ಬಿಬಿಎಂಪಿ ಬಜೆಟ್ ಮಂಡನೆ: ಮೇಯರ್ , ಆಯುಕ್ತರ ನಿವಾಸ ನಿರ್ಮಾಣಕ್ಕೆ 5 ಕೋಟಿ, ಕಾರ್ಪೊರೇಟರ್'ಗಳ ಗೌರವಧನ 3 ಪಟ್ಟು ಹೆಚ್ಚಳ

Published : Feb 28, 2018, 09:05 PM ISTUpdated : Apr 11, 2018, 12:59 PM IST
ಬಿಬಿಎಂಪಿ ಬಜೆಟ್ ಮಂಡನೆ: ಮೇಯರ್ , ಆಯುಕ್ತರ ನಿವಾಸ ನಿರ್ಮಾಣಕ್ಕೆ 5 ಕೋಟಿ, ಕಾರ್ಪೊರೇಟರ್'ಗಳ ಗೌರವಧನ 3 ಪಟ್ಟು ಹೆಚ್ಚಳ

ಸಾರಾಂಶ

ಬಿಬಿಎಂಪಿ ಆರ್ಥಿಕ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್  ಬರೋಬ್ಬರಿ 9,325.53 ಕೋಟಿ ಗಾತ್ರದ ಬಜೆಟ್ ಮಂಡಿಸಿದರು.

ಸಿಲಿಕಾನ್ ಸಿಟಿಯ ಮಂದಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಇಂದು ಮಂಡಿಸಲಾಯಿತು. ಕಳೆದ ವರ್ಷದಂತೆ ಬರೋಬ್ಬರಿ 9 ಸಾವಿರ ಕೋಟಿ ಈ ಬಾರಿ ಇತ್ತು. ಆಡಳಿತ ಪಕ್ಷ ಇದು ಅದ್ಬುತ ಬಜೆಟ್ ಅಂತ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದ್ದರೆ ವಿರೋಧ ಪಕ್ಷ ಇಂಥ ಕೆಟ್ಟ ಬಜೆಟ್'ನಿಂದ ಬೆಂಗಳೂರಿಗೆ ಮೋಸ ಆಗಿದೆ ಟೀಕೆ ವ್ಯಕ್ತಪಡಿಸಿದೆ

ಬಿಬಿಎಂಪಿ ಆರ್ಥಿಕ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್  ಬರೋಬ್ಬರಿ 9,325.53 ಕೋಟಿ ಗಾತ್ರದ ಬಜೆಟ್ ಮಂಡಿಸಿದರು. ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಈ ಬಾರಿ ಬಜೆಟ್ ಬಗ್ಗೆ  ಬೆಂಗಳೂರಿಗರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಹಳೆ ಲೆಕ್ಕ, ಹೊಸ ಪಟ್ಟಿಯಂತಿತ್ತು ಈ ಬಾರಿಯ ಬಜೆಟ್.

 

 ‘

  1. 198 ಸದಸ್ಯರುಗಳಿಗೆ ಟ್ಯಾಬ್ ವಿತರಣೆ
  2. ಮೇಯರ್ , ಆಯುಕ್ತರ ನಿವಾಸ ನಿರ್ಮಾಣಕ್ಕೆ 5 ಕೋಟಿ
  3. ಕಾರ್ಪೊರೇಟರ್ ಗಳ ಗೌರವಧನ 3 ಪಟ್ಟು ಹೆಚ್ಚಳ
  4. 400 ವಿವಿಧ ರಸ್ತೆ, ಪ್ರದೇಶಗಳಲ್ಲಿ ಉಚಿತ ವೈ-ಫೈ
  5. ಇಂದಿರಾ ಕ್ಯಾಂಟೀನ್ ಮೂಲಕ ಪೌರ ಕಾರ್ಮಿಕರಿಗೆ ಬಿಸಿಊಟ
  6. ಒಂಟಿ ಮನೆಗಳ ನಿರ್ಮಾಣ ಯೋಜನೆಗೆ 80 ಕೋಟಿ ಅನುದಾನ
  7. -ಎಸ್​ಟಿ ಸಮುದಾಯದ ಪ್ರದೇಶಾಭಿವೃದ್ಧಿಗೆ 110 ಕೋಟಿ
  8. ಕಲ್ಯಾಣ ಕಾರ್ಯಕ್ರಮಗಳಿಗೆ ಒಟ್ಟೂ 769 ಕೋಟಿ ಮೀಸಲು
  9. ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ 100 ಕೋಟಿ
  10. 40 ಕೆರೆ ಗಳ ನಿರ್ವಹಣೆಗೆ 10 ಕೋಟಿ
  11. 8 ವಲಯಗಳಲ್ಲಿ ಹೆಲಿ ಪ್ಯಾಡ್ ನಿರ್ಮಾಣಕ್ಕೆ 5 ಕೋಟಿ ಅನುದಾನ
  12. 150 ಕಿಮೀ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳ ವೈಟ್ ಟಾಪಿಂಗ್
  13. ಐಟಿಪಿಎಲ್ ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ನಿರ್ಮಾಣ
  14. ಪಾಲಿಕೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ 2 ಕೋಟಿ
  15. ಪಿಂಕ್ ಬೇಬಿ ಕಾರ್ಯಕ್ರಮದ 5 ಲಕ್ಷ ಠೇವಣಿಗಾಗಿ 1.2 ಕೋಟಿ
  16. ಡಯಾಲಿಸಿಸ್ ಕೇಂದ್ರ ನಿರ್ಮಾಣಕ್ಕಾಗಿ 15 ಕೋಟಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ