'ರಾವಣನ ಲಂಕೆಯಲ್ಲಿಯೇ ಬುರ್ಖಾ ಬ್ಯಾನ್ ಆಗೋದಾದ್ರೆ ರಾಮನ ಅಯೋಧ್ಯೆಯಲ್ಲಿ ಯಾಕಿಲ್ಲ?'

Published : May 01, 2019, 04:09 PM ISTUpdated : May 01, 2019, 04:12 PM IST
'ರಾವಣನ ಲಂಕೆಯಲ್ಲಿಯೇ ಬುರ್ಖಾ ಬ್ಯಾನ್ ಆಗೋದಾದ್ರೆ ರಾಮನ ಅಯೋಧ್ಯೆಯಲ್ಲಿ ಯಾಕಿಲ್ಲ?'

ಸಾರಾಂಶ

ಬಿಜೆಪಿಯೊಂದಿಗೆ ದೋಸ್ತಿ ಮಾಡಿಕೊಂಡು ಲೋಕ ಸಮರಕ್ಕೆ ಧುಮುಕಿರುವ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬುರ್ಖಾ ವಿಚಾರವನ್ನು ಎತ್ತಿಕೊಂಡಿದ್ದು ಅದಕ್ಕೆ ರಾಮಾಯಣದ ಲಿಂಕ್ ನೀಡಿದೆ.

ಮುಂಬೈ(ಮಾ. 01)  ಶಿವಸೇನೆ ತನ್ನಮುಖವಾಣಿ ಸಾಮ್ನಾದಲ್ಲಿ ಈ ಸಾರಿ ಬುರ್ಖಾ ನಿಷೇಧದ ವಿಚಾರವನ್ನು ಬರೆದುಕೊಂಡಿದೆ.  'ರಾವಣನ ರಾಜ್ಯ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ ಮಾಡಲು ಸಾಧ್ಯವಿದ್ದರೆ ರಾಮ ರಾಜ್ಯದ ಅಯೋಧ್ಯೆಯಲ್ಲಿ ಯಾವಾಗ?  ಎಂದು ಪ್ರಶ್ನೆ ಮಾಡಿದೆ. ಶ್ರೀಲಂಕಾದಲ್ಲಿ ತೆಗೆದುಕೊಂಡ ಕ್ರಮವನ್ನು ಪ್ರಧಾನಿ ಮೋದಿ ಅನುಸರಿಸಬೇಕು ಎಂದು ಶಿವಸೇನೆ ಹೇಳಿದೆ.

ಸರಣಿ ಬಾಂಬ್ ಬ್ಲಾಸ್ಟ್ ಗಳ ನಂತರ ಶ್ರೀಲಂಕಾದಲ್ಲಿ ಬುರ್ಖಾ ಸೇರಿದಂತೆ ಮುಖವನ್ನು ಕವರ್ ಮಾಡಿಕೊಳ್ಳುವಂತಹ ವೇಷಭೂಷಣವನ್ನು ನಿಷೇಧ ಮಾಡಲಾಗಿದೆ. 

ಲಂಕಾ ದಾಳಿ ಹಿಂದಿನ ಕಾರಣ ಬಹಿರಂಗ

ಈ ಮೊದಲು ಬಿಜೆಪಿಯೊಂದಿಗೆ ಸ್ನೇಹ ಕಳೆದುಕೊಂಡಿದ್ದ ಶಿವಸೇನೆ ನಂತರ ಲೋಕಸಮರದ ವೇಳೆ ಮೈತ್ರಿ ಮಾಡಿಕೊಂಡಿತು. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾದದಲ್ಲಿ ಬುರ್ಖಾ ನಿಷೇಧ ಮಾಡಲು ಸಾಧ್ಯವಿದೆ.  ಭಾರತದಲ್ಲಿಯೂ ಆಗಬೇಕು ಆಗ ಮಾತ್ರ ದೇಶದ ಭದ್ರತೆಗೆ ಇನ್ನು ಹೆಚ್ಚಿನ ಒತ್ತು ನೀಡಲು ಸಾಧ್ಯವಿದೆ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉ.ಕರ್ನಾಟಕ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ: ವಿಜಯೇಂದ್ರ
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌