ಬಾಲಕಿ ಎದುರು ಎಲೆಕ್ಷನ್ ಸೋತಿದ್ದಕ್ಕೆ 13ರ ಬಾಲಕ ಆತ್ಮಹತ್ಯೆ!

Published : Jul 20, 2019, 09:19 AM IST
ಬಾಲಕಿ ಎದುರು ಎಲೆಕ್ಷನ್ ಸೋತಿದ್ದಕ್ಕೆ 13ರ ಬಾಲಕ ಆತ್ಮಹತ್ಯೆ!

ಸಾರಾಂಶ

ಹುಡುಗಿ ಜತೆ ಸ್ಪರ್ಧೆ​ಯಲ್ಲಿ ಸೋತೆ ಎಂದು ಲೇವಡಿ | ಚುನಾ​ವ​ಣೇಲಿ ಹುಡುಗಿ ಎದು​ರು ಸೋತಿದ್ದಕ್ಕೆ 13ರ ಬಾಲಕ ಆತ್ಮ​ಹ​ತ್ಯೆಗೆ ಶರಣು| 

ನಲ್ಗೊಂಡ[ಜು.20]: ಶಾಲಾ ಚುನಾವಣೆಯಲ್ಲಿ ಬಾಲಕಿ ಎದುರು ಸೋತಿದ್ದಕ್ಕೆ ಕೇಳಿಬಂದ ಲೇವಡಿಗೆ ಮನನೊಂದ 8ನೇ ತರಗತಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕರುಣಾಜನ, ಆಘಾತಕಾರಿ ಘಟನೆ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಇಂದಿನ ಮಕ್ಕಳೇ ನಾಳಿನ ನಾಯ​ಕರು ಎಂಬ ಗುರಿ​ಯೊಂದಿಗೆ, ರಾಜ​ಕೀ​ಯದ ತಂತ್ರ​ಗ​ಳನ್ನು ಶಾಲಾ ಹಂತ​ದಲ್ಲೇ ತಿಳಿ​ಸಿ​ಕೊ​ಡುವ ನಿಟ್ಟಿ​ನಲ್ಲಿ ಶಾಲೆ​ಯಲ್ಲಿ ವಿದ್ಯಾರ್ಥಿ ನಾಯ​ಕ ಆಯ್ಕೆ​ಗಾಗಿ ಚುನಾವಣೆ ನಡೆಸಲಾಗಿತ್ತು. ಕಳೆದ ಜೂನ್‌ ತಿಂಗಳಲ್ಲಿ ನಡೆದ ಚುನಾವಣೆ ಫಲಿತಾಂಶವನ್ನು 3 ದಿನಗಳ ಹಿಂದೆ ಪ್ರಕಟಿಸಲಾಗಿತ್ತು. ಅದರಲ್ಲಿ ಬಾಲಕಿಯೊಬ್ಬಳು ವಿಜೇತಳಾಗಿದ್ದಳು. ಚುನಾವಣೆಗೆ ಸ್ಪರ್ಧಿಸಿದ್ದ 13 ವರ್ಷದ ಹಿಮಾ​ಚ​ರಣ್‌ 2ನೇ ಸ್ಥಾನಕ್ಕೆ ತೃಪ್ತಿ​ಪ​ಟ್ಟು​ಕೊ​ಳ್ಳು​ವಂತಾ​ಗಿತ್ತು.

ಇದೇ ವಿಚಾ​ರ​ವಾಗಿ ಸ್ನೇಹಿ​ತರು ಹುಡುಗಿ ಜತೆ ಸ್ಪರ್ಧೆ​ಯಲ್ಲಿ ಸೋತೆ ಎಂದು ಲೇವಡಿ ಮಾಡಿ ಕಿಚಾ​ಯಿ​ಸಿ​ದ್ದರು. ಆದರೆ ಇದನ್ನೇ ಗಂಭೀ​ರ​ವಾಗಿ ಸ್ವೀಕ​ರಿ​ಸಿದ್ದ ಹಿಮಾಚರ​ಣ್‌ ಗುರು​ವಾರ ಶಾಲೆ ಮುಗಿದ ನಂತರ ಮನೆಗೆ ಹಿಂದಿ​ರುಗಿ ಶಾಲೆ ಬ್ಯಾಗ್‌ ಇಟ್ಟು ರೈಲು ಹಳಿಯತ್ತ ತೆರಳಿ ಹಳಿಗೆ ಬಿದ್ದು ಆತ್ಮ​ಹತ್ಯೆ ಮಾಡಿ​ಕೊಂಡಿ​ದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!
ರಾಜ್ಯಾದ್ಯಂತ ಎಲ್‌ಕೆಜಿ ಯಿಂದ ಪಿಯುಸಿವರೆಗೆ ಕಲಿಕಾ ಸಮಯದ ಅವಧಿ ಬದಲಾಯಿಸುವಂತೆ ಶಿಕ್ಷಣ ಇಲಾಖೆಗೆ ಮಕ್ಕಳ ಆಯೋಗ ಪತ್ರ