2 ನೇ ದಿನಕ್ಕೆ ಕಾಲಿಟ್ಟ ಧರ್ಮ ಸಂಸತ್; ರಾಮ ಮಂದಿರ ನಿರ್ಮಾಣ ನಿರ್ಣಯ

Published : Nov 25, 2017, 09:06 AM ISTUpdated : Apr 11, 2018, 12:40 PM IST
2 ನೇ ದಿನಕ್ಕೆ ಕಾಲಿಟ್ಟ ಧರ್ಮ ಸಂಸತ್;  ರಾಮ ಮಂದಿರ ನಿರ್ಮಾಣ ನಿರ್ಣಯ

ಸಾರಾಂಶ

ಮೊದಲ ದಿನದ ಧರ್ಮ ಸಂಸದ್'ನ ಮೊದಲ ದಿನ ರಾಮ ಜನ್ಮಭೂಮಿಗೆ ಹಕ್ಕು ಮಂಡಿಸಲಾಗಿದೆ. ಎರಡನೇ ದಿನವೂ ಸಾಧು ಸಂತರು ಧರ್ಮ ಸಂಸದ್ ನಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಾಮ ಮಂದಿರದ ವಿಚಾರವೇ ಪ್ರಸ್ತಾಪಕ್ಕೆ ಬರುವ ಸಾಧ್ಯತೆ ಇದೆ.

ಉಡುಪಿ (ನ.25): ಮೊದಲ ದಿನದ ಧರ್ಮ ಸಂಸದ್'ನ ಮೊದಲ ದಿನ ರಾಮ ಜನ್ಮಭೂಮಿಗೆ ಹಕ್ಕು ಮಂಡಿಸಲಾಗಿದೆ. ಎರಡನೇ ದಿನವೂ ಸಾಧು ಸಂತರು ಧರ್ಮ ಸಂಸದ್ ನಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಾಮ ಮಂದಿರದ ವಿಚಾರವೇ ಪ್ರಸ್ತಾಪಕ್ಕೆ ಬರುವ ಸಾಧ್ಯತೆ ಇದೆ.

ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್​'ನ ಮೊದಲ ದಿನವಾದ ನಿನ್ನೆ  ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಣಯಕ್ಕೆ ಬರಲಾಗಿದೆ. ಎರಡನೇ ದಿನವಾದ ಇಂದೂ ಕೂಡ ಇದೇ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಅಸ್ಪೃಷ್ಯತೆ,  ಸಾಮಾಜಿಕ ಸಾಮರಸ್ಯ, ಮತಾಂತರ ತಡೆ ಮತ್ತು ಘರ್ ವಾಪಸಿ ಬಗ್ಗೆ ಚರ್ಚೆ ನಡೆಯಲಿದೆ..

ಇನ್ನೂ ರಾಮಮಂದಿರ ನಿರ್ಮಾಣ ವಿಚಾರವಾಗಿ ಶ್ರೀ ರವಿಶಂಕರ್ ಗುರೂಜಿ ಮಧ್ಯಸ್ಥಿಕೆಗೆ ಧರ್ಮ ಸಂಸದ್​ನಲ್ಲಿ ಅಸಮಧಾನ ವ್ಯಕ್ತವಾಗಿದೆ. ರಾಮಜನ್ಮಭೂಮಿ ಆಂದೋಲನದ ಭಾಗವಾಗಿಲ್ಲದ ವ್ಯಕ್ತಿಯೊಬ್ವರು ಮಧ್ಯಸ್ಥಿಕೆ ವಹಿಸೋದು ಎಷ್ಟು ಸರಿ ಅನ್ನೋ ಇಂಗಿತ ವ್ಯಕ್ತವಾಗಿದೆ.  ಕೋರ್ಟ್ ಮೂಲಕ ಇಲ್ಲವೇ ಮಾತುಕತೆಯ ವಿವಾದ ಇತ್ಯರ್ಥ ಮಾಡಿಕೊಳ್ಳಬೇಕು. ಇಲ್ಲಾ ವಿಶೇಷ ವಿಧೇಯಕ ಮಂಡಿಸಿ , 2019 ರ ವೇಳೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇ ಬೇಕು.  ಉಡುಪಿಯಿಂದಲೇ ಅಡಿಗಲ್ಲು ಹಾಕಲು ನಿರ್ಧಾರಿಸಲಾಗಿದೆ.

ಧರ್ಮ ಸಂಸದ್'​ನಲ್ಲಿ ತೆಗೆದುಕೊಂಡ ನಿರ್ಣಯ ಜಾರಿಗೆ ಪ್ರಧಾನಿ ಮೋದಿ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದ್ದು, ನಾಳೆ ನಡೆಯುವ ವಿರಾಟ್ ಹಿಂದೂ ಸಮಾವೇಶದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಲಿದ್ದಾರೆ.  ಅಂದು ಮಹತ್ವದ ಘೋಷಣೆಯಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
ನ್ಯಾಯವೂ ಹೊರಗುತ್ತಿಗೆ?: ಬೆಂಗಳೂರಿನ ಕಾನೂನು ಕೆಲಸ ಮಾಡಿದ ಮಹಾರಾಷ್ಟ್ರ ಪೊಲೀಸರು!