
ಹುಬ್ಬಳ್ಳಿ(ಸೆ.25): ಈ ಪೋಟೋದಲ್ಲಿರುವ ಇವನ ಹೆಸರು ಸಿ.ಎಚ್. ಮಾವಿನತೋಪ್. ನಿನ್ನೆ ಮೊನ್ನೆಯಷ್ಟೇ ಹುಬ್ಬಳ್ಳಿ ವಲಯ ಅರಣ್ಯಾಧಿಕಾರಿಯಗಿದ್ದ ಈತ ಅರಣ್ಯ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ನಗರ ಹಸಿರೀಕರಣ ಯೋಜನೆ, ಕೆರೆಗಳ ಅಭಿವೃದ್ಧಿ, ವಾಚರ್ ನೇಮಕ ಸೇರಿದಂತೆ ಹಲವು ಯೋಜನೆಗಳಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾನೆ. ಈ ಬ್ರಹ್ಮಾಂಡ ಭ್ರಷ್ಟಾಚಾರ ದಾಖಲೆ ಸಮೇತ ಬಯಲಾಗುತ್ತಿದ್ದಂತೆ, ಬೀಜ ನಿಗಮಕ್ಕೆ ಎರವಲು ಸೇವೆ ಮೇಲೆ ತೆರಳಿದ್ದಾರೆ.
ಈ ಅಧಿಕಾರಿ ನಡೆಸಿರುವ ಭ್ರಷ್ಟಾಚಾರ ಒಂದೆರಡಲ್ಲ. ಈ ಭ್ರಷ್ಟ ಅಧಿಕಾರಿಯ ವಿರುದ್ಧ ಮಾಹಿತಿ ಹಕ್ಕು ಹೋರಾಟಗಾರ ಮಂಜುನಾಥ್ ಬದ್ದಿ ಅರಣ್ಯ ಇಲಾಖೆಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ತನಿಖೆಯಲ್ಲಿ ಅಕ್ರಮ ಸಾಬೀತಾಗಿದ್ರೂ ಯಾವುದೇ ಕ್ರಮ ಜರುಗಿಲ್ಲ.
ಇನ್ನು ದೂರುದಾರ ಸ್ವತಃ ಅರಣ್ಯ ಸಚಿವ ರಾಮನಾಥ ರೈ ಅವರಿಗೆ 10ಕ್ಕೂ ಹೆಚ್ವು ಬಾರಿ ದೂರು ನೀಡಿದ್ದಾರೆ. ಆದ್ರೆ ಸಚಿವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೇ ಭ್ರಷ್ಟ ಅಧಿಕಾರಿಯ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಅರಣ್ಯ ಅಧಿಕಾರಿ ಕೋಟ್ಯಾಂತರ ರೂಪಾಯಿ ನುಂಗಿ ನೀರು ಕುಡಿದಿದ್ದೂ ಸಾಭೀತಾಗಿದ್ರೂ ಕ್ರಮ ಕೈಗೊಳ್ಳದನ್ನು ನೋಡಿದ್ರೆ ಇದರಲ್ಲಿ ಸಚಿವರ ಪಾಲು ಇದೆಯೋ ಎಂಬ ಅನುಮಾನ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.