MLC Election Mandya : ಮತ್ತಷ್ಟು ಕುಗ್ಗಿದ ಪ್ರಾಬಲ್ಯ : ಛಿದ್ರಗೊಂಡ ಜೆಡಿಎಸ್‌ ಭದ್ರಕೋಟೆ

By Kannadaprabha NewsFirst Published Dec 15, 2021, 8:11 AM IST
Highlights
  • ವಿಧಾನ ಪರಿಷತ್‌ ಚುನಾವಣಾ ಹೋರಾಟವನ್ನು ಕೈಗೆತ್ತಿಕೊಂಡಿದ್ದ ಜೆಡಿಎಸ್‌ ಮತ್ತೊಮ್ಮೆ ಸೋಲನುಭವಿಸಿದೆ
  • ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ್ತು ಕೆ.ಆರ್‌.ಪೇಟೆ ಉಪ ಚುನಾವಣೆಯ ಸೋಲಿನ ಪ್ರತೀಕಾರವಾಗಿ ತೆಗೆದುಕೊಂಡಿದ್ದ ಜೆಡಿಎಸ್

 ಮಂಡ್ಯ (ಡಿ.15):  ಲೋಕಸಭಾ ಸಾರ್ವತ್ರಿಕ ಚುನಾವಣೆ (Loksabha Election) ಮತ್ತು ಕೆ.ಆರ್‌.ಪೇಟೆ (KR Pete) ಉಪ ಚುನಾವಣೆಯ (By Election) ಸೋಲಿನ ಪ್ರತೀಕಾರವಾಗಿ ವಿಧಾನ ಪರಿಷತ್‌ ಚುನಾವಣಾ (MLC Election) ಹೋರಾಟವನ್ನು ಕೈಗೆತ್ತಿಕೊಂಡಿದ್ದ ಜೆಡಿಎಸ್‌ (JDS) ಮತ್ತೊಮ್ಮೆ ಸೋಲನುಭವಿಸುವ ಮೂಲಕ ತನ್ನ ಭದ್ರಕೋಟೆಯನ್ನು ಛಿದ್ರಗೊಳಿಸಿಕೊಂಡಿದೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾರರ ಸಂಖ್ಯಾ ಬಲವನ್ನು ಹೆಚ್ಚು ಹೊಂದಿದ್ದರೂ ಕಾಂಗ್ರೆಸ್‌ಗೆ (Congress) ಶರಣಾಗಿರುವುದು ಜೆಡಿಎಸ್‌ ನಾಯಕರ ಅಸಂಘಟಿತ ಹೋರಾಟಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ 6 ಮಂದಿ ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಸ್ಥಳೀಯವಾಗಿ ಅಧಿಕಾರ ಪ್ರಾಬಲ್ಯವನ್ನು ಹೊಂದಿದ್ದರೂ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಗೂಳಿಗೌಡ ವಿರುದ್ಧ 97 ಮತಗಳಿಂದ ಪರಾಭವಗೊಂಡಿರುವುದು ದಳಪತಿಗಳ ಅತಿಯಾದ ಆತ್ಮವಿಶ್ವಾಸವೋ ಅಥವಾ ನಾಯಕತ್ವದ ಕೊರತೆಯೋ ಎನ್ನುವುದು ಪ್ರಶ್ನೆಯಾಗಿದೆ.

ಜೆಡಿಎಸ್‌ ಆರಂಭಿಕ ಹಂತದಿಂದಲೂ ನಾಯಕತ್ವದ ಸವಾಲನ್ನು ಎದುರಿಸುತ್ತಲೇ ಬಂದಿತ್ತು. ಚುನಾವಣಾ (Election) ಮಧ್ಯಭಾಗದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಸಾರಥ್ಯದಲ್ಲಿ ಚುನಾವಣೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದವು. ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಶಾಸಕರಾದ ಸಿ.ಎಸ್‌. ಪುಟ್ಟರಾಜು ಮತ್ತು ಡಿ.ಸಿ.ತಮ್ಮಣ್ಣ ಅವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದರು. ಆದರೂ ಪಕ್ಷದೊಳಗೆ ನಾಯಕತ್ವದ ವಿಚಾರ ಹೊಗೆಯಾಡುತ್ತಲೇ ಇತ್ತು.

ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಜೆಡಿಎಸ್‌ (JDS) ಮತದಾರರನ್ನು ಹಿಡಿದಿಟ್ಟುಕೊಂಡಿದ್ದರೆ ಜೆಡಿಎಸ್‌ ಸುಲಭವಾಗಿ ಗೆಲುವು ಸಾಧಿಸಬಹುದಿತ್ತು. ಒಟ್ಟು ಮತದಾರರಲ್ಲಿ ಶೇ. 55ರಷ್ಟು ಮತದಾರರು ಜಾ.ದಳದವರೇ ಆಗಿದ್ದರು ಎಂಬುದನ್ನು ಪಕ್ಷದ ನಾಯಕರು ಪ್ರಚಾರ ಸಭೆಯಲ್ಲಿ ಹೇಳುತ್ತಿದ್ದರು. ಹಾಗಿದ್ದರೆ ಜಾ.ದಳ (JDS) ಮತಗಳು ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿ ಎನ್‌. ಅಪ್ಪಾಜಿ ಗೌಡರ ಪರವಾಗಿ (Appaji Gowda)  ಬಂದಿಲ್ಲವೇ ಎಂಬ ಅನುಮಾನಗಳು ಫಲಿತಾಂಶದ ನಂತರ ಕಾಡುತ್ತಿದೆ.

ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎನ್‌. ಅಪ್ಪಾಜಿಗೌಡ ಅವರನ್ನು ಬಲವಂತವಾಗಿ ವಿಧಾನ ಪರಿಷತ್‌ ಚುನಾವಣೆಗೆ ನಿಲ್ಲಿಸಲಾಯಿತು. ಜೆಡಿಎಸ್‌ ಶಾಸಕರು ಮತ್ತು ಮುಖಂಡರಲ್ಲಿ ಈ ಹಿಂದೆ ಇದ್ದ ಉತ್ಸಾಹ ಈ ಚುನಾವಣೆಯಲ್ಲಿ ಕಂಡುಬರಲಿಲ್ಲ. ಜೆಡಿಎಸ್‌ನೊಳಗೆ (JDS) ಭಿನ್ನಮತದ ಬೆಂಕಿ ಹೊಗೆಯಾಡುತ್ತಿದ್ದದ್ದು ಕೂಡ ಅಪ್ಪಾಜಿಗೌಡರ ಸೋಲಿಗೆ ಕಾರಣವಾಯಿತೇ ಎಂಬ ಅನುಮಾನ ಕಾಡುತ್ತಿದೆ.

ಕಾಂಗ್ರೆಸ್‌ ಸರಿಸಮನಾಗಿಯೇ ಚುನಾವಣಾ ವೆಚ್ಚವನ್ನು ಜೆಡಿಎಸ್‌ ಅಭ್ಯರ್ಥಿ ಎನ್‌. ಅಪ್ಪಾಜಿ ಗೌಡ (Appaji Gowda) ಅವರ ಭರಿಸಿದ್ದರೂ ನಿರೀಕ್ಷಿತ ಗೆಲುವು ಕಾಣ ದಿರುವುದು ಪಕ್ಷದ ಕಾರ್ಯಕರ್ತರ ಹತಾಶೆಗೆ ಕಾರಣವಾಗಿದೆ. ಮುಂದಿನ ವಿಧಾನ ಸಭಾ ಚುನಾವಣೆ (Assembly Election) ವೇಳೆಗೆ ಇನ್ನಷ್ಟು ದುರ್ಬಲ ವಾಗುವುದೇ? ಅಥವಾ ಪಕ್ಷಾಂತರ ಪ್ರಕ್ರಿಯೆ ತೀವ್ರಗೊಳ್ಳುವುದೇ ಎಂಬ ವದಂತಿಗಳು ಹಬ್ಬುತ್ತಿವೆ.

  • ವಿಧಾನ ಪರಿಷತ್‌ ಚುನಾವಣಾ ಹೋರಾಟವನ್ನು ಕೈಗೆತ್ತಿಕೊಂಡಿದ್ದ ಜೆಡಿಎಸ್‌ ಮತ್ತೊಮ್ಮೆ ಸೋಲನುಭವಿಸಿದೆ
  • ದಳಕ್ಕೆ ಕಾಡುತ್ತಿದೆ ನಾಯಕತ್ವದ ಕೊರತೆ
  • ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ್ತು ಕೆ.ಆರ್‌.ಪೇಟೆ ಉಪ ಚುನಾವಣೆಯ ಸೋಲಿನ ಪ್ರತೀಕಾರವಾಗಿ ತೆಗೆದುಕೊಂಡಿದ್ದ ಜೆಡಿಎಸ್
  •   ಮತದಾರರ ಸಂಖ್ಯಾಬಲವನ್ನು ಹೆಚ್ಚು ಹೊಂದಿದ್ದರೂ ಕಾಂಗ್ರೆಸ್‌ಗೆ ಶರಣಾಗಿರುವುದು ಜೆಡಿಎಸ್‌ ನಾಯಕರ ಅಸಂಘಟಿತ ಹೋರಾಟಕ್ಕೆ ಸಾಕ್ಷಿ
  •  ಜಿಲ್ಲೆಯಲ್ಲಿ 6 ಮಂದಿ ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಸ್ಥಳೀಯವಾಗಿ ಅಧಿಕಾರ ಪ್ರಾಬಲ್ಯವನ್ನು ಹೊಂದಿದ ಜೆಡಿಎಸ್
  • ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಗೂಳಿಗೌಡ ವಿರುದ್ಧ 97 ಮತಗಳಿಂದ ಪರಾಭವ
click me!