
ಬೆಂಗಳೂರು: ಕನ್ನಡಿಗರು ಸಂಭ್ರಮಿಸುವ ನವೆಂಬರ್ ಹಾಗೂ ಕಳೆದ ತಿಂಗಳು ಅಕ್ಟೋಬರ್ ಈ ವರ್ಷದಲ್ಲಿ ದುಃಖದ ಮಾಸವಾಗಿ ಪರಿಣಮಿಸಿವೆ. ತಿಂಗಳಿಡೀ ರಾಜ್ಯೋತ್ಸವ ಆಚರಿಸುವ ಸಂಭ್ರಮಿಸುವ ಕನ್ನಡಿಗರು ನವೆಂಬರ್ ತಿಂಗಳಲ್ಲೇ ಅನೇಕ ಗಣ್ಯರನ್ನು ಕಳೆದುಕೊಂಡಿದೆ. 25 ವರ್ಷಗಳಿಂದ ಸಂಸದರಾಗಿ, ಸಚಿವರಾಗಿ ದೆಹಲಿಯಲ್ಲಿ ರಾಜ್ಯದ ದನಿ ಎತ್ತುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಅನಂತಕುಮಾರ್ ಅವರನ್ನು ಇತ್ತೀಚೆಗೆಷ್ಟೆ ಕಳೆದುಕೊಂಡಿತು.
ಶನಿವಾರ ಬೆಂಗಳೂರಿನಲ್ಲಿ ಅನಂತಕುಮಾರ್ ಅವರ ವೈಕುಂಠ ಸಮಾರಾಧನೆ ನಡೆಯುತ್ತಿದ್ದರೆ, ಅತ್ತ ಮಂಡ್ಯದಲ್ಲಿ ಕಾಲುವೆಗೆ ಬಸ್ ಬಿದ್ದ 30 ಜನರು ಮೃತಪಟ್ಟರು. ಇಂತಹ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ನಾಡಿನ ಅಂಬರೀಶ್ ಅವರ ಹಠಾತ್ ಅಗಲಿಕೆ ನಾಡಿನ ಜನತೆಗೆ ಬಹುದೊಡ್ಡ ಶಾಕ್ ನೀಡಿದೆ.
ಕಳೆದ ತಿಂಗಳಷ್ಟೇ ಅತ್ಯಂತ ಪ್ರಗತಿಪರವಾಗಿ ಚಿಂತನೆ ಮಾಡುತ್ತಿದ್ದ ಗದಗದ ತೋಂಟದ ಸಿದ್ದಲಿಂಗ ಸ್ವಾಮಿಗಳನ್ನು ಕಳೆದುಕೊಂಡಿತ್ತು. ಇದಾದ ನಂತರ ಇನ್ನೂ ಸಾಕಷ್ಟು ರಾಜಕೀಯ ಭವಿಷ್ಯ ಕಾಣಬೇಕಿದ್ದ ಮಾಜಿ ಸಚಿವ ದಿವಂಗತ ಎಂ.ಪಿ. ಪ್ರಕಾಶ್ ಅವರ ಪುತ್ರ ಎಂ.ಪಿ.ರವೀಂದ್ರ ನಿಧನರಾಗಿದ್ದನ್ನು ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.