ಮಾಸ್ಟರ್ ಪೀಸ್'ನನ್ನು ವರಿಸಿದ ಮೊಗ್ಗಿನ ಮನಸಿನ ಚಲುವೆ : ಡಿ.11ಕ್ಕೆ ಅಭಿಮಾನಿಗಳಿಗಾಗಿ ಆರತಕ್ಷತೆ

Published : Dec 09, 2016, 01:35 PM ISTUpdated : Apr 11, 2018, 12:34 PM IST
ಮಾಸ್ಟರ್ ಪೀಸ್'ನನ್ನು ವರಿಸಿದ ಮೊಗ್ಗಿನ ಮನಸಿನ ಚಲುವೆ : ಡಿ.11ಕ್ಕೆ ಅಭಿಮಾನಿಗಳಿಗಾಗಿ ಆರತಕ್ಷತೆ

ಸಾರಾಂಶ

ಮದುವೆಯಲ್ಲಿ ನಡೆಯಬೇಕಾದ ಅರಿಸಿನ ಶಾಸ್ತ್ರ, ಗೌರಿ ಪೂಜೆ, ಮುನೇಶ್ವನ ದೇವರಿಗೆ ಪೂಜೆ ಸೇರಿದಂತೆ ಎಲ್ಲ ಶಾಸ್ತ್ರಗಳನ್ನೂ ಅಚ್ಚುಕಟ್ಟಾಗಿಯೇ ನಿಭಾಯಿಸಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ಮೊಗ್ಗಿನ ಮನಸಿನ ಚಲುವೆ ರಾಧಿಕಾ ಪಂಡಿತ್ ಮದುವೆ ಸಾಂಪ್ರದಾಯಕವಾಗಿಯೇ ಆಗಿದೆ. ಒಕ್ಕಲಿಗ ಮತ್ತು ಕೊಂಕಣಿ ಸಂಪ್ರದಾಯಂತೆ ಯಶ್ ರಾಧಿಕಾ ವಿವಾಹ ಆಗಿದ್ದಾರೆ. ಮದುವೆಯು ಸರಳ ಮತ್ತು ಸಾಂಪ್ರದಾಯಕವಾಗಿ ಗುರು-ಹಿರಿಯರ ಮುಂದೆ ನೆರವೇರಿದೆ.

ಸ್ಟಾರ್ ನಟರ ಮದುವೆ ಅದ್ಧೂರಿ ಆಗಿರುತ್ತವೆ. ಅದು  ಯಶ್ ಮತ್ತು ರಾಧಿಕಾ ವಿವಾಹದಲ್ಲೂ ಕಂಡು ಬಂತು. ಮದುವೆಯಲ್ಲಿ ನಡೆಯಬೇಕಾದ  ಅರಿಸಿನ ಶಾಸ್ತ್ರ, ಗೌರಿ ಪೂಜೆ, ಮುನೇಶ್ವರನ ದೇವರಿಗೆ ಪೂಜೆ ಸೇರಿದಂತೆ ಎಲ್ಲ ಶಾಸ್ತ್ರಗಳನ್ನೂ ಅಚ್ಚುಕಟ್ಟಾಗಿಯೇ ನಿಭಾಯಿಸಲಾಗಿದೆ.ರಾಧಿಕಾ ತಮ್ಮ ಇಷ್ಟದಂತೆ ಮದುವೆ ಆಗಿದ್ದಾರೆ. ನೆಚ್ಚಿನ ಸೋಮನಾಥಪುರ ದೇಗುಲ ಮಾದರಿಯ ಪಂಟಪದಲ್ಲಿಯೇ ವಿವಾಹ ಆಗಿದ್ದಾರೆ. ತುಂಬಾ ಇಷ್ಟಪಡೋ ಶಿವ-ಪಾರ್ವತಿ ದೇವರ ಮೂರ್ತಿಗಳ ಸಮ್ಮಖದಲ್ಲಿ  ಮದುವೆಯ ಎಲ್ಲ ಶಾಸ್ತ್ರಗಳನ್ನೂ ಮಾಡಿಕೊಂಡಿದ್ದಾರೆ.
12.37 ಕ್ಕೆ ಮಾಂಗಲ್ಯ ಧಾರಣೆ, ಸಪ್ತಪದಿ ತುಳಿದ ನವದಂಪತಿ
ಯಶ್-ರಾಧಿಕಾ ಮದುವೆ ವಿಶೇಷವೇ ಅನಿಸಿತು. ತಾಜ್ ವೆಸ್ಟ್ ಎಂಡ್​ ನಲ್ಲಿ ಹಾಕಲಾಗಿದ್ದ ಸೆಟ್ ಕೂಡ ಆ ಸಂಪ್ರದಾಯಕ್ಕೆ ಸಾಕ್ಷಿ ಎಂಬಂತಿತ್ತು.  ಬೆಳಿಗ್ಗೆ 12.37 ಕ್ಕೆ  ಅಭಿಜಿನ್ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು ನಂತರ ನವದಂಪತಿ ಸಪ್ತಪದಿ ತುಳಿದರು.

ತಾರೆಯರು,ರಾಜಕಾರಣಿಗಳ ದಂಡು

ಯಶ್ -ರಾಧಿಕಾ ಪಂಡಿತ್ ಮದುವೆಗೆ ಸಿನಿಮಾ ತಾರೆಯರು ಹಾಗೂ ರಾಜಕಾರಣಿಗಳ ದಂಡೆ ಆಗಮಿಸಿತ್ತು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರವಿ ಚಂದ್ರನ್, ಸುದೀಪ್, ಶ್ರೀನಾಥ್, ದೊಡ್ಡಣ್ಣ, ಭಾರತಿ ವಿಷ್ಣುವರ್ಧನ್,ಗಿರಿಜಾ ಲೋಕೇಶ್, ಮುರುಳಿ ಹಾಗೂ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲನಂದ ಸ್ವಾಮೀಜಿ, ರಾಜಕಾರಣಿಗಳಾದ  ಎಸ್.ಎಂ.ಕೃಷ್ಣ, ಚೆಲುವ ರಾಯ ಸ್ವಾಮಿ, ಜಮೀರ್ ಅಹ್ಮದ್, ವಿ.ಸೋಮಣ್ಣ, ಹೆಚ್.ಸಿ. ಬಾಲಕೃಷ್ಣ, ಜಯ ಕರ್ನಾಟಕ ಸಂಘದ ಅಧ್ಯಕ್ಷ ಮುತ್ತಪ್ಪ ರೈ ಸೇರಿದಂತೆ ಹಲವರು ನವ ದಂಪತಿಗಳಿಗೆ ಆಶೀರ್ವದಿಸಿದರು.

2 ದಿನ  ಆರತಕ್ಷತೆ

ನಾಳೆ ಶನಿವಾರ ಸಂಜೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ  ತಾಂತ್ರಿಕ ವರ್ಗದವರಿಗೆ, ನಾಡಿದ್ದು ಭಾನುವಾರ ಅಭಿಮಾನಿಗಳಿಗಾಗಿ ಆರತಕ್ಷತೆ ನಡೆಯಲಿದೆ. ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ತಾರಾ ಜೋಡಿಗೆ ಶುಭವಾಗಲಿ. ನೂರು ಕಾಲ ಸು:ಖವಾಗಿರಲಿ ಅಂತ ನಾವೂ ಹರೆಸೋಣ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?