ಒಳಬಂದ ಉಗ್ರರಿಗೆ ಗುಂಡಿನ ಸ್ವಾಗತ: ಎದ್ನೊ ಬಿದ್ನೊ ಅಂತ ಓಡಿದರು ಪಾಕ್‌ನತ್ತ!

Published : Sep 27, 2019, 04:36 PM ISTUpdated : Sep 27, 2019, 05:20 PM IST
ಒಳಬಂದ ಉಗ್ರರಿಗೆ ಗುಂಡಿನ ಸ್ವಾಗತ: ಎದ್ನೊ ಬಿದ್ನೊ ಅಂತ ಓಡಿದರು ಪಾಕ್‌ನತ್ತ!

ಸಾರಾಂಶ

ಭಾರತದ ಗಡಿ ನುಸಳಲೆತ್ನಿಸಿದ ಪಾಕ್ ಉಗ್ರರು| ಭಾರತೀಯ ಯೋಧರ ಗುಂಡಿನ ದಾಳಿಗೆ ಬೆದರಿ ಕಾಲ್ಕಿತ್ತ ಉಗ್ರರು| LOC ಬಳಿಯ ಕುಪ್ವಾರಾ ಸೆಕ್ಟರ್ ಬಳಿ ಉಗ್ರರತ್ತ ಗುಂಡು ಹಾರಿಸಿದ ಯೋಧರು| ಗುಂಡಿನ ದಾಳಿಗೆ ಹೆದರಿ ಪಾಕ್ ಗಡಿಯತ್ತ ಓಡಿ ಹೋದ ಉಗ್ರರು| ಆಮಾಜಿಕ ಜಾಲತಾಣದಲ್ಲ ವೈರಲ್ ಆಗಿದೆ ಭಾರತೀಯ ಸೇನೆ ಬಿಡುಗಡೆ ಮಾಡಿರುವ ವಿಡಿಯೋ|

ಶ್ರೀನಗರ(ಸೆ.27): ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಉಗ್ರರ ಮೇಲೆ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಪ್ರಾಣ ಉಳಿಸಿಕೊಳ್ಳಲು ಉಗ್ರರು ಓಡಿ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಕುರಿತು ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದ್ದು, ಸುಮಾರು 5 ರಿಂದ 6 ಉಗ್ರರು ಏಕಕಾಲದಲ್ಲಿ ಗಡಿಯೊಳಗೆ ನುಸುಳಲು ಯತ್ನಿಸಿದ್ದುನ್ನು ಕಾಣಬಹುದಾಗಿದೆ. ಈ ವೇಳೆ ಉಗ್ರರತ್ತ ಯೋಧರು ಗುಂಡು ಹಾರಿಸಿದ್ದು, ಗುಂಡಿನ ಸದ್ದು ಕೇಳುತ್ತಿದ್ದಂತೇ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕಳೆದ ಜುಲೈ 30ರಂದು ಈ ಘಟನೆ ನಡೆದಿದ್ದು, ಅಂತಾರಾಷ್ಟ್ರೀಯ ಗಡಿ ರೇಖೆ LoC ಬಳಿಯ ಕುಪ್ವಾರಾ ವಲಯದಲ್ಲಿ ಉಗ್ರರು ನುಸುಳಲು ಮಾಡುತ್ತಿರುವ ವಿಫಲ ಪ್ರಯತ್ನ ಬೆಳಕಿಗೆ ಬಂದಿದೆ.

ಬಾಲಾಕೋಟ್ ಉಗ್ರರ ಕ್ಯಾಂಪ್ ಮತ್ತೆ ಚಟುವಟಿಕೆ ಆರಂಭಿಸಿದ್ದು, ಸುಮಾರು 400ರಿಂದ 500 ಉಗ್ರರು ತರಬೇತಿ ಪಡೆಯುತ್ತಿದ್ದಾರೆ ಎಂದು ಭಾರತೀಯ ಭೂಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದರು. ಆದರೆ ಪಾಕಿಸ್ತಾನ ರಾವತ್ ಹೇಳಿಕೆಯನ್ನು ತಿರಸ್ಕರಿಸಿತ್ತು. ಇದೀಗ ಗಡಿಯಲ್ಲಿ ಉಗ್ರರ ಒಳನುಸುಳಿವಿಕೆ ಯತ್ನ ಬಿಪಿನ್ ರಾವತ್ ಅವರ ಹೇಳಿಕೆಯನ್ನು ಸ್ಪಷ್ಟೀಕರಿಸಿದೆ.

ಸೆ.27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ
ತುರ್ತಾಗಿ ನಿಮ್ಮ ಸಹಾಯಕ್ಕೆ ಬರಬಹುದಾದ ಸರ್ಕಾರಿ ಹೆಲ್ಪ್‌ಲೈನ್‌ ನಂಬರ್‌ಗಳು!