
ಬೆಂಗಳೂರು(ಆ.19): ತಾಯಿಯೇ ಮಗನ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆನಗರದಲ್ಲಿ ನಡೆದಿದೆ. ಗಾಂಜಾಗೆ ದಾಸನಾಗಿದ್ದ ಮಗ ರಮೇಶ್ ಎಂಬುವವರೇ ತಾಯಿಯಿಂದ ಹತ್ಯೆಯಾದ ವ್ಯಕ್ತಿ.
ಮಗ ರಮೇಶ್ ಗಾಂಜಾಗೆ ಅಡಿಕ್ಟ್ ಆಗಿದ್ದು, ಪ್ರತಿ ದಿನಾ ಗಾಂಜಾ ತಾಯಿಯಿಂದ ಸೇದಲು ಹಣವನ್ನು ಕೇಳುತ್ತಿದ್ದ, ಹಣ ಸಿಗದೇ ಇದ್ದಾಗ ಕಳ್ಳತನ ಮಾಡುವುದು, ಸಿಕ್ಕ ಹಣದಲ್ಲಿ ಗಾಂಜಾ ಹೊಡೆಯುವುದು ಇವನ ಪ್ರತಿದಿನದ ಕಯಾಲಿ ಆಗಿತ್ತು. ಹೀಗೆ ಪ್ರತಿ ದಿನ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ರಮೇಶ್ ಇಂದು ಕೂಡಾ ಗಾಂಜಾ ಸೇದಲು ಹಣ ಬೇಕು ಎಂದು ತಾಯಿಯ ಬಳಿ ಬೇಡಿಕೆ ಇಟ್ಟು ಗಲಾಟೆ ಮಾಡಿದ್ದಾನೆ, ಪ್ರತಿದಿನದ ಇವನ ಈ ವರ್ತನೆಯಿಂದ ಮನ ನೊಂದ ತಾಯಿ ಮಗನ ಉಪಟಳ ತಾಳಲಾರದೆ ಹರಿತವಾದ ವಸ್ತುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.