ರೋಗಗ್ರಸ್ತ ಕಾರ್ಖಾನೆ ಖರೀದಿಸಿ ಲಾಭದತ್ತ ತಿರುಗಿಸಿದ್ದ ಸಿದ್ಧಾರ್ಥ

By Web DeskFirst Published Jul 31, 2019, 3:25 PM IST
Highlights

ಕಾಫಿ ಉದ್ಯಮ ಕ್ಷೇತ್ರದ ದೊರೆ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿ ಸಾವಿರಾರು ಕೋಟಿ ಸಾಮ್ರಾಜ್ಯ ಬಿಟ್ಟು ತೆರಳಿದ್ದಾರೆ. ಬೃಹತ್ ಸಾಮ್ರಜ್ಯ ಕಟ್ಟು ಹಿಂದೆ ಅನೇಕ ರೀತಿಯ ಪರಿಶ್ರಮವಿದೆ. ಅದರಲ್ಲೊಂದು ವಿಚಾರ ಇಲ್ಲಿದೆ. 

ಬೆಂಗಳೂರು [ಜು.31]: ಕಾಫಿ ಸಾಮ್ರಾಜ್ಯದ ಒಡೆಯ ಸಿದ್ಧಾರ್ಥ ಅವರು ತಮ್ಮ ಬೃಹತ್ ಸಾಮ್ರಾಜ್ಯವನ್ನು ಬಿಟ್ಟು ತೆರಳಿದ್ದಾರೆ. ನೇತ್ರಾವತಿಯಲ್ಲಿ ತಮ್ಮ ಜೀವನ ಕೊನೆಗೊಳಿಸಿದ್ದಾರೆ. 

ಈ ಸಾವಿರಾರು ಕೋಟಿ ಒಡೆಯ ನಷ್ಟದಲ್ಲಿದ್ದ ಕಂಪನಿಯೊಂದನ್ನು ಭಾರೀ ಲಾಭದತ್ತ ಕೊಂಡೊಯ್ದಿದ್ದರು. ಸಣ್ಣ ಉದ್ಯಮಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸುವ ಬುದ್ದಿವಂತಿಕೆಯು ಇವರ ಬಳಿ ಇತ್ತು.  ಹಿಂದೆಲ್ಲಾ ಕಾಫಿ ಬೆಳೆಗಾರರು ತಾವು ಬೆಳೆದ ಬಹುತೇಕ ಉತ್ಪನ್ನವನ್ನು ಕಾಫಿ ಮಂಡಳಿಗೇ ಮಾರಬೇಕಿತ್ತು. 1993ರ ಉದಾರೀಕರಣದ ಫಲವಾಗಿ ಆ ನಿರ್ಬಂಧ ರದ್ದಾಯಿತು. 

ಕಣ್ಮರೆಯಾದ ಕಾಫಿವಾಲನಿಗೆ ಜಾಗತಿಕ ಮಾಧ್ಯಮ ಕೊಟ್ಟ ಬಿರುದು ಒಂದೋ, ಎರಡೋ...

ಅದರಿಂದ ಮೊದಲು ಪ್ರತಿಫಲ ಪಡೆದವರು ಸಿದ್ಧಾರ್ಥ. ತಡಮಾಡದೇ ಅಮಾಲ್ಗಮೇಟೆಡ್‌ ಬೀನ್‌ ಕಾಫಿ (ಎಬಿಸಿ) ಎಂಬ ಕಂಪನಿ ಹುಟ್ಟು ಹಾಕಿದರು. ಆ ಕಾಲಕ್ಕೆ ಕಂಪನಿಯ ವಾರ್ಷಿಕ ಆದಾಯ 6 ಕೋಟಿ ರು. ಇತ್ತು. ಹಾಸನದ ಕಾಫಿ ಕ್ಯೂರಿಂಗ್‌ ಘಟಕವೊಂದು ಭಾರಿ ನಷ್ಟದಲ್ಲಿತ್ತು.

'ಧಣಿ'ಯನ್ನು ಕೊನೆಯ ಬಾರಿ ನೋಡಲು ಸಾಲು ನಿಂತ ಕಾಫಿನಾಡಿನ ಜನ, ಚಿಕ್ಕಮಗಳೂರು ಬಂದ್!

 4 ಕೋಟಿ ರು.ಗೆ ಅದನ್ನು ಖರೀದಿಸಿದ ಸಿದ್ಧಾರ್ಥ ಅದನ್ನು ಲಾಭದ ಹಳಿಗೆ ತಂದರು. ಬಳಿಕ ದೇಶದ ಅತಿದೊಡ್ಡ ಕಾಫಿ ಕ್ಯೂರಿಂಗ್‌ ಕೇಂದ್ರವಾಗಿ ಪರಿವರ್ತಿಸಿದರು. ಸಿದ್ಧಾರ್ಥ ಅವರ ಬಳಿ ಈ 12000 ಎಕರೆಗಿಂತಲೂ ಅಧಿಕ ಕಾಫಿ ತೋಟವಿದೆ.

click me!