
ನವದೆಹಲಿ(ನ.20): ಭಾರತ-ಪಾಕಿಸ್ತಾನ ನಡುವೆ ನ.29, 30ರಂದು ನಡೆಯಲಿರುವ ಏಷ್ಯಾ/ಓಷಿಯಾನಿಯಾ ಡೇವಿಸ್ ಕಪ್ ಟೆನಿಸ್ ಪಂದ್ಯಕ್ಕೆ ಕಜಕಸ್ತಾನದ ನೂರ್-ಸುಲ್ತಾನ್ ಆತಿಥ್ಯ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇನ್ (ಐಟಿಎಫ್) ಖಚಿತಪಡಿಸಿದೆ.
ಇದನ್ನೂ ಓದಿ: ಡೇವಿಸ್ ಕಪ್: ಪಾಕ್ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ.
ವಿಪರೀತ ಚಳಿ ಇರುವ ಕಾರಣ, ಪಂದ್ಯವನ್ನು ಒಳಾಂಗಣ ಕೋರ್ಟ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದು ಭಾರತಕ್ಕೆ ನೆರವಾಗವಾಗಲಿದೆ. ‘ಒಳಾಂಗಣದಲ್ಲಿ ಆಡುವ ಟೆನಿಸ್ನ ಗುಣಮಟ್ಟಹೆಚ್ಚಿರಲಿದೆ. ಗಾಳಿ, ಬಿಸಿಲಿನ ಸಮಸ್ಯೆ ಇರುವುದಿಲ್ಲ. ನಮ್ಮ ಆಟಗಾರರ ಆಟದ ಶೈಲಿಗೆ ಒಳಾಂಗಣ ಟೆನಿಸ್ ಸೂಕ್ತ.
ಇದನ್ನೂ ಓದಿ: ಡೇವಿಸ್ ಕಪ್: ರೋಹಿತ್ ಅಲ್ಲ ಈಗಲೂ ನಾನೇ ನಾಯಕ ಎಂದ ಭೂಪತಿ
ಹೀಗಾಗಿ ನಮಗೆ ಲಾಭವಾಗಲಿದೆ’ ಎಂದು ಭಾರತ ತಂಡದ ಕೋಚ್ ಝೀಶಾನ್ ಅಲಿ ಹೇಳಿದ್ದಾರೆ. ರೋಹನ್ ಬೋಪಣ್ಣ ಭುಜದ ಗಾಯಕ್ಕೆ ತುತ್ತಾಗಿದ್ದು, ಪಂದ್ಯದಿಂದ ಹೊರಬಿದ್ದಿದ್ದಾರೆ. ಆದರೆ ಭಾರತ ತಂಡದಲ್ಲಿ ಡಬಲ್ಸ್ನಲ್ಲಿ ಅನುಭವಿ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ಜೀವನ್ ಮುನ್ನಡೆಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.