
ಹೈದರಾಬಾದ್ (ನ.25): ಸಾರ್ವಜನಿಕರ ಸಮಸ್ಯೆಗಳ ಆಲಿಕೆ ಮತ್ತು ವಿದೇಯಕಗಳ ಮಂಡನೆಗಾಗಿ ಲೋಕಸಭೆ, ರಾಜ್ಯಸಭೆ, ರಾಜ್ಯಗಳಲ್ಲಿ ವಿಧಾನಸಭೆ ಕಲಾಪ ನಡೆಯುತ್ತವೆ. ಆದರೆ, ಆಂಧ್ರಪ್ರದೇಶದ 100ಕ್ಕೂ ಹೆಚ್ಚು ಶಾಸಕರು ಒಮ್ಮೆಗೆ ಸಾಮೂಹಿಕ ರಜೆ ಕೇಳಿದ್ದಾರೆ. ಹಾಗಾಗಿ, 2 ದಿನದ ಕಲಾಪಕ್ಕೇ ಕಾಲ ರಜೆ ಘೋಷಿಸಲಾಗಿದೆ.
ಇದೀಗ ಎಲ್ಲೆಡೆ ವಿವಾಹ ಕಾರ್ಯಕ್ರಮಗಳ ಸಮಯ. ಮುಂದಿನ ಒಂದು ವಾರದ ಅವಧಿಯಲ್ಲಿ ಆಂಧ್ರದಲ್ಲಿ 1.2 ಲಕ್ಷಕ್ಕೂ ಹೆಚ್ಚು ಮದುವೆ ನಿಗದಿಯಾಗಿವೆ. ಈ ಪೈಕಿ ಹಲವು ಗಣ್ಯರದ್ದು, ರಾಜಕೀಯ ನಾಯಕ ಬಂಧುಗಳದ್ದು ಸೇರಿವೆ. ಇದನ್ನು ತಪ್ಪಿಸಲಾಗದ 100ಕ್ಕೂ ಶಾಸಕರು ನ.23 ಮತ್ತು 24ರಂದು ರಜೆ ಬೇಕೆಂದು ಕೋರಿದ್ದಾರೆ. ಮುಂದಿನ 2 ದಿನ ಶನಿವಾರ ಮತ್ತು ಭಾನುವಾರವಾದ ಕಾರಣ ಒಟ್ಟಿಗೆ 4 ದಿನ ರಜೆ ಸಿಗುತ್ತದೆ.
ಬೇರೆ ದಾರಿ ಕಾಣದ ಸ್ಪೀಕರ್ ರಜೆ ನೀಡುವ ಬದಲು 2 ದಿನ ಕಲಾಪವನ್ನೇ ಮುಂದೂಡಿದ್ದಾರೆ. ಜೊತೆಗೆ ಅಧಿವೇಶನದ ಅವಧಿಯನ್ನು 2 ದಿನ ವಿಸ್ತರಿಸಲಾಗಿದೆ. ಹೀಗಾಗಿ ಎಲ್ಲ ಶಾಸಕರಿಗೂ ರಜೆ ಸಿಕ್ಕಿದ್ದೂ, ಎಲ್ಲರೂ ತಮ್ಮ ಕ್ಷೇತ್ರಗಳಿಗೆ ಮರಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.