
ತಿರುವನಂತಪುರಂ(ಸೆ.26): ಭೀಕರ ಜಲಪ್ರಳಯದಿಂದ ನಲುಗಿದ್ದ ಕೇರಳ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕೇರಳದ ಕಣ್ಣೂರಿಗೆ ಇಸ್ರೇಲಿ ಪೊಲೀಸರು ಹಲವು ಬಾರಿ ಭೇಟಿ ನೀಡುತ್ತಿರುವವುದು ಕುತೂಹಲಕ್ಕೆ ಕಾರಣವಾಗಿದೆ.
ಅರೆ! ಇಸ್ರೇಲಿ ಪೊಲೀಸರೇಕೆ ಕೇರಳದ ಕಣ್ಣೂರಿಗೆ ಬಾರಿ ಬಾರಿ ಭೇಟಿ ನೀಡುತ್ತಿದ್ದಾರೆ ಅಂತಾ ಆಶ್ಚರ್ಯವೇ?. ಇಸ್ರೇಲಿ ಪೊಲೀಸರು ಕೇರಳಕ್ಕೆ ಬರುತ್ತಿರುವುದು ಯಾವುದೋ ಕುಖ್ಯಾತ ರೌಡಿಯನ್ನೋ, ಅಂತರಾಷ್ಟ್ರೀಯ ಕಳ್ಳನನ್ನು ಹಿಡಿಯಲು ಅಥವಾ ಗೂಢಚಾರಿಕೆ ಮಾಡಲು ಅಲ್ಲ. ಬದಲಿಗೆ ಇಸ್ರೇಲಿ ಪೊಲೀಸರು ಕೇರಳಕ್ಕೆ ಬರುತ್ತಿರುವುದು ತಮ್ಮ ಯುನಿಫಾರ್ಮ್ ಗಾಗಿ.
ಹೌದು, ಇಸ್ರೇಲಿ ಪೊಲೀಸರ ಸಮವಸ್ತ್ರ ತಯಾರಾಗೋದು ಕೇರಳದ ಕಣ್ಣೂರಿನಲ್ಲಿ. ಇಸ್ರೇಲ್ ನ ಪುರುಷ ಮತ್ತು ಮಹಿಳಾ ಪೊಲೀಸರ ಸಮವಸ್ತ್ರವನ್ನು ಕಣ್ಣೂರಿನ ಮಾರ್ಯನ್ ಅರ್ಪೆಲ್ ನಲ್ಲಿ. 2006 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ಇಸ್ರೇಲಿ ಪೊಲೀಸರಿಗಾಗಿ ಸಮವಸ್ತ್ರ ತಯಾರಿಸುತ್ತದೆ.
"
ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಮ್ಯಾನೇಜರ್ ಸಿಜಿನ್ ಕುಮಾರ್, ಸದ್ಯ ಇಸ್ರೇಲ್ ಪೊಲೀಸರಿಗಾಗಿ ಸಮವಸ್ತ್ರ ತಯಾರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಫಿಲಿಪೈನ್ಸ್ ಸೇನೆಗೂ ಸಮವಸ್ತ್ರ ತಯಾರಿಸಲಿದೆ ಎಂದು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಇಸ್ರೇಲಿ ಪೊಲೀಸರು ಕೇರಳದ ಕಣ್ಣೂರಿನ ಈ ಘಟಕಕ್ಕೆ ಭೇಟಿ ನೀಡುತ್ತಿದ್ದು, ತಯಾರಾದ ಸಮವಸ್ತ್ರ ಕೊಂಡೊಯ್ಯುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.