ಮಾಜಿ – ಹಾಲಿ ಗೃಹ ಸಚಿವರ ನಡುವೆ ಟಿಕೆಟ್ ವಾರ್

Published : Mar 29, 2018, 01:05 PM ISTUpdated : Apr 11, 2018, 01:06 PM IST
ಮಾಜಿ – ಹಾಲಿ ಗೃಹ ಸಚಿವರ ನಡುವೆ ಟಿಕೆಟ್ ವಾರ್

ಸಾರಾಂಶ

ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್’ನಲ್ಲಿ  ಟಿಕೆಟ್’ಗಾಗಿ ಜಗಳ ಶುರುವಾಗಿದೆ ಎನ್ನುವ ಮಾತುಗಳು  ಕೇಳಿ ಬಂದಿದೆ.

ಬೆಂಗಳೂರು : ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್’ನಲ್ಲಿ  ಟಿಕೆಟ್’ಗಾಗಿ ಜಗಳ ಶುರುವಾಗಿದೆ ಎನ್ನುವ ಮಾತುಗಳು  ಕೇಳಿ ಬಂದಿದೆ. ಹಾಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ  ಮಾಜಿ ಗೃಹ ಸಚಿವರಾದ ಪರಮೇಶ್ವರ್ ನಡುವೆ ಟಿಕೆಟ್’ಗಾಗಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಜಯನಗರ ಟಿಕೆಟ್ ವಿಚಾರದಲ್ಲಿ ಇಬ್ಬರ ನಡುವೆ  ವಾರ್ ನಡೆಯುತ್ತಿದೆ ಎನ್ನಲಾಗಿದೆ. ಮಗಳು ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಲು ರಾಮಲಿಂಗಾ ಮನವಿ ಮಾಡಿದ್ದು, ಎಲ್ಲಾ ಟಿಕೆಟ್’ಗಳನ್ನೂ ಅಪ್ಪ ಮಕ್ಕಳಿಗೆ ನೀಡಿದರೇ ಹೇಗೆ ಎಂದು ಪರಮೇಶ್ವರ್ ಹೇಳಿದ್ದು, ಎಂ.ಸಿ ವೇಣುಗೋಪಾಲ್ ಪರ ಬ್ಯಾಟಿಂಗ್ ಮಾಡಿದ್ದಾರೆ .

ಅರ್ಹತೆ ಇದ್ದವರಿಗೆ ಟಿಕೆಟ್ ಕೊಡಿ ನನ್ನ ಮಗಳು ಎಂದು ಕೊಡಬೇಡಿ ಎಂದು ರಾಮಲಿಂಗಾರೆಡ್ಡಿ ಸಿಎಂ ಅವರಿಗೆ ತಿಳಿಸಿದ್ದು, ಜಯನಗರ  ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಹೆಸರು ಕಳಿಸಲು ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೊನೆಗೆ ಸಿಎಂ ಮಧ್ಯ ಪ್ರವೇಶದಿಂದ  ವಿಚಾರ ತಣ್ಣಗಾಗಿದ್ದು, ಬೊಮ್ಮನಹಳ್ಳಿ ಕ್ಷೇತ್ರದಿಂದ ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡುವ ಪ್ಲಾನ್ ನಡೆದಿದೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿತ್ರದುರ್ಗ ದುರಂತ: ಮದುವೆ ಫಿಕ್ಸ್ ಆಗಿದ್ದ ಜೀವದ ಗೆಳತಿಯರಿಬ್ಬರ ಕೊನೆಯ ಪ್ರಯಾಣ! ಓದಿದ್ದೂ ಜೊತೆಯಲ್ಲೇ ಜೀವ ಹೋಗಿದ್ದೂ ಒಟ್ಟಿಗೆ!
ಭಾರತದಲ್ಲಿ ಮಿಡ್ಲ್ ಕ್ಲಾಸ್ ಮದುವೆ ಖರ್ಚು ಭಾರಿ ಏರಿಕೆ? ಅದ್ಧೂರಿ ವಿವಾಹಕ್ಕೆ ಲೆಕ್ಕವೇ ಸಿಗುತ್ತಿಲ್ಲ