ದಾರೀಲಿ ಸಿಕ್ಕ ಬ್ಯಾಗ್‌ ಸ್ಫೋಟ: ಚಿಂದಿ ಆಯುವಾತ ಸಾವು

Published : Sep 09, 2019, 09:22 AM IST
ದಾರೀಲಿ ಸಿಕ್ಕ ಬ್ಯಾಗ್‌ ಸ್ಫೋಟ: ಚಿಂದಿ ಆಯುವಾತ ಸಾವು

ಸಾರಾಂಶ

ದಾರೀಲಿ ಸಿಕ್ಕ ಬ್ಯಾಗ್‌ ಸ್ಫೋಟ: ಚಿಂದಿ ಆಯುವಾತ ಸಾವು| ಸಂಶಾಬಾದ್‌ ವಿಮಾನ ನಿಲ್ದಾಣದ ಸಮೀಪ ಘಟನೆ

ಹೈದರಾಬಾದ್‌[ಸೆ.09]: ಚಿಂದಿ ಆಯುವಾಗ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ದಾರುಣ ಘಟನೆ ಹೈದರಾಬಾದ್‌ ಸಂಶಾಬಾದ್‌ ವಿಮಾನ ನಿಲ್ದಾಣದ ಸಮೀಪ ಭಾನುವಾರ ನಡೆದಿದೆ.

ಚಿಂದಿ ಆಯುತ್ತಿದ್ದ ಅಲಿ(40) ಎಂಬಾತನಿಗೆ ದಿನನಿತ್ಯದಂತೆ ವಿವಿಧ ಕಡೆಗಳಲ್ಲಿ ಗಜರಿ ಸಂಗ್ರಹಿಸುತ್ತಿದ್ದ ವೇಳೆ ಬ್ಯಾಗ್‌ವೊಂದು ಸಿಕ್ಕಿದೆ. ಅದರಲ್ಲೇನಿದೆ ಎಂದು ಕುತೂಹಲದಿಂದ ತೆರೆದು ನೋಡಿದಾಗ, ಅದರಲ್ಲಿದ್ದ ರಾಸಾಯನಿಕ ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ವ್ಯಕ್ತಿಯ ಕೈ ಗಂಭೀರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಿ ವಿಜ್ಞಾನ ತಜ್ಞರು ಹಾಗೂ ಶ್ವಾನ ದಳ ಸ್ಥಳಕ್ಕಾಗಮಿಸಿದ್ದು ಸ್ಥಳ ಪರೀಶಿಲನೆ ನಡೆಸಿ ವರದಿ ನೀಡಲಿದ್ದಾರೆ ಎಂದು ಸಂಶಾಬಾದ್‌ ಪೊಲೀಸ್‌ ಆಯುಕ್ತ ಪ್ರಕಾಶ್‌ ರೆಡ್ಡಿ ತಿಳಿಸಿದ್ದಾರೆ. ಅಲ್ಲದೇ ಬಾಂಬ್‌ ವದಂತಿಯನ್ನು ತಳ್ಳಿ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ