ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ ಪುನಾರಾಯ್ಕೆ

Published : Dec 09, 2016, 12:53 PM ISTUpdated : Apr 11, 2018, 12:56 PM IST
ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ ಪುನಾರಾಯ್ಕೆ

ಸಾರಾಂಶ

1990ರಿಂದಲೂ ನಾನು ರಾಷ್ಟ್ರೀಯ ರಾಜಕಾರಣ ನೋಡಿಕೊಂಡು ಬರುತ್ತಿದ್ದೇನೆ. ಆದರೆ ಇಂದು ರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿ ಅನಿವಾರ್ಯವಾಗಿ ಅಧ್ಯಕ್ಷ ಹುದ್ದೆ ಸ್ವೀಕರಿಸುವ ಪರಿಸ್ಥಿತಿ ಬಂದಿದೆ.

ಬೆಂಗಳೂರು(ಡಿ.9): ಜೆಡಿಎಸ್'ನ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಪುನರಾಯ್ಕೆಯಾಗಿದ್ದಾರೆ. ಇಂದು ಜೆಡಿಎಸ್'ನ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರ ಕಾರ್ಯಕಾರಿ ಚುನಾವಣೆಯಲ್ಲಿ ದೇವೇಗೌಡರು ಮತ್ತೆ ಆಯ್ಕೆಯಾಗಿದ್ದಾರೆ. ನಂತರ ಮಾತನಾಡಿದ ಅವರು, 84 ವರ್ಷ ವಯಸ್ಸಿನ ನನಗೆ ಈ ಹುದ್ದೆ ಬೇಕಿರಲಿಲ್ಲ. ಇದು ನಿಜಕ್ಕೂ ನನಗೆ ಸಂಕಷ್ಟದ ಸಮಯ  ಇಂದಿನ ಬೆಳವಣಿಗೆಗಳಿಂದಾಗಿ ಈ ಹುದ್ದೆ ಸ್ವೀಕರಿಸಿದ್ದೇನೆ. ರಾಜಕಾರಣದಿಂದ ಪಲಾಯನ ಮಾಡುವುದು ನನಗೆ ಇಷ್ಟವಿಲ್ಲ. ನನ್ನ ರಾಜಕೀಯ ಅನುಭವವನ್ನು ಜನರ ಬಳಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.

1990ರಿಂದಲೂ ನಾನು ರಾಷ್ಟ್ರೀಯ ರಾಜಕಾರಣ ನೋಡಿಕೊಂಡು ಬರುತ್ತಿದ್ದೇನೆ. ಆದರೆ ಇಂದು ರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿ ಅನಿವಾರ್ಯವಾಗಿ ಅಧ್ಯಕ್ಷ ಹುದ್ದೆ ಸ್ವೀಕರಿಸುವ ಪರಿಸ್ಥಿತಿ ಬಂದಿದೆ. ರಾಜಕಾರಣದಿಂದ ಪಲಾಯನ ಮಾಡುವುದು ನನಗೆ ಇಷ್ಟವಿಲ್ಲ. ಸಂಸದನಾಗಿ ಮತ್ತು ಪಕ್ಷದ ಅಧ್ಯಕ್ಷ ನಾಗಿ ನನ್ನ ಜವಬ್ದಾರಿ ನಿರ್ವಹಿಸುತ್ತೇನೆ. 55 ವರ್ಷದ ನನ್ನ ರಾಜಕೀಯ ಅನುಭವವನ್ನು ಜನರ ಬಳಿ ಹಂಚಿಕೊಳ್ಳುತ್ತೇನೆ. ಪ್ರಜಾಪ್ರಭುತ್ವದ ಈ ಪರಿಸ್ಥಿತಿಗೆ ಏನು ಕಾರಣ ಎಂಬುದನ್ನು  ತಿಳಿಸುತ್ತೇನೆ ಎಂದರು.

ಕೇಂದ್ರ ಸರ್ಕಾರದ ನೋಟ್ ಬ್ಯಾನ್ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಸರ್ಕಾರ ಅಥವಾ ಸಂಪುಟ ಸಭೆಯ ತೀರ್ಮಾನವೇ?ಆರ್ಥಿಕ ತಜ್ಞರ ಜೊತೆ ಚರ್ಚಿಸಿ ತೆಗೆದುಕೊಂಡ ತೀರ್ಮಾನವೇ?ಖಂಡಿತ ಇದು ಚರ್ಚಿಸಿ ಕೈಗೊಂಡ ತೀರ್ಮಾನ ಅಲ್ಲ. ಮೊಬೈಲ್​​​​​​ನಲ್ಲೇ ಬ್ಯಾಂಕಿಂಗ್ ಕೆಲಸ ಮಾಡಿ ಎಂದು ಹೇಳುತ್ತಾರೆ. ನಾನು ಆಡಳಿತ ನಡೆಸಿದವನು, ನನ್ನ ಮೊಬೈಲ್​​​​​​ನಲ್ಲೇ ಆ ವ್ಯವಸ್ಥೆ ಇಲ್ಲ.ಇನ್ನು ಜನಸಾಮಾನ್ಯರ ಬಳಿ ಹೇಗೆ ಇರೋಕೆ ಸಾಧ್ಯ ಕೇಂದ್ರದ ನಿರ್ಧಾರವನ್ನು ಖಂಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್
ಬೆಂಗಳೂರಿಗಾಗಿ ಶ್ರಮಿಸಿದೆವು ಆದ್ರೂ ತಮ್ಮನನ್ನು ಸೋಲಿಸಿದ್ರಿ: ಅಪಾರ್ಟ್‌ಮೆಂಟ್‌ ನಿವಾಸಿಗಳ ವಿರುದ್ಧ ಕಿಡಿಯಾದ ಡಿಕೆಶಿ