Prakash Raj in Trouble: ನಟ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಇದೀಗ ಬಂಧನದ ಭೀತಿ!

Published : Jun 21, 2026, 08:58 AM ISTUpdated : Jun 21, 2026, 09:15 AM IST
Prakash Raj

ಸಾರಾಂಶ

ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಮುಂದೇನು..? ಈ ಸ್ಟೋರಿ ನೋಡಿ..

ಇತ್ತೀಚಿಗಷ್ಟೇ "ಧರ್ಮಸ್ಥಳ' ಕೇಸ್‌ಗೆ ಸಂಬಂಧಪಟ್ಟು ಸುದ್ದಿಯಾಗಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿರುವ ಆರೋಪದ ಅಡಿಯಲ್ಲಿ, ನಟ ಪ್ರಕಾಶ್​ರಾಜ್ (Prakash Raj) ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿದ್ದಾರೆ ಎಂದು ಆರೋಪಿಸಿ ದಿಲೀಪ್​ಕುಮಾರ್ ಕೇಸ್ ದಾಖಲು ಮಾಡಿದ್ದಾರೆ. ಆ ಬಳಿಕ, 48ನೇ ಎಸಿಜೆಎಂ ಕೋರ್ಟ್‌ನಿಂದ ಪ್ರಕಾಶ್​ ರಾಜ್ ವಿರುದ್ಧ NBW ಜಾರಿ ಹಾಗೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ನೀಡಲಾಗಿತ್ತು.

2 ಬಾರಿ ಸಮನ್ಸ್​ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಪ್ರಕಾಶ್​ ರಾಜ್ ಹಾಜರಾಗದ ಹಿನ್ನೆಲೆಯಲ್ಲಿ, ಇದೀಗ 3ನೇ ಬಾರಿ ಪ್ರಕಾಶ್ ರಾಜ್ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.

ನಟ ಪ್ರಕಾಶ್ ರಾಜ್ 2 ಬಾರಿ ಸಮನ್ಸ್ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಕೋರ್ಟ್‌ಗೆ ಹಾಜರಾಗಿರಲಿಲ್ಲ. 4 ರಾಜ್ಯಗಳಲ್ಲಿ, ಅಂದರೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅಕ್ರಮ ವೋಟರ್ ಐಡಿ (Voter ID) ಹೊಂದಿರುವ ಗಂಭೀರ ಆರೋಪ ಪ್ರಕಾಶ್ ರಾಜ್ ಮೇಲಿದೆ. ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿ ಒಂದೇ ಮತದಾರರ ಗುರುತಿನ ಚೀಟಿ ಹೊಂದಿರಲು ಅವಕಾಶವಿದೆ.

ಆದರೆ ನಟ ಪ್ರಕಾಶ್ ರಾಜ್ ನಾಲ್ಕು ರಾಜ್ಯಗಳಲ್ಲಿ ಮತದಾರ ಗುರುತಿನ ಚೀಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಆಗಿರುವ ಪ್ರಕಾಶ್ ರಾಜ್, ಸಮನ್ಸ್‌, ವಾರಂಟ್ ಯಾವುದಕ್ಕೂ ಕೇರ್ ಮಾಡದೇ, ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಎಸಿಜೆಎಂ ಕೋರ್ಟ್ ಗರಂ ಆಗಿದೆ ಎನ್ನಲಾಗಿದೆ.

ಹೀಗಾಗಿ, ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಪ್ರಕಾಶ್ ರಾಜ್‌ಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಸಮನ್ಸ್, ವಾರಂಟ್ ಯಾವುದಕ್ಕೂ ಹಾಜರಾಗದ ಪ್ರಕಾಶ್ ರಾಜ್ ವಿರುದ್ಧ, ಈಗ ಕಾನೂನು ಉಲ್ಲಂಘನೆ ಆರೋಪವೂ ಸೇರಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಇದೀಗ ನಟ ಪ್ರಕಾಶ್ ರಾಜ್ ಅವರಿಗೆ ಬಂಧನ ಭೀತಿ ಎದುರಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

International Yoga day: 5000 ವರ್ಷಗಳ ಇತಿಹಾಸವಿರುವ ಯೋಗದಲ್ಲಿ ಅಡಗಿದೆ ರಹಸ್ಯ, ಇದು ತಿಳಿದವರೇ ಸುಖಿ, ಆರೋಗ್ಯವಂತರು!
World Yoga day 2026: ನಿಮ್ಮೊಳಗೆ ನಿಮ್ಮನ್ನು ಸಂಪರ್ಕಿಸುವುದೇ ಯೋಗ! | ಗುರುದೇವ ಶ್ರೀ ಶ್ರೀ ರವಿ ಶಂಕರ್‌