
ಬೆಂಗಳೂರು(ಸೆ.29): ಪಾಸ್ ವಿಚಾರಕ್ಕೆ ಲೇಡಿ ಕಂಡಕ್ಟರ್ ಒಬ್ಬಳು ವಿದ್ಯಾರ್ಥಿಯೊಬ್ಬನ ಜೊತೆ ಜಗಳವಾಡಿ ಕಚ್ಚಿದ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.
ಜಾಲಹಳ್ಳಿ ಇಂದ ಕೆ ಆರ್ ಪುರಂ ಬಸ್ ಮಾರ್ಗದಲ್ಲಿ ಈ ಘಟನೆ ಸಂಭವಿಸಿದ್ದು, ಬಿಎಂಟಿಸಿ ಬಸ್ ಲೇಡಿ ಕಂಡಕ್ಟರ್ ಪಾಸ್ ವಿಷಯಕ್ಕೆ ಕಿರಿಕ್ ಮಾಡಿದ್ದಲ್ಲೇ, ವಿದ್ಯಾರ್ಥಿನಿಯ ಕೈ ಕಚ್ಚಿ ಗಾಯಗೊಳಿಸಿದ್ದಾಳೆ.
ನಂತರ ನೆರೆದಿದ್ದ ಜನರೊಂದಿಗೆ ಬೀದಿ ರಂಪ ಮಾಡಿದಲ್ಲದೆ . ಅಲ್ಲಿಗೆ ಬಂದ ಟ್ರಾಫಿಕ್ ಪೊಲೀಸರ ಜೊತೆಯೂ ಗಲಾಟೆಗಿಳಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಲೇಡಿ ಕಂಡಕ್ಟರ್ ಸಹ ಹಲ್ಲೆಗೆ ಗುರಿಯಾಗಿ ನೆಲಕ್ಕೆ ಬಿದ್ದಿದ್ದಾರೆ.
ಇನ್ನು ಈ ಪ್ರಕರಣ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಿಚಾರಣೆಗಾಗಿ ಲೇಡಿ ಕಂಡಕ್ಟರ್ ಮತ್ತು ವಿದ್ಯಾರ್ಥಿನಿಯನ್ನು ಇಬ್ಬರನ್ನೂ ಪೊಲೀಸರು ಕರದೊಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.