ಮೋದಿ ಎದುರಿಸುವ ಶಕ್ತಿ ಇರೋದು ಸಿದ್ದರಾಮಯ್ಯಗೆ ಮಾತ್ರ!

Published : Jun 26, 2018, 02:00 PM IST
ಮೋದಿ ಎದುರಿಸುವ ಶಕ್ತಿ ಇರೋದು ಸಿದ್ದರಾಮಯ್ಯಗೆ ಮಾತ್ರ!

ಸಾರಾಂಶ

ಕಾಂಗ್ರೆಸ್‌ನ 80 ಶಾಸಕರಿದ್ದರೂ ಜೆಡಿ ಎಸ್ನವರನ್ನು ಮುಖ್ಯಮಂತ್ರಿ ಮಾಡಲಾ ಗಿದೆ. ಹಾಗಾಗಿ ಜೆಡಿಎಸ್  ನಾಯಕರು ಸೋತಿದ್ದರೂ ಇಸ್ತ್ರೀ ಮಾಡಿದ ಬಟ್ಟೆ ಹಾಕಿ ಮಿಂಚುತ್ತಿದ್ದಾರೆ. ನಾವು ಗೆದ್ದಿದ್ದರೂ ಮುಖ್ಯಮಂತ್ರಿ ನಮ್ಮವರಲ್ಲದ ಕಾರಣ ಮಾನಸಿ ಕವಾಗಿ ಕುಗ್ಗಿದ್ದೇವೆ. ಆದರೆ ಅದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ಸರ್ಕಾರಕ್ಕೆ ಅಪಾಯ ತಪ್ಪಿದ್ದಲ್ಲ. 

ಚಿಕ್ಕಬಳ್ಳಾಪುರ (ಜೂ. 26): ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ಇರುವುದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಮಾತ್ರ. ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ತೊಂದರೆಯಾದರೆ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್‌ನ 80 ಶಾಸಕರಿದ್ದರೂ ಜೆಡಿ ಎಸ್ನವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಹಾಗಾಗಿ ಜೆಡಿಎಸ್ ನಾಯಕರು ಸೋತಿದ್ದರೂ ಇಸ್ತ್ರೀ ಮಾಡಿದ ಬಟ್ಟೆ ಹಾಕಿ ಮಿಂಚುತ್ತಿದ್ದಾರೆ. ನಾವು ಗೆದ್ದಿದ್ದರೂ ಮುಖ್ಯಮಂತ್ರಿ ನಮ್ಮವರಲ್ಲದ ಕಾರಣ ಮಾನಸಿ ಕವಾಗಿ ಕುಗ್ಗಿದ್ದೇವೆ. ಆದರೆ ಅದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ಸರ್ಕಾರಕ್ಕೆ ಅಪಾಯ ತಪ್ಪಿದ್ದಲ್ಲ, ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಗಮನ ಹರಿಸಬೇಕೆಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ