ಸೌದಿ ರಾಜಕುಮಾರನಿಗೆ ಪಾಕ್’ನಿಂದ ಚಿನ್ನದ ರೈಫಲ್‌ ಉಡುಗೊರೆ..!

Published : Feb 22, 2019, 08:34 AM IST
ಸೌದಿ ರಾಜಕುಮಾರನಿಗೆ ಪಾಕ್’ನಿಂದ ಚಿನ್ನದ ರೈಫಲ್‌ ಉಡುಗೊರೆ..!

ಸಾರಾಂಶ

ಸೌದಿ ಅರೇಬಿಯಾದ ರಕ್ಷಣಾ ಸಚಿವರೂ ಆಗಿರುವ ಸಲ್ಮಾನ್‌, ಮೊದಲ ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನದ ಸಂಸತ್‌ ನಿಯೋಗ ಸಲ್ಮಾನ್‌ ಅವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಒಂದು ಭಾವಚಿತ್ರ ಹಾಗೂ ಚಿನ್ನ ಲೇಪಿತ ಗನ್‌ ನೀಡಿದೆ ಎಂದು ನ್ಯೂಸ್‌ ಇಂಟರ್‌ನ್ಯಾಷನಲ್‌ ವರದಿ ಮಾಡಿದೆ.

ಇಸ್ಲಾಮಾಬಾದ್‌[ಫೆ.22]: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಕಾರಣಕ್ಕಾಗಿ ಜಾಗತಿಕ ಒತ್ತಡಕ್ಕೆ ಸಿಲುಕಿರುವ ಹಾಗೂ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪಾಕಿಸ್ತಾನ, ಇತ್ತೀಚೆಗೆ ತನ್ನ ದೇಶಕ್ಕೆ ಭೇಟಿ ನೀಡಿದ್ದ ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ಗೆ ಚಿನ್ನ ಲೇಪಿತ ರೈಫಲ್‌ ಅನ್ನು ಉಡುಗೊರೆ ನೀಡಿ ಸುದ್ದಿಯಾಗಿದೆ.

ನೀವ್ ರೆಡಿ ಇದ್ರೆ ನಾವೂ ರೆಡಿ: ಇಮ್ರಾನ್ ಕೀಳು ನುಡಿ!

ಸೌದಿ ಅರೇಬಿಯಾದ ರಕ್ಷಣಾ ಸಚಿವರೂ ಆಗಿರುವ ಸಲ್ಮಾನ್‌, ಮೊದಲ ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನದ ಸಂಸತ್‌ ನಿಯೋಗ ಸಲ್ಮಾನ್‌ ಅವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಒಂದು ಭಾವಚಿತ್ರ ಹಾಗೂ ಚಿನ್ನ ಲೇಪಿತ ಗನ್‌ ನೀಡಿದೆ ಎಂದು ನ್ಯೂಸ್‌ ಇಂಟರ್‌ನ್ಯಾಷನಲ್‌ ವರದಿ ಮಾಡಿದೆ.

ಭಾರತದಲ್ಲಿ ಸೌದಿ ರಾಜಕುಮಾರ: ಮೋದಿ ಮಾತುಕತೆ ನೇರಾನೇರ!

ಜನವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸೌದಿ ರಾಜ ಕುಮಾರ ಫಹಾದ್‌ ಬಿನ್‌ ಸುಲ್ತಾನ್‌ ಬಿನ್‌ ಅಬ್ದುಲ್‌ ಅಜೀನ್‌ ಸೌದ್‌ ಅವರು ಪ್ರಧಾನಿ ಇಮ್ರಾನ್‌ ಖಾನ್‌ಗೆ ಚಿನ್ನದ ಕಲಾಶ್ನಿಕೋವ್‌ ರೈಫಲ್‌ ಹಾಗೂ ಬುಲೆಟ್‌ಗಳನ್ನು ಉಡುಗೊರೆ ನೀಡಿದ್ದರು. ಈ ಉಡುಗೊರೆ ನೀಡಿದ್ದಕ್ಕಾಗಿ ಇಮ್ರಾನ್‌ ಖಾನ್‌ ಧನ್ಯವಾದ ಅರ್ಪಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!