
ಬೆಂಗಳೂರು(ಸೆ.25): ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಐಟಿ ಅಧಿಕಾರಿ ಪುತ್ರ ಶರತ್ ಕೊಲೆ ಸೀಕ್ರೆಟ್ ಔಟಾಗಿದೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್ ಹತ್ಯೆಯ ಹಿಂದಿನ ಕರಾಳ ಸತ್ಯಗಳನ್ನ ಹೊರ ಹಾಕಿದ್ದಾರೆ.
ಶರತ್ ಹತ್ಯೆಗೆ ಹಂತಕರು ಒಂದು ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ರು. ಈ ಕಟು ಸತ್ಯವನ್ನ ಕೊಲೆಗಡುಕ ವಿಶಾಲ್ ಹಾಗೂ ಆತನ ತಂಡದವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಶರತ್ ನನ್ನ ಕಿಡ್ನಾಪ್ ಮಾಡಲು ವಿಶಾಲ್ ಅಂಡ್ ಟೀಂ ತಿಂಗಳ ಹಿಂದೆಯೇ ಬಾರ್ನಲ್ಲಿ ಎರಡು ಬಾರಿ ಮೀಟಿಂಗ್ ನಡೆಸಿದ್ದಾರೆ. ಶರತ್ ನನ್ನ ಕಿಡ್ನಾಪ್ ಮಾಡಿದ್ದ ದಿನವೇ ಕಿಡ್ನಾರ್ಪಾಸ್ ಶರತ್ನ ತಂದೆ ಮತ್ತು ಅಕ್ಕನ ಮೊಬೈಲ್ ಗೆ ಮೆಸೇಜ್ ಕಳುಹಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು. ತಕ್ಷಣ ಶರತ್ ತಂದೆ ನಿರಂಜನ್ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಕೇಸ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ತಂತೆ ಕಿಡ್ನಾಪ್ ಮಾಸ್ಟರ್ ಮೈಂಡ್ ವಿಶಾಲ್ ತನ್ನ ಟೀಂ ಗೆ ಶರತ್ನನ್ನು ಕೊಲೆ ಮಾಡುವಂತೆ ತಿಳಿಸಿದ್ದಾನೆ. ಅದೇ ವೇಳೆಗೆ ಪೊಲೀಸರು ಕೂಡ ನಿರಂಜನ್ ಮೊಬೈಲ್ನಿಂದ 10 ಲಕ್ಷ ಕೋಡುತ್ತೇವೆ ಬಿಟ್ಟುಬಿಡಿ ಎಂದು ಮೇಸೆಜ್ ಕಳಿಸಿದ್ದಾರೆ. ಆದ್ರೆ ಪೊಲೀಸರ ಮೇಸೆಜ್ ಹಂತಕರಿಗೆ ತಲುಪವಷ್ಟರಲ್ಲೇ ಶರತ್ ಕೊಲೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.