ನಟ ವಿಜಯ್‌ ₹619 ಕೋಟಿ ಸಂಪತ್ತಿನ ಒಡೆಯ

Kannadaprabha News   | Kannada Prabha
Published : Mar 31, 2026, 04:42 AM IST
Vijay

ಸಾರಾಂಶ

ಮುಂದಿನ ತಿಂಗಳು ಚುನಾವಣೆಗೆ ಸಜ್ಜಾಗಿರುವ ತಮಿಳುನಾಡಿನಲ್ಲಿ ಸಿಎಂ ಸ್ಟಾಲಿನ್, ಟಿವಿಕೆ ಮುಖ್ಯಸ್ಥ ನಟ ವಿಜಯ್‌ ಸೇರಿದಂತೆ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚೊಚ್ಚಲ ಚುನಾವಣೆ ಸ್ಪರ್ಧಿಸುತ್ತಿರುವ ವಿಜಯ್‌ 619 ಕೋಟಿ ಸಂಪತ್ತಿನ ಒಡೆಯನಾಗಿದ್ದಾರೆ.

ಚೆನ್ನೈ: ಮುಂದಿನ ತಿಂಗಳು ಚುನಾವಣೆಗೆ ಸಜ್ಜಾಗಿರುವ ತಮಿಳುನಾಡಿನಲ್ಲಿ ಸಿಎಂ ಸ್ಟಾಲಿನ್, ಟಿವಿಕೆ ಮುಖ್ಯಸ್ಥ ನಟ ವಿಜಯ್‌ ಸೇರಿದಂತೆ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚೊಚ್ಚಲ ಚುನಾವಣೆ ಸ್ಪರ್ಧಿಸುತ್ತಿರುವ ವಿಜಯ್‌ 619 ಕೋಟಿ ಸಂಪತ್ತಿನ ಒಡೆಯನಾಗಿದ್ದಾರೆ.

ಶಿಳ್ಳೆ ಚಿಹ್ನೆಯಡಿ ಮೊದಲ ಅದೃಷ್ಟ ಪರೀಕ್ಷೆಗಿಳಿದಿರುವ ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್‌ ಸೋಮವಾರ ಪೆರಂಬೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ವಿಜಯ್‌ ಒಟ್ಟು 618.76 ಕೋಟಿ ರು. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ತಮ್ಮ ಆಸ್ತಿ 603 ಕೋಟಿ ರು. ಪತ್ನಿ ಸಂಗೀತಾ ಹೆಸರಲ್ಲಿ 15.76 ಕೋಟಿ ರು. ಇದೇ ಎಂದು ಉಲ್ಲೇಖಿಸಿದ್ದಾರೆ.

ವಿಜಯ್‌ 404.58 ಕೋಟಿ ರು. ಚರಾಸ್ತಿ, 198.62 ಕೋಟಿ ರು. ಸ್ಥಿರಾಸ್ತಿ

ಇದರಲ್ಲಿ ವಿಜಯ್‌ 404.58 ಕೋಟಿ ರು. ಚರಾಸ್ತಿ, 198.62 ಕೋಟಿ ರು. ಸ್ಥಿರಾಸ್ತಿ ಇದೆ. ಇದರಲ್ಲಿ ವಿವಿಧ ಬ್ಯಾಂಕುಗಳಲ್ಲಿರುವ 213 ಕೋಟಿ ರು. ಠೇವಣಿ ಹಣವೂ ಸೇರಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ವಿಜಯ್‌ ಯಾವುದೇ ಸಾಲವನ್ನು ಹೊಂದಿಲ್ಲ. ಕಳೆದ ವಿತ್ತೀಯ ವರ್ಷದಲ್ಲಿ ಅವರು 184.53 ಕೋಟಿ ರು. ಆದಾಯ ತೆರಿಗೆ ಪಾವತಿಸಿದ್ದಾರೆ. ಪತ್ನಿ ಸಂಗೀತಾ ಅವರಿಗೆ 12.60 ಕೋಟಿ ರೂ., ಮಗ ಜೇಸನ್ ಸಂಜಯ್ ಅವರಿಗೆ 8.78 ಲಕ್ಷ ರೂ. ಮತ್ತು ಮಗಳು ದಿವ್ಯಾ ಸಶಾ ಅವರಿಗೆ 4.60 ಲಕ್ಷ ರೂ. ಸಾಲ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ.

ಸ್ಟಾಲಿನ್‌ ನಾಮಪತ್ರ:

ಸತತ ಮೂರು ಬಾರಿ ಕೊಳತ್ತೂರು ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸ್ಟಾಲಿನ್‌ ನಾಲ್ಕನೇ ಸಲ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ರೋಡ್‌ಶೋ ನಡೆಸಿ, ಮತಯಾಚಿಸಿದರು. 2011,2016, 2021ರಲ್ಲಿ ಸ್ಟಾಲಿನ್‌ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಮೋದಿ ವಿರುದ್ಧ ಸಚಿವ ಎಂ.ಬಿ.ಪಾಟೀಲ ಕಿಡಿ
ಸಿಎಂ ಸಿದ್ದರಾಮಯ್ಯ ಯಾವ ನೆಲೆಗಟ್ಟಿನ ಮೇಲೆ ಮತ ಕೇಳ್ತಾರೆ: ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯ