‘ಸೆಕ್ಸ್ ವರ್ಕ್ ಮಾಡೋದು ನಮ್ಮಿಷ್ಟ, ಅದು ನಮ್ಮ ಅಸ್ಮಿತೆ; ದಮನಿತರೆಂದು ಕರೆಯಬೇಡಿ’

Published : Jun 26, 2018, 02:08 PM IST
‘ಸೆಕ್ಸ್ ವರ್ಕ್ ಮಾಡೋದು ನಮ್ಮಿಷ್ಟ, ಅದು ನಮ್ಮ ಅಸ್ಮಿತೆ; ದಮನಿತರೆಂದು ಕರೆಯಬೇಡಿ’

ಸಾರಾಂಶ

ನಾವು ಲೈಂಗಿಕ ಕಾರ್ಮಿಕರು; ನಮ್ಮ ಅಸ್ಮಿತೆಯನ್ನುಕದಿಯಬೇಡಿ ! ನೀವು ನಮ್ಮನ್ನು ಬೆಂಬಲಿಸಲುಬದ್ಧರಾಗಿದ್ದರೆ, ಲೈಂಗಿಕ ವೃತ್ತಿಯನ್ನು ನಿರಪರಾಧಿಕರಣಗೂಳಿಸಿ !!

ಬೆಂಗಳೂರು : ಲೈಂಗಿಕ ಕಾರ್ಮಿಕರನ್ನು‘ದಮನಿತ ಮಹಿಳೆಯರು’ಎಂದು ಕರೆಯಬೇಕು ಎಂಬ  ನೂತನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ  ಜಯಮಾಲಾರ ಹೇಳಿಕೆಗೆ ಲೈಂಗಿಕ ಕಾರ್ಮಿಕರಿಂದ ವಿರೋಧ ವ್ಯಕ್ತವಾಗಿದೆ. 

‘ಜಯಮಾಲಾರ ಹೇಳಿಕೆಯನ್ನು ನಾವು ನಿಸ್ಸಂದಿಗ್ದವಾಗಿ ಖಂಡಿಸುತ್ತೇವೆ,’ ಎಂದು ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್ (Karnataka Sex Workers Union) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜಯಮಾಲಾ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಅದು ಆಗ್ರಹಿಸಿದೆ.

‘ನಮಗೆ ಕರುಣೆ, ಅನುಕಂಪ ಬೇಡ,  ಘನತೆ ಮತ್ತು ಹಕ್ಕುಗಳು ಬೇಕು’ ಎಂದಿರುವ ಲೈಂಗಿಕ ಕಾರ್ಮಿಕರು, ಭಾರತದ ಸರ್ವೋಚ್ಛನ್ಯಾಯಾಲಯವು ರಚಿಸಿದ ಮಂಡಳಿ ಮತ್ತು ಹಲವಾರು ಅಂತರಾಷ್ಟ್ರೀಯ ಆಯೋಗಗಳು ಲೈಂಗಿಕ ಕಾರ್ಮಿಕರ ಹಕ್ಕುಗಳಗೆ ಮಾನ್ಯತೆ ನೀಡಿವೆ.  ನಾವು ಲೈಂಗಿಕ ವೃತ್ತಿ ಘನತೆವೆತ್ತಕಾರ್ಯವೆಂದುಪ್ರತಿಪಾದಿಸುತ್ತೇವೆ, ಎಂದು ಸಂಘಟನೆಯು ಹೇಳಿದೆ.

ಸೆಕ್ಸ್ ವರ್ಕರ್ಸ್‌ಗಳ ಬೇಡಿಕೆಗಳು

  • ಕರ್ನಾಟಕ ರಾಜ್ಯದಲ್ಲಿ ಲೈಂಗಿಕ ವೃತ್ತಿಯನ್ನು ನಿರಪರಾಧಿಕರಣಗೊಳಿಸಿ
  • ವಸತಿ, ಜೀವನೋಪಾಯ, ಆರೋಗ್ಯ, ಸಾಮಾಜಿಕ ಸೌಲಭ್ಯಗಳು ಹಾಗೂ ಮಕ್ಕಳಿಗೆ ಶಿಕ್ಷಣ ಕಲ್ಪಿಸಿ; ತಾರತಮ್ಯ ನಿಲ್ಲಿಸಿ.
  • ಲೈಂಗಿಕ ಕಾರ್ಮಿಕರ ಹಕ್ಕುಗಳಿಗೆ ಬೆಂಬಲವನ್ನುಖಚಿತಪಡಿಸಿ 
  • ಲೈಂಗಿಕ ಕಾರ್ಮಿಕರ ಮೇಲಾಗುವ  ಹಿಂಸೆ/ದೌರ್ಜನ್ಯ ತಡೆಗಟ್ಟಲು  ಸೂಕ್ತ/ತ್ವರಿತ ಕ್ರಮ ತೆಗೆದುಕೊಳ್ಳಿ

ಸಚಿವರ ಈ ಹೇಳಿಕೆಯು ನಮ್ಮನ್ನು ಅಗೋಚರವಾಗಿಸುತ್ತದೆ ಮತ್ತು ನಮ್ಮ ಅಸ್ಮಿತೆಯ, ಸ್ವಯಂ ಗುರುತಿಸುವಿಕೆಯ ಮತ್ತು ಸ್ವಯಂ ನಿರ್ಧಾರದ ಹಕ್ಕುಗಳನ್ನುನಿರಾಕರಿಸುತ್ತದೆ. ಘನತೆ, ಸುರಕ್ಷೆತೆ ಮತ್ತು ನ್ಯಾಯಕ್ಕಾಗಿ ದಶಕಗಳ ನಮ್ಮ ಹೋರಾಟಗಳನ್ನು ಕಡೆಗಣಿಸಿದೆ, ಎಂದು ಯೂನಿಯನ್ ಅಭಿಪ್ರಾಯಪಟ್ಟಿದೆ.

ಈಗಾಗಲೇ ನಾವು ಸಾಕಷ್ಟು ಬಾರಿ ತಿಳಿಸಿದಂತೆ, ಹಲವಾರು ಮಹಿಳೆಯರು, ಪುರುಷರು ಮತ್ತು ಟ್ರಾನ್ಸ್ ಜಂಡರ್ ಗಳು ಸ್ವಯಿಚ್ಚೆಯಿಂದ ಲೈಂಗಿಕ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ಈ ವಾಸ್ತವವನ್ನುಗೌರವಿಸಬೇಕು. ಹಲವಾರು ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ನಡೆಸುವ‘ದಾಳಿ ಮತ್ತು ರಕ್ಷಣೆ’ (Raid and Rescue) ಕಾರ್ಯತಂತ್ರ ಮತ್ತು ‘ಪುನರ್ವಸತಿ’ ಪ್ರಕ್ರಿಯೆಯಿಂದ ಲೈಂಗಿಕ ಕಾರ್ಮಿಕರ ಸಮುದಾಯಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತಿವೆ. ಈ ಸಂದರ್ಭದಲ್ಲಿ ನಮಗೆ ‘ದಮನಿತ ಮಹಿಳೆಯರು’ ಎಂದು ಹಣೆಪಟ್ಟಿಕಟ್ಟುವುದುರಿಂದ ನಮ್ಮ ವಿರುದ್ಡ ಕಳಂಕ ಹಾಗೂ ತಾರತಮ್ಯ ಹೆಚ್ಚುತ್ತವೆ, ಎಂದು ಸಂಸ್ಥೆಯು ವಾದಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ