
ಮದುರೈ[ಆ.03]: ಚಿಕನ್ ತಿನಿಸೊಂದಕ್ಕೆ ಬ್ರಾಹ್ಮಣ ಸಮುದಾಯದ ಹೆಸರನ್ನು ನಾಮಕಾರಣ ಮಾಡಿ ಮದುರೈನ ರೆಸ್ಟೋರೆಂಟ್ವೊಂದು ವಿವಾದಕ್ಕೆ ಸಿಲುಕಿದೆ.
ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾದಿತ ಹೆಸರನ್ನು ಕೈಬಿಟ್ಟಿದೆ. ಮದುರೈನ ಹೋಟೆಲ್ ಮಿಲಗು, ತಾನು ತಯಾರಿಸುವ ಕೋಳಿ ಮಾಂಸದ ಖಾದ್ಯವೊಂದಕ್ಕೆ ‘ಕುಂಬಕೋಣಂ ಅಯ್ಯರ್ ಚಿಕನ್’ ಎಂದು ಹೆಸರಿಟ್ಟಿತ್ತು.
ಅಯ್ಯರ್ ಎಂಬುದು ಬ್ರಾಹ್ಮಣ ಸಮುದಾಯ. ಮಾಂಸಾಹಾರ ತಿನಿಸಿಗೆ ಸಸ್ಯಾಹಾರಿ ಸಮುದಾಯದ ಹೆಸರಿಟ್ಟಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು. ಸಮುದಾಯದವರು ಹೋಟೆಲ್ಗೆ ಹೋಗಿ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ ವಿವಾದಿತ ಹೆಸರನ್ನು ಹೋಟೆಲ್ ಕೈಬಿಟ್ಟು, ಕ್ಷಮೆ ಯಾಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.