ಬೆಂಗಳೂರು(ಸೆ.29): ಪಾಸ್ ವಿಚಾರಕ್ಕೆ ಲೇಡಿ ಕಂಡಕ್ಟರ್ ಒಬ್ಬಳು ವಿದ್ಯಾರ್ಥಿಯೊಬ್ಬನ ಜೊತೆ ಜಗಳವಾಡಿ ಕಚ್ಚಿದ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.
ಜಾಲಹಳ್ಳಿ ಇಂದ ಕೆ ಆರ್ ಪುರಂ ಬಸ್ ಮಾರ್ಗದಲ್ಲಿ ಈ ಘಟನೆ ಸಂಭವಿಸಿದ್ದು, ಬಿಎಂಟಿಸಿ ಬಸ್ ಲೇಡಿ ಕಂಡಕ್ಟರ್ ಪಾಸ್ ವಿಷಯಕ್ಕೆ ಕಿರಿಕ್ ಮಾಡಿದ್ದಲ್ಲೇ, ವಿದ್ಯಾರ್ಥಿನಿಯ ಕೈ ಕಚ್ಚಿ ಗಾಯಗೊಳಿಸಿದ್ದಾಳೆ.
ನಂತರ ನೆರೆದಿದ್ದ ಜನರೊಂದಿಗೆ ಬೀದಿ ರಂಪ ಮಾಡಿದಲ್ಲದೆ . ಅಲ್ಲಿಗೆ ಬಂದ ಟ್ರಾಫಿಕ್ ಪೊಲೀಸರ ಜೊತೆಯೂ ಗಲಾಟೆಗಿಳಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಲೇಡಿ ಕಂಡಕ್ಟರ್ ಸಹ ಹಲ್ಲೆಗೆ ಗುರಿಯಾಗಿ ನೆಲಕ್ಕೆ ಬಿದ್ದಿದ್ದಾರೆ.
ಇನ್ನು ಈ ಪ್ರಕರಣ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಿಚಾರಣೆಗಾಗಿ ಲೇಡಿ ಕಂಡಕ್ಟರ್ ಮತ್ತು ವಿದ್ಯಾರ್ಥಿನಿಯನ್ನು ಇಬ್ಬರನ್ನೂ ಪೊಲೀಸರು ಕರದೊಯ್ದಿದ್ದಾರೆ.