ಸುವರ್ಣ ನ್ಯೂಸ್ ಇಂಪ್ಯಾಕ್ಟ್ : ಡಿಸಿಗೆ ಮುಖ್ಯ ಕಾರ್ಯದರ್ಶಿ'ಯಿಂದ ತರಾಟೆ

Published : Feb 28, 2018, 09:26 PM ISTUpdated : Apr 11, 2018, 01:06 PM IST
ಸುವರ್ಣ ನ್ಯೂಸ್ ಇಂಪ್ಯಾಕ್ಟ್ : ಡಿಸಿಗೆ ಮುಖ್ಯ ಕಾರ್ಯದರ್ಶಿ'ಯಿಂದ ತರಾಟೆ

ಸಾರಾಂಶ

ರೈತರ ಜಮೀನಿಗೆ ಬೆಲೆ ನಿಗದಿ ಮಾಡಿದ್ದರೂ ಅಧಿಕೃತ ಆದೇಶವನ್ನೇ ಹೊರಡಿಸದೇ ಬೇಜವಾಬ್ದಾರಿತನ ಮೆರೆದಿದ್ದ ಡಿಸಿ ವಿರುದ್ಧ ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತರಾಟೆಗೆ ತಗೆದುಕೊಂಡರು.

ಬಸವನ ಬಾಗೇವಾಡಿ ರೈತರ ಜಮೀನು ವಶಕ್ಕೆ ಪಡೆದು ಪರಿಹಾರವನ್ನು ನೀಡದೆ ಸುಮ್ಮನಿದ್ದ ಕೆಐಎಡಿಬಿ ಬೋರ್ಡ್ ಇಂದು ಸಭೆ ನಡೆಸಿದೆ.

ಸುವರ್ಣ ನ್ಯೂಸ್ ವರದಿಯ ಹಿನ್ನಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಇವತ್ತು ಕೆಐಎಡಿಬಿ ಮಂಡಳಿ ಸಭೆ ನಡೆಸಿದ್ದಾರೆ. ಈ ವೇಳೆ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ ಅಧಿಕಾರಿಗಳಿಗೆ ಸಭೆಯಲ್ಲಿ ವಿಜಯಪುರ ಡಿಸಿ ಬೇಜವಬ್ದಾರಿತನ ಗಮನಕ್ಕೆ ಬಂದಿದೆ. ರೈತರ ಜಮೀನಿಗೆ ಬೆಲೆ ನಿಗದಿ ಮಾಡಿದ್ದರೂ ಅಧಿಕೃತ ಆದೇಶವನ್ನೇ ಹೊರಡಿಸದೇ ಬೇಜವಾಬ್ದಾರಿತನ ಮೆರೆದಿದ್ದ ಡಿಸಿ ವಿರುದ್ಧ ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತರಾಟೆಗೆ ತಗೆದುಕೊಂಡರು.

ತಕ್ಷಣ ಅಧಿಕೃತ ಆದೇಶ ಕಳುಹಿಸಲು ಸೂಚನೆ ನೀಡಿರುವ ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ. ಪ್ರಸಾದ್​, ಡಿ.ಸಿ. ಆದೇಶ ತಲುಪುತ್ತಿದ್ದಂತೆ ರೈತರಿಗೆ ಪರಿಹಾರ ನೀಡಲು ಕೆಐಎಡಿಬಿ ಮಂಡಳಿ ಸಭೆಯಲ್ಲಿ ನಿರ್ಧರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!