Nov 10
ಕರ್ನಾಟಕದ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ತೆರಳಿದ ಸಚಿವರು ಅಭಿನಂದನೆ ಸಲ್ಲಿಸಿದರು.
12:35 PM (IST) Nov 10
12:34 PM (IST) Nov 10
12:15 PM (IST) Nov 10
ಆರ್ ಆರ್ ನಗರ ಹಿನ್ನೆಡೆ ಬಗ್ಗೆ ಇನ್ನೂ ಒಂದು ಗಂಟೆ ಕಾಲಾವಕಾಶವಿದೆ ಕಾದು ನೋಡೋಣ ಎಂದ ಡಿಕೆಶಿ
ಮತದಾರರು ತೀರ್ಪು ಕೊಟ್ಟಿದ್ದಾರೆ. ಇನ್ನೂ ಬೇಕಾದಷ್ಟು ಕೌಂಟಿಂಗ್ ಇದೆ ಎಂದು ಕೆಪಿಸಿಸಿ ಅಧ್ಯಕ್ಷ
12:07 PM (IST) Nov 10
ಆರ್ ನಗರದಲ್ಲಿ 28 ಸಾವಿರ ಲೀಡ್ ಇದ್ದೇವೆ. ಶಿರಾದಲ್ಲಿ 4ಸಾವಿರ ಮುನ್ನೆಡೆಯಲ್ಲಿದ್ದೇವೆ
ಗೆಲುವಿನ ಕಡೆ ದಾಪುಗಾಲು ಹಾಕುತ್ತಿದ್ದೆವೆ.. ಸಿರಾ ಹಾಗೂ ಬಿಹಾರದಲ್ಲೂ ನಾವೇ ಗೆಲ್ಲುತ್ತೇವೆ.
ಸಿಎಂಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಸಿಎಂ ನಿವಾಸದ ಬಳಿ ಸಚಿವ ಬೈರತಿ ಬಸವರಾಜ್ ಹೇಳಿಕೆ
12:03 PM (IST) Nov 10
ಮಧ್ಯಪ್ರದೇಶದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಈ ವಿಧಾನಸಭಾ ಉಪ ಚುನಾವಣೆ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. 28 ವಿಧಾನಸಭಾ ಹಾಗೂ ಒಂದು ಲೋಕ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕಾರಣ ಬೆಂಬಲಿಗರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 28 ಸ್ಥಾನಗಳು ತೆರವಾಗಿದ್ದು, ಉಪ ಚುನಾವಣೆ ನಡೆದಿದೆ. ಸರಕಾರ ಉಳಿಸಿಕೊಳ್ಳಲು ಬಿಜೆಪಿಗೆ 28 ಕ್ಷೇತ್ರಗಳನ್ನೂ ಗೆದ್ದು ಕೊಳ್ಳುವುದು ಅನಿವಾರ್ಯವಾಗಿದೆ.
11:46 AM (IST) Nov 10
11:44 AM (IST) Nov 10
243 ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚಿಸಲು ಮ್ಯಾಜಿಕ್ ನಂಬರ್ 122. ಈಗಾಗಲೇ ಜೆಡಿಯು-ಬಿಜೆಪಿ ಮೈತ್ರಿಯ ಎನ್ಡಿಎ 129 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಇನ್ನೂ ಅಂತಿಮ ಫಲಿತಾಂಶ ಪ್ರಕಟವಾಗಲು ಸಮಯ ಬೇಕು.
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನ ಶಕ್ತಿ ಪಾರ್ಟಿ, ಕಳೆದ ಸಾರಿಗಿಂದ ಇದೀಗ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದು, ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.
11:39 AM (IST) Nov 10
ದೇಶದ ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಮುನ್ನೆಡ ಸಾಧಿಸಿದೆ. ಉತ್ತರ ಪ್ರದೇಶದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ.
11:35 AM (IST) Nov 10
ಬಿಹಾರ ಜನತೆ ಮೋದಿ ಹಾಗೂ ನಿತೀಶ್ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಚುನಾವಣೋತ್ತರ ಸಮೀಕ್ಷೆಯನ್ನ ಸುಳ್ಳಾಗಿಸಿ ಬಿಜೆಪಿ ಗೆಲ್ಲಲಿದೆ. ಮಧ್ಯಪ್ರದೇಶ, ಕರ್ನಾಟಕದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವ ಸಾಧಿಸಲಿದೆ. ಸಿರಾ ಜನತೆ ಮೊಟ್ಟ ಮೊದಲ ಬಾರಿಗೆ ಕಮಲವನ್ನು ಅರಳಿಸಲಿದ್ದಾರೆ: ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿಕೆ
11:22 AM (IST) Nov 10
"
11:21 AM (IST) Nov 10
ಆರ್ಆರ್ ನಗರದಲ್ಲಿ ಮೂರನೇ ಬಾರಿ ಗೆಲುವಿನ ನಗೆ ಬೀರಲಿದ್ದಾರೆ ಬಿಜೆಪಿ ಅಭ್ಯರ್ಥಿ ಮುನಿರತ್ನ. 9ನೇ ಸುತ್ತಿನ ಮತ ಎಣಿಕೆ ಮುಗಿದಾಗ 25 ಸಾವಿರ ಮತಗಳ ಮುನ್ನಡೆ ಸಾಧಿಸಿದ ಮುನಿರತ್ನ.
11:13 AM (IST) Nov 10
ಶಿರಾದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಗಿದಿದೆ..
ಬಿಜೆಪಿ .1420646
ಕಾಂಗ್ರೆಸ್ .127181
ಜೆಡಿಎಸ್ , 8879
Total lead ಒಟ್ಟು ಮುನ್ನಡೆ ,1488
11:10 AM (IST) Nov 10