ಯೋಗೀಶ್ ಗೌಡ ಪರ ವಕೀಲ ಆನಂದ್'ಗೆ ಧಮ್ಕಿ ಹಾಕಿದ್ದನ್ನು ಒಪ್ಪಿಕೊಂಡ ವಿನಯ್ ಕುಲಕರ್ಣಿ

Published : Nov 25, 2017, 04:24 PM ISTUpdated : Apr 11, 2018, 01:10 PM IST
ಯೋಗೀಶ್ ಗೌಡ ಪರ ವಕೀಲ ಆನಂದ್'ಗೆ ಧಮ್ಕಿ ಹಾಕಿದ್ದನ್ನು ಒಪ್ಪಿಕೊಂಡ ವಿನಯ್ ಕುಲಕರ್ಣಿ

ಸಾರಾಂಶ

ಬಿಜೆಪಿ ಮುಖಂಡ ಯೋಗೀಶ್​ ಗೌಡ ಹತ್ಯೆ ಪ್ರಕರಣದಲ್ಲಿ  ಯೋಗೀಶ್ ಗೌಡ ಪರ ವಕೀಲ ಆನಂದ್​ಗೆ ಧಮ್ಕಿ ಹಾಕಿದ್ದು ನಿಜವೆಂದು ವಿನಯ್ ಕುಲಕರ್ಣಿ ಒಪ್ಪಿಕೊಂಡಿದ್ದಾರೆ.

ಬೆಂಗಳೂರು (ನ.25): ಬಿಜೆಪಿ ಮುಖಂಡ ಯೋಗೀಶ್​ ಗೌಡ ಹತ್ಯೆ ಪ್ರಕರಣದಲ್ಲಿ  ಯೋಗೀಶ್ ಗೌಡ ಪರ ವಕೀಲ ಆನಂದ್​ಗೆ ಧಮ್ಕಿ ಹಾಕಿದ್ದು ನಿಜವೆಂದು ವಿನಯ್ ಕುಲಕರ್ಣಿ ಒಪ್ಪಿಕೊಂಡಿದ್ದಾರೆ.

ಆನಂದ್​ ವಿರುದ್ಧ ಕೋಪದಲ್ಲಿ ಮಾತನಾಡಿದ್ದೇನೆ. ನಮ್ಮ ಹುಡುಗ ಎಂಬ ಸಲಿಗೆಯಿಂದ ಮಾತನಾಡಿದ್ದೇನೆ. ಕೋಪದ ಭರದಲ್ಲಿ ನಾಲ್ಕೈದು ಕೆಟ್ಟ ಪದ ಬಳಕೆಯಾಗಿದೆ ಎಂದು ಸಚಿವರು ಒಪ್ಪಿಕೊಂಡಿದ್ದಾರೆ.

ಯೋಗೀಶ್ ಗೌಡ ಸಹೋದರ ಗುರುನಾಥಗೌಡ ಜತೆ ಸಂಧಾನ  ಮಾತುಕತೆ ನಡೆಸಿದ್ದನ್ನು ವಿನಯ್ ಕುಲಕರ್ಣಿ ಒಪ್ಪಿಕೊಂಡಿದ್ದಾರೆ.  ಆಪ್ತ ಮಹೇಶ್ ಶೆಟ್ಟಿ ಮನೆಗೆ ಗುರುನಾಥಗೌಡರೇ ಬಂದಿದ್ದರು.  ನನ್ನ ಬಳಿ ಗುರುನಾಥಗೌಡರೇ ಬಂದಿದ್ದರು.  ನಾನು ಕರೆಸಿಲ್ಲ. ನಾನು ಏನು ಮಾತನಾಡಿದೆ ಅನ್ನೋದನ್ನ ಅವರ ಬಳಿಯೇ ಕೇಳಿ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಯ್ಯಯ್ಯೋ.. ದೆವ್ವ ಹಿಡಿದಿದೆಯೆಂದು ಗೃಹಿಣಿಯನ್ನು ಬೇವಿನ ಕಟ್ಟಿಗೆಯಿಂದ ಥಳಿಸಿ ಕೊಲೆ!
ಯಶಸ್ವಿ ಜನರು ಪಾಲಿಸುವ ದಿನಚರಿ: 2026ರಲ್ಲಿ ನೀವು ಕೂಡ ಅನುಸರಿಸಬಹುದಾದ 10 ದಾರಿಗಳು