ನಾಳೆ ನಿತೀಶ್ ವಿಶ್ವಾಸ ಮತ ಯಾಚನೆ

Published : Jul 27, 2017, 05:28 PM ISTUpdated : Apr 11, 2018, 01:10 PM IST
ನಾಳೆ ನಿತೀಶ್ ವಿಶ್ವಾಸ ಮತ ಯಾಚನೆ

ಸಾರಾಂಶ

ತೀಶ್ ಕುಮಾರ್ ನೇತೃತ್ವದ ಎನ್'ಡಿಏ ಸರ್ಕಾರ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದೆ. ವಿಧಾನಸಭೆಯ ಒಂದು ದಿನದ ವಿಶೇಷಾಧಿವೇಶನವನ್ನು ನಾಳೆ ಕರೆಯಲಾಗಿದ್ದು, ಹೊಸ ಸರ್ಕಾರವು ವಿಶ್ವಾಸ ಮತಯಾಚನೆ ಮಾಡಲಿದೆ ಎಂದು ಪ್ರಧಾನ ಸಂಪುಟ ಕಾರ್ಯದರ್ಶಿ ಬೃಜೇಶ್ ಮಹ್ರೋತ್ರಾ ಹೇಳಿದ್ದಾರೆ.

ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಎನ್'ಡಿಏ ಸರ್ಕಾರ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದೆ.

ವಿಧಾನಸಭೆಯ ಒಂದು ದಿನದ ವಿಶೇಷಾಧಿವೇಶನವನ್ನು ನಾಳೆ ಕರೆಯಲಾಗಿದ್ದು, ಹೊಸ ಸರ್ಕಾರವು ವಿಶ್ವಾಸ ಮತಯಾಚನೆ ಮಾಡಲಿದೆ ಎಂದು ಪ್ರಧಾನ ಸಂಪುಟ ಕಾರ್ಯದರ್ಶಿ ಬೃಜೇಶ್ ಮಹ್ರೋತ್ರಾ ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ-ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಜೊತೆ ನಡೆದ ಸಭೆಯಲ್ಲಿ 2 ಅಜೆಂಡಾಗಳನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಮಹಾಮೈತ್ರಿ ಸರ್ಕಾರ ಜು. 28 ರಿಂದ ಆ.03ರವರೆಗೆ ಕರೆದಿದ್ದ ವಿಧಾನ ಮಂಡಲದ ಮುಂಗಾರು ಅಧಿವೇಶನವನ್ನು ರದ್ದುಪಡಿಸುವುದು ಹಾಗೂ ವಿಶ್ವಾಸ ಮತ ಯಾಚನೆ ನಾಳಿನ ಕಲಾಪದ ಭಾಗವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ 2 ದಿನಗಳೊಳಗೆ ಬಹುಮತ ಸಾಬೀತು ಪಡಿಸುವಂತೆ ನಿತೀಶ್ ಕುಮಾರ್'ಗೆ ಸೂಚಿಸಿದ್ದರು.

ಇದೇ ವೇಳೆ ಆರ್'ಜೆಡಿ ರಾಜ್ಯಪಾಲವರ ಕ್ರಮವನ್ನು ಸುಪ್ರೀಂ ಕೋರ್ಟ್'ನಲ್ಲಿ ಪ್ರಶ್ನಿಸಲು ತಯಾರಿ ನಡೆಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ