ಮಡದಿ..  ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!

ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!

Published : Jul 04, 2026, 01:36 PM IST
ಮೂರು ವರ್ಷಗಳ ಹೋರಾಟದ ನಂತರ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್, ಮೊದಲ 30 ದಿನಗಳಲ್ಲಿ ತಮ್ಮ ಆಡಳಿತದ ಝಲಕ್ ತೋರಿಸಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡುತ್ತಾ, ತಮ್ಮ ರಾಜಕೀಯ ಚದುರಂಗದಾಟದ ಶೈಲಿಯಲ್ಲಿಯೇ ಅವರು ತೆಗೆದುಕೊಂಡ 10 ದಿಟ್ಟ ನಿರ್ಧಾರಗಳು ಕುತೂಹಲ ಮೂಡಿಸಿವೆ.

ಮೂರು ವರ್ಷ ಮೌನ ಹೋರಾಟದ ಮೂಲಕ ಸಿಎಂ ಸಿಂಹಾಸನಕ್ಕೆ ಅಧಿಪತಿಯಾಗಿದ್ದಾರೆ ಡಿ.ಕೆ.ಶಿವಕುಮಾರ್. ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ತಮ್ಮ ಆಡಳಿತ ಹೇಗಿರುತ್ತೆ ಅನ್ನೋದ್ರ ಝಲಕ್ ತೋರಿಸಿದ್ದಾರೆ ಕನಕಾಧಿಪತಿ. ಇದಕ್ಕೆ ಅವರು ತೆಗೆದುಕೊಂಡಿರೋ ಆ 10 ದಿಟ್ಟ ನಿರ್ಧಾರಗಳೇ ಸಾಕ್ಷಿ. ಆಡಳಿತದ ಜೊತೆಗೆ, ಸಿಎಂ ಗದ್ದುಗೆ ಏರಿದ ಬಳಿಕ ಡಿಕೆ ಪಾಲಿಟಿಕ್ಸ್ ಸ್ಟೈಲ್​ನಲ್ಲಿಯೂ ಒಂದಿಷ್ಟು ಬದಲಾವಣೆಗಳಾಗಿವೆ. ಹಾಗಿದ್ರೆ  ಕಳೆದ 30 ದಿನಗಳಲ್ಲಿ ಡಿಕೆ ತೆಗೆದುಕೊಂಡಿರೋ ಆ ದಶ ದಿಟ್ಟ ನಿರ್ಧಾರಗಳು ಯಾವು..? ಮುಖ್ಯಮಂತ್ರಿ ಸಿಂಹಾಸನವನ್ನ ಅಲಂಕರಿಸಿದ ಬಳಿಕ ಹೇಗೆ ಬದಲಾಗಿದೆ ಕನಕಪುರ ಬಂಡೆ ಪಾಲಿಟಿಕ್ಸ್ ಸ್ಟೈಲ್.?

ಮೊದಲಿನಿಂದಲೂ ಅಭಿವೃದ್ಧಿ ಯೋಜನೆಗಳ ಕಡೆಗೆ ಹೆಚ್ಚು ಒತ್ತು ಕೊಡೋ ನಾಯಕ ಡಿ.ಕೆ.ಶಿವಕುಮಾರ್. ಮುಖ್ಯಮಂತ್ರಿಯಾದ ಬಳಿಕವೂ ಅದನ್ನವರು ಮುಂದುವರೆಸಿದ್ದಾರೆ. ಕಳೆದ 30 ದಿನದಲ್ಲಿ ಅವರು ಮಾಡಿರೋ ಬೃಹತ್ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಳೆ ಇದಕ್ಕೆ ಸಾಕ್ಷಿ. ಇವುಗಳ ಜೊತೆಗೆ ತಮ್ಮ ಕನಸಿನ ಯೋಜನೆಗಳನ್ನೂ ಜಾರಿಗೊಳಿಸೋ ನಿಟ್ಟಿನಲ್ಲಿಯೂ ಡಿಕೆ ದಿಟ್ಟ ಹೆಜ್ಜೆಗಳನ್ನ ಇಡ್ತಿದ್ದಾರೆ

ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಪಕ್ಕಾ ಚುದುರಂಗದಾಟಗಾರ. ರಿಸ್ಕ್ ತೆಗೆದುಕೊಂಡು ದೊಡ್ಡ ಸಕ್ಸಸ್ ಪಡೆಯೋದು ಅವರ ಟ್ರೇಡ್ ಮಾರ್ಕ್​. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆ ಹಳೇ ಸ್ಟೈಲ್ ಬದಲಾಗಿಲ್ಲ.  ಒಂದು ದಿಟ್ಟ ನಿರ್ಧಾರದ ಮೂಲಕ ಎರಡು ಗುರಿಯನ್ನ ಮುಟ್ಟಿದ್ದಾರೆ ಸಿಎಂ ಡಿ.ಕೆ.ಶಿವಕುಮಾರ್.
 

24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more