ಗೋಶಾಲೆಯಲ್ಲಿ 27 ಹಸುಗಳ ಸಾವು; ಬಿಜೆಪಿ ಮುಖಂಡ ಆರೆಸ್ಟ್

Published : Aug 19, 2017, 03:49 PM ISTUpdated : Apr 11, 2018, 12:42 PM IST
ಗೋಶಾಲೆಯಲ್ಲಿ 27 ಹಸುಗಳ ಸಾವು; ಬಿಜೆಪಿ ಮುಖಂಡ ಆರೆಸ್ಟ್

ಸಾರಾಂಶ

ಹಸುಗಳ ಸಾವಿನ ಕುರಿತಂತೆ ಕಾರಣ ತಿಳಿದುಬಂದಿಲ್ಲ. ಹಸುಗಳ ರಕ್ತದ ಮಾದರಿಗಳನ್ನು ಲ್ಯಾಬೊರೇಟರಿಗಳಿಗೆ ಕಳಿಸಲಾಗಿದೆ. ವರದಿಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದು ವೈದ್ಯಕೀಯ ಸಹಾಯಕ ಆಯುಕ್ತ ಸಂಜಯ್ ಅಗರ್'ವಾಲ್ ಹೇಳಿದ್ದಾರೆ.

ಛತ್ತೀಸ್'ಘಡ್(ಆ.19): ಬಿಜೆಪಿ ಸ್ಥಳೀಯ ಮುಖಂಡರೊಬ್ಬರು ನಿರ್ವಹಿಸುತ್ತಿರುವ ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 27 ಹಸುಗಳು ದುರಂತ ಸಾವಿಗೀಡಾಗಿರುವ ಘಟನೆ ಛತ್ತೀಸ್‌'ಗಢದಲ್ಲಿ ನಡೆದಿದೆ.

ಈ ಬಗ್ಗೆ ಬಿಜೆಪಿ ಮುಖಂಡ ಹರೀಶ್ ವರ್ಮಾ ವಿರುದ್ಧ ‘ಛತ್ತೀಸ್'ಗಢ ಗೋವು ಸೇವಾ ಆಯೋಗ’ ಪೊಲೀಸರಿಗೆ

ಶುಕ್ರವಾರ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆ.15ರಂದು ಗೋಶಾಲೆಯ ತಡೆಗೋಡೆ ಕುಸಿದು ಬಿದ್ದು, ಹಸುಗಳು ಮೃತಪಟ್ಟಿವೆ ಎಂದು ಜಮುಲ್ ಮುನಿಸಿಪಾಲಿಟಿಯಲ್ಲಿ ಉಪಾಧ್ಯಕ್ಷರಾದ ವರ್ಮಾ ಹೇಳಿದ್ದಾರೆ.

ಹಸುಗಳ ಸಾವಿನ ಕುರಿತಂತೆ ಕಾರಣ ತಿಳಿದುಬಂದಿಲ್ಲ. ಹಸುಗಳ ರಕ್ತದ ಮಾದರಿಗಳನ್ನು ಲ್ಯಾಬೊರೇಟರಿಗಳಿಗೆ ಕಳಿಸಲಾಗಿದೆ. ವರದಿಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದು ವೈದ್ಯಕೀಯ ಸಹಾಯಕ ಆಯುಕ್ತ ಸಂಜಯ್ ಅಗರ್'ವಾಲ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕ್ರಮಣ ನಂತ್ರ ಸಿಎಂ ಬದಲು ಆಗ್ತಾರೆ, ಆಗಲ್ಲ ಎರಡೂ ಇದೆ: ಸಚಿವ ಸತೀಶ್‌ ಜಾರಕಿಹೊಳಿ
ಕೆಎಸ್‌ಸಿಎಗೆ ರಾಜ್ಯ ಸರ್ಕಾರ ಶಾಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ 'ರೆಡ್ ಸಿಗ್ನಲ್'