ಎಸ್.ಎಂ.ಕೃಷ್ಣ ಅಳಿಯನ ಬಳಿ 650 ಕೋಟಿ ಅಘೋಷಿತ ಆಸ್ತಿ ಪತ್ತೆ?: ಸತತ 4 ದಿನಗಳ ಬಳಿಕ ಐಟಿ ದಾಳಿ ಅಂತ್ಯ

Published : Sep 25, 2017, 08:43 AM ISTUpdated : Apr 11, 2018, 01:10 PM IST
ಎಸ್.ಎಂ.ಕೃಷ್ಣ ಅಳಿಯನ ಬಳಿ 650 ಕೋಟಿ ಅಘೋಷಿತ ಆಸ್ತಿ ಪತ್ತೆ?: ಸತತ 4 ದಿನಗಳ ಬಳಿಕ ಐಟಿ ದಾಳಿ ಅಂತ್ಯ

ಸಾರಾಂಶ

ಮಾಜಿ ಸಿಎಂ, ಎಸ್​​ಎಂ ಕೃಷ್ಣ ಅಳಿಯ  ಸಿದ್ಧಾರ್ಥ್​​ ಮನೆ ಮತ್ತು ಕಂಪನಿಗಳ ಮೇಲೆ ಸತತ 4 ದಿನಗಳಿಂದ ನಡೆಯುತ್ತಿದ್ದ ಐಟಿ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ.  ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿವೆ.

ಬೆಂಗಳೂರು(ಸೆ.25): ಮಾಜಿ ಸಿಎಂ, ಎಸ್​​ಎಂ ಕೃಷ್ಣ ಅಳಿಯ  ಸಿದ್ಧಾರ್ಥ್​​ ಮನೆ ಮತ್ತು ಕಂಪನಿಗಳ ಮೇಲೆ ಸತತ 4 ದಿನಗಳಿಂದ ನಡೆಯುತ್ತಿದ್ದ ಐಟಿ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ.  ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿವೆ.

ಈ ಹಿಂದೆ ಸಿದ್ಧಾರ್ಥ್​​ 650 ಕೋಟಿ ಆಸ್ತಿಯನ್ನ ಘೋಷಿಸಿಕೊಂಡಿದ್ರು, ಆದ್ರೆ  ಘೋಷಿಸಿಕೊಂಡಿದ್ದ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ದಾಖಲೆ ಪತ್ರಗಳನ್ನ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇನ್ನು ಸಿದ್ಧಾರ್ಥ್​ ಒಡೆತನದ ಕಾಫೀ ಡೇ ಸೇರಿದಂತೆ ಹಲವು  ಕಂಪನಿಗಳು ನಿಯಮ ಮೀರಿ ಆಕ್ರಮ ಹಣ ವರ್ಗಾವಣೆ ಮಾಡಿರುವ ದಾಖಲೆಗಳು ಸಿಕ್ಕಿವೆ.

ಈ ಹಿನ್ನೆಲೆ ಆಕ್ರಮ ಆಸ್ತಿ ಕಾಯ್ದೆಯಡಿ  ಸಿದ್ಧಾರ್ಥ್​​ಗೆ ಐಟಿ ಇಲಾಖೆ ನಾಳೆ ಸಮನ್ಸ್​ ನೀಡುವ ಸಾಧ್ಯತೆಯಿದ್ದು, ಜಾರಿ ನಿರ್ದೇಶನಲಾಯದ ಅಧಿಕಾರಿಗಳು ಕೂಡ ಸಿದ್ಧಾರ್ಥ್​ ವಿಚಾರಣೆಗೆ ಒಳಪಡಿಸುವ  ಸಾದ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!