ಬಿಜೆಪಿ ಸಣ್ಣತನದ ರಾಜಕೀಯ ಮಾಡಲ್ಲ : ಅನಿತಾ ಕುಮಾರಸ್ವಾಮಿ

Published : Aug 03, 2019, 09:54 AM ISTUpdated : Aug 03, 2019, 11:05 AM IST
ಬಿಜೆಪಿ ಸಣ್ಣತನದ ರಾಜಕೀಯ ಮಾಡಲ್ಲ : ಅನಿತಾ ಕುಮಾರಸ್ವಾಮಿ

ಸಾರಾಂಶ

ನಿಖಿಲ್ ಕುಮಾರಸ್ವಾಮಿ ಚುನಾವಣೆ ಸ್ಪರ್ಧೆ ಬಗ್ಗೆ ಶಾಸಕಿ ಅನಿತಾ ಕುಮಾರಸ್ವಾಮಿ ಇದೆಲ್ಲಾ ವದಂತಿ. ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ ಮಾತನಾಡಿದ್ದಾರೆ.

ರಾಮ​ನ​ಗರ (ಆ.03):  ಶಾಸ​ಕರು ಅನ​ರ್ಹ​ರಾ​ಗಿ​ರುವ ಕ್ಷೇತ್ರ​ದಲ್ಲಿ ನಡೆ​ಯುವ ಉಪ​ಚು​ನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಯುವ ಘಟಕ ಅಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಸ್ಪರ್ಧಿಸುವ ಕುರಿತು ಯಾವುದೇ ಚರ್ಚೆ ನಡೆ​ದಿಲ್ಲ ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಹೇಳಿದರು.

ನಗ​ರದ ವಿಜ​ಯ​ನ​ಗರ ಬಡಾ​ವ​ಣೆ​ಯ​ಲ್ಲಿರುವ ಕಾಳಿ​ಕಾಂಬ ದೇವಾ​ಲ​ಯ​ದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಉಪ​ಚು​ನಾ​ವ​ಣೆ​ಯಲ್ಲಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸು​ತ್ತಾ​ರೆಂಬುದು ವದಂತಿ. ಯಾವ ಕ್ಷೇತ್ರ​ದಲ್ಲಿ ಯಾರು ಅಭ್ಯರ್ಥಿ ಆಗ​ಬೇ​ಕೆಂಬು​ದನ್ನು ವರಿ​ಷ್ಠರು ತೀರ್ಮಾ​ನಿ​ಸು​ತ್ತಾರೆ ಎಂದು ವದಂತಿಗಳಿಗ ತೆರೆ ಎಳೆದರು.

ನಿಖಿಲ್‌ ಸದ್ಯಕ್ಕೆ ಹೊಸ ಪ್ರೊಡಕ್ಷನ್‌ ಕೆಲಸ ಮಾಡಲು ಸಹಿ ಮಾಡಿದ್ದಾನೆ. ಈಗ ಬಿಡು​ಗಡೆ ಆಗ​ಲಿ​ರುವ ಕುರು​ಕ್ಷೇತ್ರ ಚಿತ್ರ​ದಲ್ಲಿ ಚೆನ್ನಾಗಿ ನಟಿ​ಸಿ​ದ್ದಾನೆ. ಆ ಸಿನಿ​ಮಾ​ದಿಂದ ನಿಖಿಲ್‌ ಒಳ್ಳೆಯ ಹೆಸರು ಬರ​ಲಿದೆ. ಸಿನಿ​ಮಾ​ದಲ್ಲಿ ತೊಡ​ಗಿ​ರುವ ಕಾರಣ ಉಪ ಉಪಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಸರ್ಕಾರ​ದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಆ ರೀತಿಯ ಸಣ್ಣ ತನದ ರಾಜಕೀಯ ಮಾಡುವುದಿಲ್ಲವೆಂಬ ವಿಶ್ವಾಸವಿದೆ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಾರಿಗೂ ತೊಂದರೆ ನೀಡಿಲ್ಲ. ರಾಮನಗರ ಕ್ಷೇತ್ರಕ್ಕೆ ಸಂಬಂಧಸಿದಂತೆ ಮುಂದಿನ ದಿನಗಳಲ್ಲಿ ನೀವೇ ಕಾದು ನೋಡಿ ಎಂದು ಹೇಳಿ​ದರು.

ರಾಮನಗರದಲ್ಲಿ ಆದಷ್ಟು ಬೇಗ ರಾಜೀವ್‌ ಗಾಂಧೀ ಯೂನಿವರ್ಸಿಟಿ ಪ್ರಾರಂಭವಾಗಲಿದೆ. ಈ ಕುರಿತು ಅಧಿಕಾರಿಗಳ ಜನತೆ ಶೀಘ್ರವೇ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು. ಜಾಗದ ಸಮಸ್ಯೆ ಕುರಿತು ರೈತರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿ​ಸಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ