ಲಾಲುಗೆ ಮತ್ತೆ ಸಂಕಷ್ಟ; ಎದುರಾಗಿದೆ ಹೊಸ ಭ್ರಷ್ಟಾಚಾರದ ಆರೋಪ

Published : Jul 27, 2017, 05:18 PM ISTUpdated : Apr 11, 2018, 12:43 PM IST
ಲಾಲುಗೆ ಮತ್ತೆ ಸಂಕಷ್ಟ; ಎದುರಾಗಿದೆ ಹೊಸ ಭ್ರಷ್ಟಾಚಾರದ ಆರೋಪ

ಸಾರಾಂಶ

ಲಾಲು ಪ್ರಸಾದ್ ಯಾದವ್’ಗೆ ಮತ್ತೊಮ್ಮೆ ಸಂಕಷ್ಟ ದುರಾಗಿದೆ. ರೈಲ್ವೇ ಹೋಟೆಲ್ ಹಂಚಿಕೆ ಪ್ರಕರಣದಲ್ಲಿ ಲಾಲು ಪ್ರಸಾದ್ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು ಜಾರಿ ನಿರ್ದೇಶನಾಲಯವೂ ಕೂಡಾ ತನಿಖೆಗೆ ಮುಂದಾಗಿದೆ.

ನವದೆಹಲಿ (ಜು.27): ಲಾಲು ಪ್ರಸಾದ್ ಯಾದವ್’ಗೆ ಮತ್ತೊಮ್ಮೆ ಸಂಕಷ್ಟ ದುರಾಗಿದೆ. ರೈಲ್ವೇ ಹೋಟೆಲ್ ಹಂಚಿಕೆ ಪ್ರಕರಣದಲ್ಲಿ ಲಾಲು ಪ್ರಸಾದ್ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು ಜಾರಿ ನಿರ್ದೇಶನಾಲಯವೂ ಕೂಡಾ ತನಿಖೆಗೆ ಮುಂದಾಗಿದೆ.

ಲಾಲು ಪ್ರಸಾದ್ ವಿರುದ್ಧ ಹಣದ ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆಗೆ ಮುಂದಾಗಿದೆ.

ಕಳೆದ ತಿಂಗಳು ಸಿಬಿಐ ಪಾಟ್ನಾದಲ್ಲಿರುವ ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. ಅಕ್ರಮ ಪ್ರಕರಣದಲ್ಲಿ ತೇಜಸ್ವಿ ಯಾದವ್ ಹೆಸರು ಕೇಳಿ ಬಂದಿತ್ತು. ಆಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದ್ದರು. ತೇಜಸ್ವಿ ರಾಜಿನಾಮೆ ನೀಡದಿದ್ದರಿಂದ ಕೊನೆಗೆ ನಿತೀಶ್ ಕುಮಾರ್ ನಿನ್ನೆ ಸಿಎಂ ಹುದ್ದೆಗೆ ರಾಜಿನಾಮೆ ನೀಡಿ ಇಂದು ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿದ್ದಾರೆ.

ಒಂದು ಕಡೆ ನಿತೀಶ್ ಕುಮಾರ್ ನಡೆ ಬಿಸಿ ತುಪ್ಪವಾಗಿದ್ದರೆ ಇನ್ನೊಂದು ಕಡೆ ಮತ್ತೊಮ್ಮೆ ಭ್ರಷ್ಟಾಚಾರದ ಆರೋಪ ಎದುರಾಗಿದೆ. ಹಣದ ಅವ್ಯವಹಾರ ಪ್ರಕರಣ ಲಾಲು ಕುಟುಂಬಕ್ಕೆ ಕಂಟಕವಾಗಿ ಪರಿಣಮಿಸಲಿದೆ. ಜಾರಿ ನಿರ್ದೇಶನಾಲಯ ಅವರ ವಿವಾದಾತ್ಮಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಂದಿದ್ದು, ಶೀಘ್ರದಲ್ಲಿಯೇ ತನ್ನ ಅಧಿಕಾರ ಬಳಸುವ ನಿರೀಕ್ಷೆಯಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಕಂಡೋರ ಹೆಂಡ್ತಿಯನ್ನು ಪಟಾಯಿಸಿದ ಪೊಲೀಸಪ್ಪ; ಇದು ರೀಲ್ಸ್ ಅಂಟಿಯ ಮೋಹದ ಕಥೆ
ಬೆಂಗಳೂರಿನಲ್ಲಿ ಜಿಮ್‌ಗೆ ಹೋದ್ರೆ, ಚಿಕನ್‌ ತಿಂದ್ರೆ ಮ್ಯಾನೇಜರ್‌ ನಗ್ತಾರೆ: NRI ಪೋಸ್ಟ್‌ನಿಂದ ಆಘಾತಕಾರಿ ಸತ್ಯ ಬಯಲು!