ಟೆನಿಸ್‌ ಸಂಸ್ಥೆಯ ಆಜೀವ ಅಧ್ಯಕ್ಷ ಸ್ಥಾನ ಕಳಕೊಂಡ ಮಾಜಿ ಸಿಎಂ ಕೃಷ್ಣ

Suvarna News   | Asianet News
Published : Apr 19, 2020, 07:56 AM IST
ಟೆನಿಸ್‌ ಸಂಸ್ಥೆಯ ಆಜೀವ ಅಧ್ಯಕ್ಷ ಸ್ಥಾನ ಕಳಕೊಂಡ ಮಾಜಿ ಸಿಎಂ ಕೃಷ್ಣ

ಸಾರಾಂಶ

ಅಖಿಲ ಭಾರತ ಟೆನಿಸ್‌ ಸಂಸ್ಥೆಯ ಅಜೀವ ಸದಸ್ಯರಾಗಿದ್ದ ಎಸ್‌.ಎಂ ಕೃಷ್ಣ ತಮ್ಮ ಹುದ್ದೆಯನ್ನು ಕಳೆದುಕೊಂಡಿದ್ದಾರೆ. ಕೃಷ್ಣ ಸೇರಿದಂತೆ ಮೂವರು ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.19): ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಆಜೀವ ಅಧ್ಯಕ್ಷ ಸ್ಥಾನವನ್ನು ಕೇಂದ್ರದ ಮಾಜಿ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಳೆದುಕೊಂಡಿದ್ದಾರೆ. 

ಕೇಂದ್ರ ಕ್ರೀಡಾ ಸಚಿವಾಲಯದ ಆದೇಶದ ಮೇರೆಗೆ ಎಐಟಿಎ, ಆಜೀವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ರದ್ದುಗೊಳಿಸಿದೆ. ರಾಷ್ಟ್ರೀಯ ಕ್ರೀಡಾಭಿವೃದ್ಧಿ ಸಂಹಿತೆ ಪ್ರಕಾರ ಆಜೀವ ಹುದ್ದೆಗಳು ಇರುವಂತಿಲ್ಲ. ಹೀಗಾಗಿ, ಹುದ್ದೆ ರದ್ದುಗೊಳಿಸುವಂತೆ ಸಚಿವಾಲಯ ಆದೇಶಿಸಿತ್ತು.

ಸರ್ಕಾರದ ಈ ತೀರ್ಮಾನದಿಂದಾಗಿ ಕೃಷ್ಣ ಮಾತ್ರವಲ್ಲದೇ, ಹಿರಿಯ ಕ್ರೀಡಾ ಆಡಳಿತಾಧಿಕಾರಿ ಆನಿಲ್ ಖನ್ನಾ, ಮಾಜಿ ಸಚಿವ ಯಶ್ವಂತ್ ಸಿನ್ಹಾ ಆಜೀವ ಹುದ್ದೆ ಗೌರವವನ್ನು ಕಳೆದುಕೊಂಡಿದ್ದಾರೆ. ಕ್ರೀಡಾ ಅಜೀವ ಹುದ್ದೆಗಳನ್ನು ಪ್ರಶ್ನಿಸಿ ಇತ್ತೀಚೆಗಷ್ಟೇ ಡೆಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ಎಲ್ಲಾ ಹುದ್ದೆಗಳನ್ನು ರದ್ದುಪಡಿಸಿದೆ.

ಮೋಟಮ್ಮ ಮದ್ವೆಯಲ್ಲಿ ದಿಗ್ಗಜರ ಜೂಟಾಟ: SM ಕೃಷ್ಣ ಚರಿತ್ರೆಯಲ್ಲಿ ರಾಜಕೀಯ ರಹಸ್ಯ ಸ್ಫೋಟ

ಟೆನಿಸ್ ಕ್ರೀಡಾ ಅಭಿಮಾನಿಯಾಗಿರುವ ಎಸ್‌. ಎಂ. ಸಮಯ ಸಿಕ್ಕಾಗಲೆಲ್ಲಾ ಟೆನಿಸ್ ಪಂದ್ಯಗಳನ್ನು ವೀಕ್ಷಿಸುತ್ತಿರುತ್ತಾರೆ. ವಿದೇಶಾಂಗ ಸಚಿವರಾಗಿದ್ದಾಗ ಲಂಡನ್‌ಗೆ ಭೇಟಿ ನೀಡಿದ್ದಾಗ ಬಿಡುವು ಮಾಡಿಕೊಂಡು ಸೆಂಟರ್‌ ಕೋರ್ಟ್‌ನಲ್ಲಿ ವಿಂಬಲ್ಡನ್ ಪಂದ್ಯಗಳನ್ನು ವೀಕ್ಷಿಸಿದ್ದರು. ಇದು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ನನ್ನ ಹಣದಲ್ಲಿ ನಾನು ಪಂದ್ಯವನ್ನು ವೀಕ್ಷಿಸಿದ್ದಾಗಿ ಕೃಷ್ಣ ಸ್ಪಷ್ಟನೆ ನೀಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು ಮೇಲೆ ಕಠಿಣ ಕ್ರಮ! ಅನಿರ್ದಿಷ್ಟಾವಧಿಗೆ ಬ್ಯಾನ್
ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ