
ನವದೆಹಲಿ: ಅಪನಗದೀಕರಣ ನಿರ್ಧಾರಕ್ಕೆ ಕಪ್ಪು ಹಣ ಹಾಗೂ ಖೋಟಾ ನೋಟು ದಂಧೆ ಮಟ್ಟಹಾಕುವ ಕಾರಣ ನೀಡುವುದಕ್ಕೆ ಭಾರತೀಯ ರಿಸವ್ರ್ ಬ್ಯಾಂಕ್ (ಆರ್ಬಿಐ) ಆಕ್ಷೇಪ ಎತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ಬಂದಿ ನಿರ್ಧಾರ ಘೋಷಣೆ ಮಾಡುವುದಕ್ಕೆ ಕೆಲವೇ ತಾಸು ಮುನ್ನ ಈ ಕುರಿತು ತನ್ನ ಅತೃಪ್ತಿಯನ್ನು ಆರ್ಬಿಐ ತೋರ್ಪಡಿಸಿಕೊಂಡಿತ್ತು.
2016ರ ನ.8ರಂದು ಕೇಂದ್ರ ಸರ್ಕಾರ ತರಾತುರಿಯಲ್ಲಿ ಆರ್ಬಿಐನ ಕೇಂದ್ರೀಯ ಮಂಡಳಿ ಸಭೆಯನ್ನು ಕರೆದಿತ್ತು. ಆ ಸಭೆಯಲ್ಲಿ ಅಪನಗದೀಕರಣ ಎಂಬುದು ಪ್ರಶಂಸೆಯ ನಿರ್ಧಾರ ಎಂದು ಮಂಡಳಿ ಹೇಳಿತ್ತು. ಆದರೆ ಖೋಟಾನೋಟು ಹಾಗೂ ಕಾಳಧನದ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಸರ್ಕಾರದ ಸಮರ್ಥನೆಯನ್ನು ತಳ್ಳಿ ಹಾಕಿತ್ತು.
ದೇಶದಲ್ಲಿ ಬಹುತೇಕ ಕಪ್ಪು ಹಣವನ್ನು ರಿಯಲ್ ಎಸ್ಟೇಟ್ ಹಾಗೂ ಚಿನ್ನದಂತಹ ರೂಪದಲ್ಲಿ ಇಡಲಾಗಿದೆ. ಹೀಗಾಗಿ ನೋಟು ರದ್ದತಿಯಿಂದ ಅದರ ಮೇಲೆ ಹೇಳಿಕೊಳ್ಳುವಂತಹ ಪರಿಣಾಮವೇನೂ ಆಗದು. ಇನ್ನು ಖೋಟಾ ನೋಟು ದೇಶದಲ್ಲಿ ಹೆಚ್ಚೆಂದರೆ 400 ಕೋಟಿ ರು.ನಷ್ಟಿದೆ ಎಂದು ಹೇಳಿತ್ತು. ಆ ಸಭೆಯ ಟಿಪ್ಪಣಿಗಳು ತನಗೆ ಲಭ್ಯವಾಗಿವೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.
ಅಪನಗದೀಕರಣ ಎಂಬುದು ಕಪ್ಪುಹಣವನ್ನು ಬಿಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಹೂಡಿದ್ದ ತಂತ್ರ.
- ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ