500 ರು. ಸಾಲ ಮಾಡಿ ಹೆಂಡತಿಯನ್ನೇ ಕಳೆದುಕೊಂಡ

By Web DeskFirst Published Sep 26, 2018, 9:41 AM IST
Highlights

500 ಸಾಲ ತಿರುಗಿ ಕೊಡಲು ವಿಳಂಬ ಮಾಡಿದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಕದ್ದೊಯ್ದು ಮದುವೆಯಾದ ವಿಚಿತ್ರ ಘಟನೆ ಬೆಳಗಾವಿ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಬೆಳಗಾವಿ: ತಾನು ನೀಡಿದ್ದ 500 ಸಾಲ ತಿರುಗಿ ಕೊಡಲು ವಿಳಂಬ ಮಾಡಿದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಕದ್ದೊಯ್ದು ಮದುವೆಯಾದ ವಿಚಿತ್ರ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗೋಕಾಕ್ ತಾಲೂಕಿನ ಮಿಡಕನಟ್ಟಿ ಗ್ರಾಮದ ರಮೇಶ್ ಹುಕ್ಕೇರಿ ಎಂಬಾತನೇ ತನ್ನ ಸ್ನೇಹಿತನ ಪತ್ನಿಯನ್ನು ಕರೆದೊಯ್ದು ಮದುವೆಯಾದವ. 

ಬೈಲಹೊಂಗಲದ ಬಸವರಾಜ ಕೋನನ್ನ ವರ ಎಂಬಾತ ಪತ್ನಿಯನ್ನು ಕಳೆದುಕೊಂಡ ವ್ಯಕ್ತಿ. 2 ತಿಂಗಳ ಹಿಂದೆ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆ ದಿದೆ. 500 ಸಾಲಕ್ಕಾಗಿ ಪತ್ನಿ ಕಳೆದುಕೊಂಡ ಪತಿ, ನ್ಯಾಯ ಕೋರಿ ಡಿಸಿ ಕಚೇರಿ ಮೆಟ್ಟಿಲೇರಿದ್ದಾನೆ. 

ಏನಿದು ಪ್ರಕರಣ?: ಮಿಡಕನಟ್ಟಿ ಗ್ರಾಮದ ರಮೇಶ್ ಹುಕ್ಕೇರಿ ಹಾಗೂ ಬೈಲಹೊಂಗಲ ತಾಲೂಕಿನ ಬಸವರಾಜ ಕೋನನ್ನವರ ಮತ್ತು ಈತನ ಪತ್ನಿ ಅನಿತಾ (ಹೆಸರು ಬದಲಿಸಲಾಗಿದೆ) ಬೆಳಗಾವಿ ನಗರದ ಒಂದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ರಮೇಶ್ ತನ್ನ ಸ್ನೇಹಿತ  ಬಸವರಾಜನ ಪತ್ನಿಯೊಂದಿಗೂ ಸ್ನೇಹ ಬೆಳೆಸಿಕೊಂಡಿದ್ದಾನೆ. 

ರಮೇಶ್ ಹತ್ತಿರ ಬಸವರಾಜು 500  ಸಾಲ ಪಡೆದಿದ್ದ. ಆದರೆ ಇದನ್ನು ಹಿಂದಿರುಗಿಸಲು ವಿಳಂಬವಾಗಿದೆ. ಇದೇ ಕಾರಣ ಇಟ್ಟುಕೊಂಡು ರಮೇಶ್ ತನ್ನ ಸ್ನೇಹಿತನ ಪತ್ನಿಯನ್ನು ಕರೆದೊಯ್ದು ಮದುವೆಯಾಗಿದ್ದಾನೆ. ತನ್ನ ಪತ್ನಿಗೆ ಇಲ್ಲಸಲ್ಲದ್ದನ್ನು ಹೇಳಿ ಆಕೆಯ ತಲೆ ಕೆಡಿಸಿ ಮದುವೆಯಾಗಿದ್ದಾನೆ ಎಂಬುದು ಬಸವರಾಜ ಆರೋಪ. 

click me!