Suvarna News   | Asianet News
Published : Nov 10, 2020, 09:10 AM ISTUpdated : Nov 10, 2020, 05:35 PM IST

Live Blog: ಬಿಹಾರ ಸಿಎಂ ಕುರ್ಚಿ ನಿತೀಶ್ ಕುಮಾರ್ ಕೈ ತಪ್ಪುತ್ತಾ?

ಸಾರಾಂಶ

ಬಿಹಾರದಲ್ಲಿ ಮತದಾರ ಮತ್ತೆ ನಿತೀಶ್ ಕುಮಾರ್‌ಗೆ ಮಣೆ ಹಾಕಿದ್ದಾನೆ. ಮುಖ್ಯಮಂತ್ರಿ ಗಾದಿ ಏರುವ ಕನಸು ಕಂಡಿದ್ದ ಲಾಲು ಪುತ್ರ ತೇಜಸ್ವಿ ಯಾದವ್‌ ಕನಸು ನನಸಾಗಲೇ ಇಲ್ಲ. ಕಡೆಯ ಹಂತದ ಮತದಾನದ ಹಿಂದಿನ ದಿನ ರಾಜಕೀಯ ನಿವೃತ್ತಿ ಬಗ್ಗೆ ಒಲವು ತೋರಿದ ನಿತೀಶ್ ಕುಮಾರ್, ಇದೀಗ ಸಂಜೆಯೊಳಗೆ ಬಿಹಾರ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಲಿದೆ ಎನ್ನುತ್ತಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಗೆದ್ದರೂ ಬಿಹಾರ ಮುಖ್ಯಮಂತ್ರಿ ಆಗೋಲ್ವಾ ನಿತೀಶ್ ಕುಮಾರ್? ಏನೀ ಮಾತಿನ ಮರ್ಮ?

Live Blog: ಬಿಹಾರ ಸಿಎಂ ಕುರ್ಚಿ ನಿತೀಶ್ ಕುಮಾರ್ ಕೈ ತಪ್ಪುತ್ತಾ?

06:45 PM (IST) Nov 10

ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣವಂತೆ!

ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕ್ಯಾತೆ ತೆಗೆದಿದ್ದಾರೆ!

06:23 PM (IST) Nov 10

ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ: ಎಚ್‌ಡಿಕೆ

06:15 PM (IST) Nov 10

ಉಪಚುನಾವಣೆಯಲ್ಲಿ ಸೋಲು: ಸಿದ್ದರಾಮಯ್ಯ ಪ್ರತಿಕ್ರಿಯೆ

05:38 PM (IST) Nov 10

ಮತ್ತೆರಡು ಬೈ ಎಲೆಕ್ಷನ್: ವಿಜಯೇಂದ್ರಗೆ ಹೆಚ್ಚಿದ ಡಿಮ್ಯಾಂಡ್

ಕೆಆರ್ ನಗರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದ ವಿಜಯೇಂದ್ರ, ಇದೀಗ ಶಿರಾದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೆಚ್ಚಾಗಿದೆ ಅವರ ಡಿಮ್ಯಾಂಡ್

 

05:36 PM (IST) Nov 10

ಬಿಹಾರದ ಚುಕ್ಕಾಣಿ ಹಿಡಿಯೋಲ್ವಾ ನಿತೀಶ್ ಕುಮಾರ್?

05:27 PM (IST) Nov 10

ಎಲ್ಲರಿಗೂ ಥ್ಯಾಂಕ್ಸ್ ಎಂದ ರಾರಾ ನಗರ ಶಾಸಕ ಮುನಿರತ್ನ

05:04 PM (IST) Nov 10

ನಾನು ಜೀವನದಲ್ಲೇ ಸೋತವಳು, ಈ ಸೋಲಿಗೆ ಹೆದರೋಲ್ಲ: ಕುಸಮಾ

ಕುಸುಮಾ ಹೇಳಿಕೆ
ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ನಾನು ಜೀವನದಲ್ಲೇ  ಸೋತಿದ್ದವಳು. ಈಗ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದೆ ಕ್ಷೇತ್ರದ ಜನರ ಜೊತೆ ಇದ್ದು ಕೆಲಸ ಮಾಡುತ್ತೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತೇನೆ.

 

04:40 PM (IST) Nov 10

ಸಿಎಂ ಬಿಎಸ್‌ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮುನಿರತ್ನ

ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಪತಿ ಪ್ರಸಾದಿ ನೀಡಿ, ಕಾಲು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದ ರಾರಾ ನಗರ ಶಾಸಕ ಮುನಿರತ್ನ.
"

03:59 PM (IST) Nov 10

ತೆಲಂಗಾಣ: ಬಿಜೆಪಿಗೆ ಐತಿಹಾಸಿಕ ಗೆಲವು

03:54 PM (IST) Nov 10

ಹರಿಯಾಣ ಉಪ ಚುನಾವಣೆ: ಕಾಂಗ್ರೆಸ್ ಒಲಿದ ಜಯಲಕ್ಷ್ಮಿ

03:35 PM (IST) Nov 10

ಮಣಿಪುರ: ಐದರಲ್ಲಿ ನಾಲ್ಕು ಸ್ಥಾನ ಗೆದ್ದ ಬಿಜೆಪಿ, ಗೆದ್ದ ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ

03:24 PM (IST) Nov 10

ಶಿರಾದಲ್ಲಿ ವಿಜಯೇಂದ್ರಗೆ ಅದ್ಧೂರಿ ಸ್ವಾಗತ, ಕಾರ್ಯಕರ್ತರ ಸಂಭ್ರಮ

 

03:18 PM (IST) Nov 10

ಹತ್ಯೆಯಾದ ಕುಟ್ಟಪ್ಪಗೆ ಶಿರಾ, ರಾರಾ ನಗರ ಜಯ ಸಮರ್ಪಿಸಿದ ಸಿ.ಟಿ.ರವಿ

03:16 PM (IST) Nov 10

ಕರ್ನಾಟಕದ 2 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ: ಸಿಎಂಗೆ ಅಭಿನಂದಿಸಿದ ಸಂತೋಷ್

03:14 PM (IST) Nov 10

ಬಿಹಾರ: 128 ಕ್ಷೇತ್ರಗಳಲ್ಲಿ NDA ಮುನ್ನಡೆ, ಮಹಾಘಟಬಂಧನ 105 ಕ್ಷೇತ್ರಗಳಲ್ಲಿ ಮುನ್ನಡೆ

02:20 PM (IST) Nov 10

RR ನಗರ: ಗೆದ್ದ ಬಿಜೆಪಿ, ಉಲ್ಟವಾಯಿತು ಕೈ ತಂತ್ರ

02:18 PM (IST) Nov 10

ಶಿರಾ: 10 ಸಾವಿರ ಮತಗಳ ಮುನ್ನಡೆ ಸಾಧಿಸಿದ ಬಿಜೆಪಿಯ ರಾಜುಗೌಡ

ಶಿರಾದಲ್ಲಿ ಬಿಜೆಪಿ ಬಹುತೇಕ ಗೆಲುವು ಖಚಿತ. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 10,380 ಮತಗಳ ಅಂತರ ದಿಂದ ಬಿಜೆಪಿ ಮುನ್ನಡೆ..

ಬಿಜೆಪಿ ರಾಜೇಶ್ ಗೌಡ- 63,294
ಕಾಂಗ್ರೆಸ್ ಜಯಚಂದ್ರ- 52,914
ಜೆಡಿಎಸ್ ಅಮ್ಮಾಜಮ್ಮ- 29166

02:09 PM (IST) Nov 10

ಮತದಾರರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ: ಮುನಿರತ್ನ

ಮುನಿರತ್ನ ಹೇಳಿಕೆ
ಕೈಮುಗಿದು ಹೇಳುತ್ತೇನೆ, ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ. ಸಿಎಂ ನನ್ನ ಮೇಲೆ ಇಟ್ಟಿರೋ ಭರವಸೆ ಉಳಿಸಿಕೊಳ್ತೀನಿ
ದಿನಕ್ಕೆ 22 ಗಂಟೆ ಕೆಲ್ಸ ಮಾಡ್ತೀನಿ, ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ. 
ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಖುಣ ತೀರಿಸಲು ಸಾಧ್ಯವಿಲ್ಲ. ಗೆಲುವಿಗೆ ಪಕ್ಷ, ಮುಖಂಡರು ಕಾರಣಗೆಲುವನ್ನ ಪಕ್ಷದ ಮುಖಂಡರಿಗೆ ಅರ್ಪಣೆ.
ಪ್ರತಿಸ್ಪರ್ಧಿಗೆ  ಸತ್ಯ ಮಾತನಾಡುವಂತೆ ಮನವಿ ಮಾಡ್ತೀನಿ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದೀರಿ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಲ್ಲ.

 

02:06 PM (IST) Nov 10

ಬಿಹಾರ: NDA ಮಿತ್ರ ಪಕ್ಷಗಳ ಮುನ್ನಡೆ, ಶಂಖ ಊದಿ ಸಂಭ್ರಮ

01:57 PM (IST) Nov 10

'ನ್ಯಾಯಸಮ್ಮತವಾಗಿ ನಡೆದಿಲ್ಲ ಚುನಾವಣೆ'

01:56 PM (IST) Nov 10

'ವಿಜಯೇಂದ್ರ ಬಿಜೆಪಿಗೆ ಬಾಹುಬಲಿ ಇದ್ದಂತೆ'

ಶಿರಾ ಹಾಗೂ ಆರ್‌ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಗೆಲುವಿನ ಕ್ರಿಡಿಟ್ ವಿಜಯೇಂದ್ರಗೆ. 
ವಿಜೇಯೇಂದ್ರ ಬಾಹುಬುಲಿ ಇದ್ದಂತೆ

 

01:24 PM (IST) Nov 10

ಗುಜರಾತ್ 8 ಕ್ಷೇತ್ರಗಳಲ್ಲಿಯೂ ಗೆಲುವಿನತ್ತ ಬಿಜೆಪಿ

01:21 PM (IST) Nov 10

ಬಿಹಾರ: 4 ಕೋಟಿ ಚಲಾವಣೆಯಾದ ಮತಗಳಲ್ಲಿ ಕೇವಲ 87 ಲಕ್ಷ ಮತ ಎಣಿಕೆ

ಬಿಹಾರದಲ್ಲಿ ಈತನಕ 87 ಲಕ್ಷ ಮತಗಳ ಎಣಿಕೆ

ಒಟ್ಟು ನಾಲ್ಕು ಕೋಟಿ ಮತ ಚಲಾವಣೆಯಾಗಿತ್ತು

ಈವರೆಗೂ ಶೇ 30ರಷ್ಟು  ಮತಗಳ ಎಣಿಕೆಯಾಗಿದೆ

ಚುನಾವಣಾ ಆಯೋಗದಿಂದ ಮಾಹಿತಿ

01:16 PM (IST) Nov 10

ಶಿರಾ: ಕುಸಿಯುತ್ತಿದೆ ಬಿಜೆಪಿ ಲೀಡ್ ಮತಗಳ ಸಂಖ್ಯೆ

15 ನೇ ಸುತ್ತಿನಲ್ಲಿ 1700 ಕ್ಕೆ ಕುಸಿದ ಬಿಜೆಪಿ ಲೀಡ್.

ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಜುರಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ರಾಜು ಗೌಡ ಅವರಿಗೆ ಹೆಚ್ಚಾಯ್ತು ಆತಂಕ.

01:02 PM (IST) Nov 10

ಬಿಹಾರ: ಕೇವಲ ಶೇ.20ರಷ್ಟು ಮತ ಎಣಿಕೆ ಪೂರ್ಣ

ಬಿಹಾರ: ಮುನ್ನಡೆ ಕಾಯ್ದು ಕೊಂಡಿರುವ ಕ್ಷೇತ್ರಗಳ ವಿವರ

8 ಕ್ಷೇತ್ರಗಳಲ್ಲಿ ಕೇವಲ 200 ಮತಗಳ ವ್ಯತ್ಯಾಸ

80 ಕ್ಷೇತ್ರಗಳಲ್ಲಿ 2000 ಮತಗಳ ಅಂತರದ ಮುನ್ನಡೆ

52 ಕ್ಷೇತ್ರಗಳಲ್ಲಿ 1000 ಮತಗಳ ಅಂತರದ ಹಣಾಹಣಿ

23 ಕ್ಷೇತ್ರಗಳಲ್ಲಿ ಕೇವಲ 500 ಮತಗಳ  ವ್ಯತ್ಯಾಸ

2015 ಕ್ಕೆ ಹೋಲಿಸಿದ್ರೆ, ಈ ಸಲದ ಚುನಾವಣೆ ಫಲಿತಾಂಶ ತಡವಾಗಲಿದೆ

20% ಮತಗಳನ್ನು ಮಾತ್ರ ಇದುವರೆಗೆ ಎಣಿಕೆ ಮಾಡಲಾಗಿದೆ

34 ಸಾವಿರ ಮತಗಟ್ಟೆಗಳು ಈ ಸಲ ಹೆಚ್ಚಾಗಿವೆ.

45% ಇವಿಎಂ ಮಷಿನ್ ಗಳು ಈ ಬಾರಿ ಹೆಚ್ಚು ಬಳಕೆ ಮಾಡಲಾಗಿದೆ

ಇನ್ನೂ ಹಲವು ಸುತ್ತಿನ ಮತಗಳ ಎಣಿಕೆ ಬಾಕಿ ಇದೆ

ಬಿಹಾರ ಚುನಾವಣೆ ಆಯೋಗದ ಮಾಹಿತಿ

 

12:39 PM (IST) Nov 10

ಶಿರಾ, ಆರ್‌ಆರ್ ನಗರದಲ್ಲಿ ಬಿಜೆಪಿಗೆ ಮುನ್ನಡೆ: ಸಿಎಂಗೆ ಅಭಿನಂದನೆ

ಕರ್ನಾಟಕದ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ತೆರಳಿದ ಸಚಿವರು ಅಭಿನಂದನೆ ಸಲ್ಲಿಸಿದರು. 
 

 

12:35 PM (IST) Nov 10

ಮಧ್ಯ ಪ್ರದೇಶ: ಬಿಜೆಪಿ ಕಚೇರಿಯಲ್ಲಿ ಸಂಭ್ರಮ, ಸಿಹಿ ಹಂಚಿದ ಸಿಎಂ

12:34 PM (IST) Nov 10

ಮಣಿಪುರ: ಐರದಲ್ಲಿ ಒಂದು ಸ್ಥಾನ ಗೆದ್ದ ಕೇಸರಿ ಪಡೆ

12:15 PM (IST) Nov 10

ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ

ಆರ್ ಆರ್ ನಗರ ಹಿನ್ನೆಡೆ ಬಗ್ಗೆ ಇನ್ನೂ ಒಂದು ಗಂಟೆ ಕಾಲಾವಕಾಶವಿದೆ ಕಾದು ನೋಡೋಣ ಎಂದ ಡಿಕೆಶಿ
ಮತದಾರರು ತೀರ್ಪು ಕೊಟ್ಟಿದ್ದಾರೆ. ಇನ್ನೂ ಬೇಕಾದಷ್ಟು ಕೌಂಟಿಂಗ್ ಇದೆ ಎಂದು ಕೆಪಿಸಿಸಿ ಅಧ್ಯಕ್ಷ

 

12:07 PM (IST) Nov 10

ರಾಜ್ಯದ 2, ಬಿಹಾರದಲ್ಲಿ ಗೆಲ್ಲೋದು ಬಿಜೆಪಿ: ಭೈರತಿ ಬಸವರಾಜ್

ಆರ್ ನಗರದಲ್ಲಿ 28 ಸಾವಿರ ಲೀಡ್ ಇದ್ದೇವೆ. ಶಿರಾದಲ್ಲಿ 4ಸಾವಿರ ಮುನ್ನೆಡೆಯಲ್ಲಿದ್ದೇವೆ

ಗೆಲುವಿನ ಕಡೆ ದಾಪುಗಾಲು  ಹಾಕುತ್ತಿದ್ದೆವೆ.. ಸಿರಾ ಹಾಗೂ ಬಿಹಾರದಲ್ಲೂ ನಾವೇ ಗೆಲ್ಲುತ್ತೇವೆ. 

ಸಿಎಂಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಸಿಎಂ‌ ನಿವಾಸದ ಬಳಿ ಸಚಿವ ಬೈರತಿ ಬಸವರಾಜ್ ಹೇಳಿಕೆ

 

12:03 PM (IST) Nov 10

ಮಧ್ಯ ಪ್ರದೇಶ ಬಿಜೆಪಿ ಸರಕಾರಕ್ಕೆ ಅಗ್ನಿಪರೀಕ್ಷೆ: ಪಕ್ಷಕ್ಕೆ ಮುನ್ನಡೆ

 ಮಧ್ಯಪ್ರದೇಶದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಈ ವಿಧಾನಸಭಾ ಉಪ ಚುನಾವಣೆ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. 28 ವಿಧಾನಸಭಾ ಹಾಗೂ ಒಂದು ಲೋಕ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.  

ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕಾರಣ ಬೆಂಬಲಿಗರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 28 ಸ್ಥಾನಗಳು ತೆರವಾಗಿದ್ದು, ಉಪ ಚುನಾವಣೆ ನಡೆದಿದೆ. ಸರಕಾರ ಉಳಿಸಿಕೊಳ್ಳಲು ಬಿಜೆಪಿಗೆ 28 ಕ್ಷೇತ್ರಗಳನ್ನೂ ಗೆದ್ದು ಕೊಳ್ಳುವುದು ಅನಿವಾರ್ಯವಾಗಿದೆ.

 

11:46 AM (IST) Nov 10

ಉತ್ತರ ಪ್ರದೇಶ: ಏಳರ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

11:44 AM (IST) Nov 10

ಬಿಹಾರ: ಸರಕಾರ ರಚನೆಗೆ LJP ಆಗುತ್ತಾ ಕಿಂಗ್ ಮೇಕರ್?

243 ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚಿಸಲು ಮ್ಯಾಜಿಕ್ ನಂಬರ್ 122. ಈಗಾಗಲೇ ಜೆಡಿಯು-ಬಿಜೆಪಿ ಮೈತ್ರಿಯ ಎನ್‌ಡಿಎ 129 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಇನ್ನೂ ಅಂತಿಮ ಫಲಿತಾಂಶ ಪ್ರಕಟವಾಗಲು ಸಮಯ ಬೇಕು. 
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನ ಶಕ್ತಿ ಪಾರ್ಟಿ, ಕಳೆದ ಸಾರಿಗಿಂದ ಇದೀಗ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದು, ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. 

11:39 AM (IST) Nov 10

ಗುಜರಾತ್: 8 ಕ್ಷೇತ್ರಗಳಲ್ಲಿ 6ರಲ್ಲಿ ಬೆಜೆಪಿ ಗೆಲ್ಲುವ ನಿರೀಕ್ಷೆ

ದೇಶದ ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಮುನ್ನೆಡ ಸಾಧಿಸಿದೆ. ಉತ್ತರ ಪ್ರದೇಶದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. 

 

11:35 AM (IST) Nov 10

'ಬಿಹಾರದಲ್ಲಿ ಚುನಾವಣೋತ್ತರ ಸಮೀಕ್ಷೆ ಸುಳ್ಳಾಯ್ತು'

ಬಿಹಾರ ಜನತೆ ಮೋದಿ ಹಾಗೂ ನಿತೀಶ್ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಚುನಾವಣೋತ್ತರ ಸಮೀಕ್ಷೆಯನ್ನ ಸುಳ್ಳಾಗಿಸಿ ಬಿಜೆಪಿ ಗೆಲ್ಲಲಿದೆ. ಮಧ್ಯಪ್ರದೇಶ, ಕರ್ನಾಟಕದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವ ಸಾಧಿಸಲಿದೆ. ಸಿರಾ ಜನತೆ ಮೊಟ್ಟ ಮೊದಲ ಬಾರಿಗೆ ಕಮಲವನ್ನು ಅರಳಿಸಲಿದ್ದಾರೆ: ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿಕೆ

 

11:22 AM (IST) Nov 10

ಕುಸುಮಾ ಮನೆ ಬಳಿ ಧ್ಯಾನ ಮಾಡುತ್ತಾ ಕುಳಿತಿರುವ ವ್ಯಕ್ತಿ.

"

11:21 AM (IST) Nov 10

ಆರ್‌ಆರ್ ನಗರ: ಹ್ಯಾಟ್ರಿಕ್ ಗೆಲುವಿನತ್ತ ಮುನಿರತ್ನ

ಆರ್‌ಆರ್‌ ನಗರದಲ್ಲಿ ಮೂರನೇ ಬಾರಿ ಗೆಲುವಿನ ನಗೆ ಬೀರಲಿದ್ದಾರೆ ಬಿಜೆಪಿ ಅಭ್ಯರ್ಥಿ ಮುನಿರತ್ನ. 9ನೇ ಸುತ್ತಿನ ಮತ ಎಣಿಕೆ ಮುಗಿದಾಗ 25 ಸಾವಿರ ಮತಗಳ ಮುನ್ನಡೆ ಸಾಧಿಸಿದ ಮುನಿರತ್ನ.

 

11:13 AM (IST) Nov 10

ಶಿರಾ: ಬಿಜೆಪಿ ಅಭ್ಯರ್ಥಿ ರಾಜು ಗೌಡರಿಗೆ ಕೇವಲ 1488 ಮತಗಳ ಮುನ್ನಡೆ

ಶಿರಾದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಗಿದಿದೆ..

ಬಿಜೆಪಿ .1420646
ಕಾಂಗ್ರೆಸ್ .127181
ಜೆಡಿಎಸ್ , 8879
Total lead ಒಟ್ಟು ಮುನ್ನಡೆ ,1488

11:10 AM (IST) Nov 10

ಬಿಹಾರ: NDAಗೆ 117 ಕ್ಷೇತ್ರಗಳಲ್ಲಿ ಮುನ್ನಡೆ, ಮಹಾಘಠಬಂಧನಕ್ಕೆ 95 ಕ್ಷೇತ್ರಗಳಲ್ಲಿ ಲೀಡ್