ಸೋಷಿಯಲ್ ಮೀಡಿಯಾ ಆಕ್ರೋಶಕ್ಕೆ ಕಾರಣವಾಯ್ತು ಎಂ ಡಿ ಪಲ್ಲವಿ ’ಶಾಂತಿ’ ಪೋಸ್ಟ್

Published : Mar 02, 2019, 08:33 PM ISTUpdated : Mar 02, 2019, 08:37 PM IST
ಸೋಷಿಯಲ್ ಮೀಡಿಯಾ ಆಕ್ರೋಶಕ್ಕೆ ಕಾರಣವಾಯ್ತು ಎಂ ಡಿ ಪಲ್ಲವಿ  ’ಶಾಂತಿ’ ಪೋಸ್ಟ್

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ ಸರ್ಜಿಕಲ್ ಸ್ಟ್ರೈಕ್ ಚರ್ಚೆ | ವೈರಲ್ ಆಯ್ತು ಪಲ್ಲವಿ ಅರುಣ್ ಪೋಸ್ಟ್ | ಪಲ್ಲವಿ ’ಶಾಂತಿ’ ಪೋಸ್ಟ್‌ಗೆ ಆಕ್ರೋಶ 

ಬೆಂಗಳೂರು (ಮಾ. 02): ಪುಲ್ವಾಮಾ ದಾಳಿ ನಂತರ ಯುದ್ಧ ಬೇಕೋ, ಬೇಡವೋ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿದೆ. ಖ್ಯಾತ ಹಿನ್ನಲೆಗಾಯಕಿ ಪಲ್ಲವಿ ಅರುಣ್ ಹಾಕಿರುವ ಪೋಸ್ಟ್ ವೈರಲ್ ಆಗಿದೆ. 

100 ಕೆಜಿ ಬಾಂಬ್ ಸ್ಫೋಟಿಸಿ ಪಾಕ್ ನಾಶಪಡಿಸುತ್ತೇನೆ: ರಾಖಿ ಸಾವಂತ್

ಪುಲ್ವಾಮಾ ದಾಳಿಯ ನಂತರ ಪಾಕ್ ಗೆ ತಕ್ಕ ಪಾಠ ಕಲಿಸಬೇಕು. ಅವರದೇ ಭಾಷೆಯಲ್ಲಿ ಉತ್ತರಿಸಬೇಕು. ಅಗತ್ಯ ಬಿದ್ದರೆ ಯುದ್ಧ ಮಾಡಬೇಕು ಎನ್ನುವ ಮಾತು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹೆಚ್ಚು ಕೇಳಿ ಬರುತ್ತಿತ್ತು. ಈ ವೇಳೆ ಪಲ್ಲವಿಯವರು ಶಾಂತಿ ಮಾತುಕತೆ ಮಾತನಾಡಿದ್ದರು. ಎರಡೂ ದೇಶದ ನಡುವೆ ಯುದ್ಧ ಬೇಕೆಂದವರು ಹೋಗಿ ಯುದ್ಧ ಮಾಡಿ. ನಮ್ಮ ಜನರು ನರಳುವುದು, ಸಾಯುವುದು ಯಾರಿಗೆ ಇಷ್ಟವಿಲ್ಲವೋ ಅವರು ನನ್ನ ಪೋಸ್ಟನ್ನು ಮತ್ತೊಮ್ಮೆ ಓದಿ. ನಿಮಗೆ ನನ್ನ ಮೇಲೆ ಇನ್ನೂ ಕೋಪವಿದ್ದರೆ ನನ್ನನ್ನು ಅನ್ ಫಾಲೋ ಮಾಡಿ ಎಂದಿದ್ದಾರೆ. ಇದು ಸಾಮಾಜಿಕ ಜಾಲತಾಣಿಗರ ಕೋಪಕ್ಕೆ ತುತ್ತಾಗಿದೆ. 

 

ದರ್ಶನ್- ಸುದೀಪ್ ಮುಖಾಮುಖಿಗೆ ಸಿದ್ಧವಾಗಿದೆ ವೇದಿಕೆ!

ಇನ್ನು ಮುಂದುವರೆದು ವಿಂಗ್ ಕಮಾಂಡರ್ ಅಭಿನಂದನ್ ರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಕಡೆಗೂ ಸೇಫ್ ಆಗಿ ಭಾರತಕ್ಕೆ ಹಿಂತಿರುಗಿದ್ದಾರೆ ಎಂದು ಪೋಸ್ಟ್ ಹಾಕಿದ್ದರು. ಇದು ಕೂಡಾ ಆಕ್ರೋಶಕ್ಕೆ ಕಾರಣವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನದಿ ಸಮೀಪ ಡೆತ್ನೋಟ್ ಬರೆದಿಟ್ಟು ರೇ*ಪ್ ಆರೋಪಿ ಎಸ್ಕೇಪ್: ಆತನಿಗಾಗಿ ನದಿಯಲ್ಲಿ 3 ದಿನ ಹುಡುಕಿದ ಪೊಲೀಸರು
ಒಪ್ಪೊ ಫೈಂಡ್ X9 ಸೀರಿಸ್, ಪ್ರೋ ಲೆವಲ್ ಕ್ಯಾಮೆರಾ,AI ಟೂಲ್ಸ್ ಜೊತೆ ಸುದೀರ್ಘ ಸಮಯದ ಬ್ಯಾಟರಿ ಸ್ಮಾರ್ಟ್‌ಫೋನ್