
ನವದೆಹಲಿ[ಜ.05]: ರಫೇಲ್ ಯುದ್ಧವಿಮಾನ ಖರೀದಿಯಂಥ ಗಂಭೀರ ವಿಷಯದ ಚರ್ಚೆ ನಡೆದಿರುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಕಣ್ಣು ಹೊಡೆದು ಮತ್ತೆ ಸುದ್ದಿಯಾಗಿದ್ದಾರೆ.
6 ತಿಂಗಳ ಹಿಂದೆ ಸಂಸತ್ ಕಲಾಪದಲ್ಲಿ ತಮ್ಮದೇ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರತ್ತ ಕಣ್ಣು ಮಿಟುಕಿಸಿ ರಾಹುಲ್ ಸುದ್ದಿಯಾಗಿದ್ದರು. ಇದು ವ್ಯಾಪಕ ಟೀಕೆ-ಟಿಪ್ಪಣಿ-ಜೋಕುಗಳಿಗೆ ನಾಂದಿ ಹಾಡಿತ್ತು.
ಶುಕ್ರವಾರ ರಫೇಲ್ ಖರೀದಿ ಚರ್ಚೆ ನಡೆದ ಸಂದರ್ಭದಲ್ಲಿ ಅಣ್ಣಾಡಿಎಂಕೆಯ ತಂಬಿದೊರೈ ಅವರು ಮಾತನಾಡುತ್ತಿದ್ದರು. ಈ ವೇಳೆ ಅವರ ಹಿಂದೆಯೇ ಕೂತಿದ್ದ ರಾಹುಲ್ ಅವರು ಯಾರೋ ಸಹೋದ್ಯೋಗಿಯತ್ತ ಮುಖ ತಿರುಕಿಸಿ ಕಣ್ಣು ಹೊಡೆದು ನಕ್ಕ ದೃಶ್ಯಗಳು ಲೋಕಸಭಾ ಟೀವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಇದಕ್ಕೆ ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಪ್ರತಿಕ್ರಿಯಿಸಿ, ‘ರಾಹುಲ್ ಯಾವತ್ತೂ ಗಂಭೀರ ವ್ಯಕ್ತಿಯಲ್ಲ ಎಂಬುದು ಇದರಿಂದ ಸಾಬೀತಾಗಿದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ