'ಒನ್ ನೇಷನ್-ಒನ್ ಎಲೆಕ್ಷನ್ ಪ್ಲಾನ್ ಇದೆ : ಬಿಜೆಪಿ ಗೆಲುವು ಪಕ್ಕಾ ಎಂದು ಭವಿಷ್ಯ ನುಡಿದ ನಾಯಕ'

Kannadaprabha News   | Asianet News
Published : Apr 11, 2021, 12:45 PM IST
'ಒನ್ ನೇಷನ್-ಒನ್ ಎಲೆಕ್ಷನ್ ಪ್ಲಾನ್ ಇದೆ : ಬಿಜೆಪಿ ಗೆಲುವು ಪಕ್ಕಾ ಎಂದು ಭವಿಷ್ಯ ನುಡಿದ ನಾಯಕ'

ಸಾರಾಂಶ

ಬಿಜೆಪಿ  ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇರಳದಲ್ಲಿಯೂ ಬಿಜೆಪಿ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು. 

ಕಲಬುರಗಿ (ಏ.11):  ಮೋದಿ ವಿರೋಧಿಗಳಿಗೆ ಪಂಚ ರಾಜ್ಯಗಳ ಚುನಾವಣೆ ಉತ್ತರ ಕೊಡಲಿದೆ.  ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಕೇರಳದಲ್ಲಿ ಪಕ್ಷದ ಪರಿಸ್ಥಿತಿ ಸುಧಾರಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಕಲಬುರಗಿಯಲ್ಲಿಂದು ಮಾತನಾಡಿದ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ  ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.   ಕೇಂದ್ರ ಸರ್ಕಾರ ಕೃಷಿ ವಲಯದಲ್ಲಿ ಸುಧಾರಣೆ ತರುವ ಕಾಯ್ದೆಗಳನ್ನ ಜಾರಿಗೆ ತಂದಿದೆ .  ಚುನಾವಣೆ ಕ್ಷೇತ್ರದಲ್ಲಿ ಸಹ ಸಾಕಷ್ಟು ಸುಧಾರಣೆ ಆಗಬೇಕಿದೆ .  ಮುಂದಿನ ಹೆಜ್ಜೆ 'ಓನ್ ನೇಶನ್' 'ಓನ್ ಎಲೆಕ್ಷನ್' ಈ ಪ್ಲಾನ್ ಈಗಾಗಲೇ ಸರ್ಕಾರ ಹಾಕಿಕೊಂಡಿದೆ. ಬಿಜೆಪಿ  ಹೆಚ್ಚು ಸ್ಥಾನಗಳನ್ನು ಪಡೆಯುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. 

'ಬೈ ಎಲೆಕ್ಷನ್‌ ಬಳಿಕ ಅಡ್ರಸ್‌ ಕಳೆದುಕೊಳ್ಳುವ ಕಾಂಗ್ರೆಸ್‌ : 3 ಕ್ಷೇತ್ರಗಳಲ್ಲಿ ಜಯ ಖಚಿತ' ...

ಸಿದ್ರಾಮಯ್ಯ, ಡಿಕೆಶಿ ವಿರುದ್ಧ ಸಿಟಿ ರವಿ ಆಕ್ರೋಶ : ಕಾಂಗ್ರೆಸ್ ಮುಖಡ ಸಿದ್ದರಾಮಯ್ಯ ನೈತಿಕತೆ ಬಗ್ಗೆ , ಡಿಕೆಶಿ ನೀತಿ ಬಗ್ಗೆ ಮಾತಾಡುತ್ತಾರೆ.  ಸಿದ್ದರಾಮಯ್ಯ ಅವರೇ ಯಾವುದು ನೈತಿಕತೆ ?  ಲೋಕಾಯುಕ್ತ  ದುರ್ಬಲಗೊಳಿಸಿ ಎಸಿಬಿ ತಂದು ಬೇಕಾದವರನ್ನು ಕ್ಲೀನ್ ಚೀಟ್ ಕೊಡಿಸಿದ್ರಲ್ಲ. ಇದು ನೈತಿಕತೆಯಾ  ಎಂದು ಪ್ರಶ್ನೆ ಮಾಡಿದ್ದಾರೆ.  

ನೀತಿಗಳ ಬಗ್ಗೆ ಮಾತನಾಡುವ ಡಿ.ಕೆ ಶಿವಕುಮಾರ್ ಅವರೇ ನಿಮ್ಮ ಪಕ್ಷಕ್ಕೂ ನೀತಿಗೂ ಸಂಬಂಧವೇ ಇಲ್ಲ.  ಕೇರಳಲ್ಲಿ ಕಮ್ಯುನಿಷ್ಟ್ ಜೊತೆ ಕುಸ್ತಿ.  ತಮಿಳು ನಾಡು,  ಬಂಗಾಳದಲ್ಲಿ ಅವರ ಜೊತೆಗೆ ದೋಸ್ತಿ. ಇದೇನಾ ನಿಮ್ಮ ನೀತಿ ಎಂದು ಸೀಟಿ ರವಿ ಪ್ರಶ್ನೆ ಮಾಡಿದ್ದಾರೆ.

ಭಾರತ್ ಮಾತಾಕೀ ಜೈ ಎಂದರೆ ಕಾಂಗ್ರೆಸ್‌ಗೆ ಮೈಯಲ್ಲಿ ಹುಳ ಬಿಟ್ಟುಕೊಂಡಂಗೆ ಆಗುತ್ತದೆ.  ಇವರಿಗೆ ದೇಶದ ಬಗ್ಗೆ ಅಭಿಮಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ