
ಪಟನಾ: ಬಿಹಾರಕ್ಕೆ ಸಂಬಂಧಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದುದಕ್ಕಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾ. ಮಾರ್ಕಾಂಡೇಯ ಕಾಟ್ಜು ವಿರುದ್ಧ ಹಲವೆಡೆ ದೇಶದ್ರೋಹ ದೂರು ದಾಖಲಿಲಾಗಿದೆ. ಪಾಕಿಸ್ತಾನಕ್ಕೆ ಬಿಹಾರವನ್ನೂ ತೆಗೆದುಕೊಳ್ಳುವ ಷರತ್ತಿನ ಮೇರೆಗೆ ಕಾಶ್ಮೀರವನ್ನು ನೀಡಬಹುದು ಎಂದು ನ್ಯಾ. ಕಾಟ್ಜು ತಿಳಿಸಿದ್ದರು. ಮಂಗಳವಾರ ಜೆಡಿಯು ಎಂಎಲ್ಸಿ, ವಕ್ತಾರ ನೀರಜ್ ಕುಮಾರ್ ದೂರು ದಾಖಲಿಸಿದ್ದಾರೆ. ಬುಧವಾರ ಮತ್ತೆ ಕಾಟ್ಜು ವಿರುದ್ಧ ಇನ್ನಷ್ಟು ಆನ್'ಲೈನ್ ಪೋಸ್ಟ್'ಗಳಿಗಾಗಿ ದೂರು ದಾಖಲಾಗಿದೆ. ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ನ್ಯಾ. ಕಾಟ್ಜು ವಿರುದ್ಧ ದೂರು ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಪಟನಾ ಸಿಜೆಎಂ ಕೋರ್ಟ್ನಲ್ಲಿ ನ್ಯಾಯವಾದಿ ಅರವಿಂದ ಕುಮಾರ್ ಎಂಬವರೂ ದೂರು ದಾಖಲಿಸಿದ್ದಾರೆ.
(ಕೃಪೆ: ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.