Gujarat Election: ಆಪ್‌ ಒಂದು ಸೀಟೂ ಗೆಲ್ಲಲ್ಲ, ಕೈ ಸೋಲು ನಿಶ್ಚಿತ: ಅಮಿತ್ ಶಾ

Published : Nov 30, 2022, 11:46 PM IST
Gujarat Election: ಆಪ್‌ ಒಂದು ಸೀಟೂ ಗೆಲ್ಲಲ್ಲ, ಕೈ ಸೋಲು ನಿಶ್ಚಿತ: ಅಮಿತ್ ಶಾ

ಸಾರಾಂಶ

ಆಮ್‌ ಆದ್ಮಿ ಪಕ್ಷ ಗುಜರಾತ್‌ನಲ್ಲಿ ಒಂದೂ ಸೀಟು ಗೆಲ್ಲುವುದಿಲ್ಲ ಎಂದು ಹೇಳಿರುವ ಬಿಜೆಪಿ ಮುಖಂಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಈ ಹಿಂದೆದಿಗಿಂತಲೂ ಅಭೂತಪೂರ್ವವಾಗಿ ಬಿಜೆಪಿ ಜಯ ಸಾಧಿಸಲಿದೆ. ನರೇಂದ್ರ ಮೋದಿ ಅವರ ಜನಪ್ರಿಯತೆ, ಗುಜರಾತ್‌ನ ಸರ್ವಾಂಗೀಣ ಅಭಿವೃದ್ಧಿ ಬಿಜೆಪಿಗೆ ಗೆಲುವು ತಂದುಕೊಡಲಿದೆ’ ಎಂದು ನುಡಿದಿದ್ದಾರೆ.

ಪಿಟಿಐ ಅಹಮದಾಬಾದ್‌ ಡಿ.1) : ಆಮ್‌ ಆದ್ಮಿ ಪಕ್ಷ ಗುಜರಾತ್‌ನಲ್ಲಿ ಒಂದೂ ಸೀಟು ಗೆಲ್ಲುವುದಿಲ್ಲ ಎಂದು ಹೇಳಿರುವ ಬಿಜೆಪಿ ಮುಖಂಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಈ ಹಿಂದೆದಿಗಿಂತಲೂ ಅಭೂತಪೂರ್ವವಾಗಿ ಬಿಜೆಪಿ ಜಯ ಸಾಧಿಸಲಿದೆ. ನರೇಂದ್ರ ಮೋದಿ ಅವರ ಜನಪ್ರಿಯತೆ, ಗುಜರಾತ್‌ನ ಸರ್ವಾಂಗೀಣ ಅಭಿವೃದ್ಧಿ ಬಿಜೆಪಿಗೆ ಗೆಲುವು ತಂದುಕೊಡಲಿದೆ’ ಎಂದು ನುಡಿದಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಎಲ್ಲ ಪಕ್ಷಗಳಿಗೂ ಸ್ಪರ್ಧಿಸುವ ಹಕ್ಕಿದೆ. ಆದರೆ ಪಕ್ಷಗಳನ್ನು ಸ್ವೀಕಾರ ಮಾಡುವುದು ಜನರಿಗೆ ಬಿಟ್ಟಿದ್ದು. ಗುಜರಾತ್‌ ಜನರ ಮನಸ್ಸಿನಲ್ಲಿ ಆಪ್‌ಗೆ ಸ್ಥಾನವೇ ಇಲ್ಲ. ಫಲಿತಾಂಶಕ್ಕಾಗಿ ಕಾಯಿರಿ. ಗೆದ್ದವರ ಪಟ್ಟಿಯಲ್ಲಿ ಬಹುಶಃ ಆಪ್‌ನ ಒಬ್ಬರ ಹೆಸರೂ ಇರುವುದಿಲ್ಲ’ ಎಂದರು.

Gujarat Election: ಗುಜರಾತ್‌ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ

ಇನ್ನು ಕಾಂಗ್ರೆಸ್‌ ಬಗ್ಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಇಂದಿಗೂ ಪ್ರಮುಖ ಪ್ರತಿಪಕ್ಷ. ಆದರೆ ಪಕ್ಷ ಬಿಕ್ಕಟ್ಟಿನಲ್ಲಿದೆ. ಇದರ ಪರಿಣಾಮ ಫಲಿತಾಂಶದಲ್ಲಿ ಗೋಚರವಾಗಲಿದೆ’ ಎಂದರು. ರಾಹುಲ್‌ ಗಾಂಧಿ ಅವರ ಭಾರತ ಜೋಡೋ ಯಾತ್ರೆಗೆ ಪ್ರತಿಕ್ರಿಯಿಸಿದ ಶಾ, ‘ನಿರಂತರ ಪ್ರಯತ್ನ ಮಾತ್ರ ಫಲಿಸುತ್ತವೆ. ನೋಡೋಣ’ ಎಂದರು.

ಇತರ ರಾಜ್ಯಗಳಲ್ಲೂ ಮೂಲಭೂತವಾದ ನಿಗ್ರಹ ಘಟಕ

ಅಹಮದಾಬಾದ್‌: ಗುಜರಾತ್‌ನಲ್ಲಿ ಉಗ್ರರ ಸ್ಲೀಪರ್‌ ಸೆಲ್‌ ಘಟಕಗಳನ್ನು ಮಟ್ಟಹಾಕಲು ‘ಮೂಲಭೂತವಾದ ನಿಗ್ರಹ ಸೆಲ್‌’ ಆರಂಭಿಸುವ ಭರವಸೆ ನೀಡಲಾಗಿದೆ. ಇದೊಂದು ಉತ್ತಮ ಹೆಜ್ಜೆ. ಇದನ್ನು ಇತರ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಗಳೂ ಪರಿಗಣಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

‘ಪಿಎಫ್‌ಐನಂಥ ಸಂಘಟನೆಗಳು ಜನರನ್ನು ಮೂಲಭೂತವಾದಕ್ಕೆ ತಳ್ಳುತ್ತವೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ಅಂಶ ಪರಿಶೀಲಿಸಿಯೇ ಅನೇಕ ರಾಜ್ಯಗಳು ಇರಿಸಿದ ಬೇಡಿಕೆ ಪರಿಗಣಿಸಿ ಪಿಎಫ್‌ಐ ನಿಷೇಧಿಸಲಾಯಿತು. ಹೀಗಾಗಿಯೇ ಇಂಥ ಚಟುವಟಿಕೆ ತಡೆಯಲು ಮೂಲಭೂತವಾದ ನಿಗ್ರಹ ಸೆಲ್‌ ಸ್ಥಾಪನೆಯನ್ನು ಎಲ್ಲ ರಾಜ್ಯಗಳು ಕೇಂದ್ರ ಪರಿಗಣಿಸಬೇಕು’ ಎಂದು ಪಿಟಿಐ ಸಂದರ್ಶನದಲ್ಲಿ ಹೇಳಿದರು. ಬೆಲೆ ಏರಿಕೆ ಬಗ್ಗೆ ಉತ್ತರಿಸಿದ ಅವರು, ‘ಇಡೀ ವಿಶ್ವ ಇಂದು ಬೆಲೆ ಏರಿಕೆಯಿಂದ ಬಳಲುತ್ತಿದೆ. ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಆದ ಪರಿಣಾಮ ಕಮ್ಮಿ’ ಎಂದರು.

ಮಾತೃಭಾಷೆಯಲ್ಲಿ ವೈದ್ಯಕೀಯ ತಾಂತ್ರಿಕ ಶಿಕ್ಷಣಕ್ಕೆ ಶಾ ಒತ್ತು

ಅಹಮದಾಬಾದ್‌: ತಾಂತ್ರಿಕ, ವೈದ್ಯಕೀಯ ಹಾಗೂ ಕಾನೂನು ಶಿಕ್ಷಣವನ್ನು ಹಿಂದಿ ಹಾಗೂ ಆಯಾ ಮಾತೃಭಾಷೆಯಲ್ಲೇ ನೀಡಲು ರಾಜ್ಯಗಳು ಕ್ರಮ ಜರುಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮನವಿ ಮಾಡಿದ್ದಾರೆ.

News Hour: ಗುಜರಾತ್‌ ಚುನಾವಣೆ ಬಳಿಕ ಬಿಜೆಪಿಗೆ ಕರ್ನಾಟಕವೇ ಟಾರ್ಗೆಟ್‌!

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ನೀಡುವುದರಿಂದ, ಇಂಗ್ಲಿಷ್‌ ಗೊತ್ತಿಲ್ಲದೇ ಇದ್ದರೂ ಜಾಣರಾಗಿರುವ ಅನೇಕ ಸುಪ್ತ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಮಾತೃಭಾಷೆ ಸುಲಭವಾಗಿರುವ ಕಾರಣ ಮಕ್ಕಳು ವೇಗವಾಗಿ ಕಲಿಯುತ್ತಾರೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?